Quantcast
Channel: VijayKarnataka
Viewing all articles
Browse latest Browse all 6795

ಸಾಲ ಪಾವತಿಗೆ ಹೆಚ್ಚುವರಿ 60 ದಿನಗಳ ಗಡುವು: ಆರ್‌ಬಿಐ

$
0
0

ಮುಂಬಯಿ: ತೀವ್ರಗೊಂಡಿರುವ ನಗದು ಸಮಸ್ಯೆಯಿಂದಾಗಿ ಗೃಹ, ಕಾರು, ಕೃಷಿ ಮತ್ತು ಇತರೆ ಸಾಲಗಳ ಮರು ಪಾವತಿಗೆ ಸಾಲಗಾರರಿಗೆ ಹೆಚ್ಚುವರಿ 60 ದಿನಗಳ ಅವಧಿಯನ್ನು ವಿಸ್ತರಿಸಲಾಗಿದ್ದು, ಈ ಬಗ್ಗೆ ಆರ್‌ಬಿಐ ಸೋಮವಾರ ಸುತ್ತೋಲೆ ಹೊರಡಿಸಿದೆ.

ನವೆಂಬರ್‌ 1 ಮತ್ತು ಡಿಸೆಂಬರ್‌ 31ರ ಅವಧಿಯಲ್ಲಿ ಬಾಕಿ ಸಾಲ ಪಾವತಿಸಬೇಕಾದ ಗ್ರಾಹಕರಿಗೆ ಹೆಚ್ಚುವರಿ ಅವಧಿ ಅನ್ವಯವಾಗುತ್ತದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲಗಾರರು ಪಡೆದಿರುವ ಸುಮಾರು 1 ಕೋಟಿ ರೂ.ವರೆಗಿನ ಸಣ್ಣ ಸಾಲಗಳಿಗೆ ಹೊಸ ನಿಯಮ ಅನ್ವಯಿಸುತ್ತದೆ.

ಅಲ್ಲದೇ, ವಸೂಲಾಗದ ಸಾಲಗಳ ವಿಭಾಗದಲ್ಲಿರುವ ಸಣ್ಣ ಸುಸ್ತಿದಾರರಿಗೂ ಆರ್‌ಬಿಐನ ಹೆಚ್ಚುವರಿ ದಿನಗಳ ಗಡುವು ಅನ್ವಯವಾಗುತ್ತದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ಹೇಳಲಾಗಿದೆ.

1 ಕೋಟಿ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಓವರ್‌ ಡ್ರಾಫ್ಟ್‌ ಮತ್ತು ನಗದು ಸಾಲ, ಇಲ್ಲವೇ ಬೆಳೆ ಸಾಲಗಳನ್ನು ಪಡೆದಿರುವ ಸಾಲಗಾರರ ಮರುಪಾವತಿಗೆ ಆರ್‌ಬಿಐ ನಿಯಮದಿಂದ ಹೆಚ್ಚುವರಿ ಸಮಯ ದೊರೆದಂತೆ ಆಗಿದೆ.

ಅಲ್ಲದೇ, ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಹೌಸಿಂಗ್‌ ಫೈನಾನ್ಸ್‌ ಕಂಪನಿಗಳಿಗೆ ಬ್ಯಾಂಕ್‌ಗಳು ನೀಡಿರುವ ಸಾಲಗಳಿಗೆ, ಕೃಷಿ ಸಹಕಾರ ಮತ್ತು ರಾಜ್ಯ ಸಹಕಾರ ಬ್ಯಾಂಕ್‌ಗಳು ಜಿಲ್ಲಾ ಕೇಂದ್ರೀಯ ಸಹಕಾರ ಸಂಘಗಳಿಗೆ ನೀಡಿರುವ ಸಾಲಗಳೂ ಇದೇ ವ್ಯಾಪ್ತಿಯಲ್ಲಿ ಬರುತ್ತವೆ.

500 ಮತ್ತು 1000 ರೂ.ಗಳನ್ನು ನಿಷೇಧಿಸಿದ ಕೇಂದ್ರ ಸರಕಾರದ ಕ್ರಮದಿಂದ ಬ್ಯಾಂಕ್‌ಗಳಲ್ಲಿ ಚೆಕ್‌ಗಳ ಕ್ಲಿಯರೆನ್ಸ್‌ ಸೇರಿದಂತೆ ದೈನಂದಿನ ಚಟುವಟಿಕೆಗಳಿಗೆ ತೊಡಕಾಗಿದೆ. ಮತ್ತೊಂದು ಕಡೆ, ವಾರಕ್ಕೆ 24 ಸಾವಿರ ಹಣ ಮರುಪಡೆಯುವ ಮಿತಿ ಮತ್ತಿತರ ಕ್ರಮಗಳಿಂದ ಸಾಲಗಾರರಿಗೂ ತಮ್ಮ ಸಾಲ ಮರು ಪಾವತಿಗೆ ಕಷ್ಟವಾಗಿದೆ. ಸಾಲ ಮರುಪಾವತಿಯ ಆಯ್ಕೆಗಳು ಕಡಿಮೆಯಾಗಿದ್ದು, ಆರ್‌ಬಿಐ ಹೆಚ್ಚಿನ ಅವಧಿಯನ್ನು ನೀಡಿದೆ.

ಕ್ರೆಡಿಟ್‌ ಸ್ಕೋರ್‌ ಮೇಲೆ ಪರಿಣಾಮ

ಸಾಲಗಾರರಿಗೆ ಸಾಲ ಪಾವತಿಗೆ ಆರ್‌ಬಿಐ ಹೆಚ್ಚಿನ ಅವಧಿ ನೀಡಿದ್ದರೂ, ಇದು ಗ್ರಾಹಕರ ಕ್ರೆಡಿಟ್‌ ಸ್ಕೋರ್‌ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

-----

ಮರುಪಾವತಿಗೆ ಸಾಲಗಾರರಿಗೆ ಹೆಚ್ಚಿನ ಸಮಯ ನೀಡುವ ಆರ್‌ಬಿಐನ ಹೊಸ ಸುತ್ತೋಲೆಯು ಸ್ವಾಗತಾರ್ಹ. ನಗದು ಕೊರತೆಯಿಂದಾಗಿ ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವುದು ಅನೇಕ ಗ್ರಾಹಕರಿಗೆ ಕಷ್ಟವಾಗಿ ಪರಿಣಮಿಸಿದೆ.

-ಹರ್ಷಿಲ್‌ ಮೆಹ್ತಾ, ಡಿಎಚ್‌ಎಫ್‌ಎಲ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್