Quantcast
Channel: VijayKarnataka
Viewing all articles
Browse latest Browse all 6795

ಸಾಲ ಮರುಪಾವತಿಗೆ ತಗ್ಗಿದ ವರಿ

$
0
0

*60 ದಿನಗಳ ಹೆಚ್ಚುವರಿ ಗಡುವು ನೀಡಿದ ಆರ್‌ಬಿಐ

ಮುಂಬಯಿ: ಗರಿಷ್ಟ ಮೊತ್ತದ ನೋಟುಗಳ ಅಪಮೌಲೀಕರಣದಿಂದಾಗಿ ತೀವ್ರ ಸ್ವರೂಪ ಪಡೆದಿರುವ ನಗದು ಸಮಸ್ಯೆಯಿಂದಾಗಿ ಗೃಹ, ಕಾರು, ಕೃಷಿ ಮತ್ತು ಇತರೆ ಸಾಲಗಳನ್ನು ಮರು ಪಾವತಿ ಮಾಡಲು 60 ದಿನಗಳ ಹೆಚ್ಚುವರಿ ಅವಧಿಯನ್ನು ನೀಡಲಾಗಿದೆ. ಈ ಬಗ್ಗೆ ಆರ್‌ಬಿಐ ಸೋಮವಾರ ಸುತ್ತೋಲೆ ಹೊರಡಿಸಿದೆ.

ನವೆಂಬರ್‌ 1 ಮತ್ತು ಡಿಸೆಂಬರ್‌ 31ರ ಅವಧಿಯಲ್ಲಿ ಬಾಕಿ ಸಾಲ ಪಾವತಿಸಬೇಕಾದ ಗ್ರಾಹಕರಿಗೆ ಹೆಚ್ಚುವರಿ ಅವಧಿ ಅನ್ವಯವಾಗುತ್ತದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲಗಾರರು ಪಡೆದಿರುವ ಸುಮಾರು 1 ಕೋಟಿ ರೂ.ವರೆಗಿನ ಸಣ್ಣ ಸಾಲಗಳಿಗೆ ಹೊಸ ನಿಯಮ ಅನ್ವಯಿಸುತ್ತದೆ. ಅಲ್ಲದೇ, ವಸೂಲಾಗದ ಸಾಲಗಳ ವಿಭಾಗದಲ್ಲಿರುವ ಸಣ್ಣ ಸುಸ್ತಿದಾರರಿಗೂ ಆರ್‌ಬಿಐನ ಹೆಚ್ಚುವರಿ ದಿನಗಳ ಗಡುವು ಅನ್ವಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಹೊಸ ನಿಯಮದಿಂದ ಒಂದು ಕೋಟಿ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಓವರ್‌ ಡ್ರಾಫ್ಟ್‌ ಮತ್ತು ನಗದು ಸಾಲ, ಇಲ್ಲವೇ ಬೆಳೆ ಸಾಲಗಳನ್ನು ಪಡೆದಿರುವ ಸಾಲಗಾರರು ಮರುಪಾವತಿಗೆ ಹೆಚ್ಚುವರಿ ಸಮಯ ಪಡೆದಂತಾಗಿದೆ.

ಅಲ್ಲದೇ, ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಹೌಸಿಂಗ್‌ ಫೈನಾನ್ಸ್‌ ಕಂಪನಿಗಳಿಗೆ ಬ್ಯಾಂಕ್‌ಗಳು ನೀಡಿರುವ ಸಾಲಗಳಿಗೆ, ಕೃಷಿ ಸಹಕಾರ ಮತ್ತು ರಾಜ್ಯ ಸಹಕಾರ ಬ್ಯಾಂಕ್‌ಗಳು ಜಿಲ್ಲಾ ಕೇಂದ್ರೀಯ ಸಹಕಾರ ಸಂಘಗಳಿಗೆ ನೀಡಿರುವ ಸಾಲಗಳೂ ಇದೇ ವ್ಯಾಪ್ತಿಯಲ್ಲಿ ಬರುತ್ತವೆ.

ಕ್ಲಿಯರ್‌ ಆಗದ ಚೆಕ್‌ಗಳು:

500 ಮತ್ತು 1000 ರೂ.ಗಳನ್ನು ನಿಷೇಧಿಸಿದ ಕೇಂದ್ರ ಸರಕಾರದ ಕ್ರಮದಿಂದ ಬ್ಯಾಂಕ್‌ಗಳಲ್ಲಿ ಚೆಕ್‌ಗಳ ಕ್ಲಿಯರೆನ್ಸ್‌ ಸೇರಿದಂತೆ ದೈನಂದಿನ ಚಟುವಟಿಕೆಗಳಿಗೆ ತೊಡಕಾಗಿದೆ. ಮತ್ತೊಂದು ಕಡೆ, ವಾರಕ್ಕೆ 24 ಸಾವಿರ ಹಣ ಮರುಪಡೆಯುವ ಮಿತಿ ಮತ್ತಿತರ ಕ್ರಮಗಳಿಂದ ಸಾಲಗಾರರಿಗೂ ತಮ್ಮ ಸಾಲ ಮರು ಪಾವತಿಗೆ ಕಷ್ಟವಾಗಿದೆ. ಸಾಲ ಮರುಪಾವತಿಯ ಆಯ್ಕೆಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಹೆಚ್ಚಿನ ಅವಧಿಯನ್ನು ನೀಡಿದೆ.

ಕ್ರೆಡಿಟ್‌ ಸ್ಕೋರ್‌ ಮೇಲೆ ಪರಿಣಾಮ

ಸಾಲಗಾರರಿಗೆ ಸಾಲ ಪಾವತಿಗೆ ಆರ್‌ಬಿಐ ಹೆಚ್ಚಿನ ಅವಧಿ ನೀಡಿದ್ದರೂ, ಇದು ಗ್ರಾಹಕರ ಕ್ರೆಡಿಟ್‌ ಸ್ಕೋರ್‌ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

----

ಮರುಪಾವತಿಗೆ ಸಾಲಗಾರರಿಗೆ ಹೆಚ್ಚಿನ ಸಮಯ ನೀಡುವ ಆರ್‌ಬಿಐನ ಹೊಸ ಸುತ್ತೋಲೆಯು ಸ್ವಾಗತಾರ್ಹ. ನಗದು ಕೊರತೆಯಿಂದಾಗಿ ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವುದು ಅನೇಕ ಗ್ರಾಹಕರಿಗೆ ಕಷ್ಟವಾಗಿ ಪರಿಣಮಿಸಿತ್ತು.

-ಹರ್ಷಿಲ್‌ ಮೆಹ್ತಾ, ಡಿಎಚ್‌ಎಫ್‌ಎಲ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>