ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಸೆಕ್ಟರ್ನಲ್ಲಿ ಭಾನುವಾರ ರಾತ್ರಿ ಪಾಕಿಸ್ತಾನಿ ಪಡೆಗಳು ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಬಿಎಸ್ಎಫ್ನ ಹೆಡ್ ಕಾನ್ಸ್ಟೇಬಲ್ ರಾಯ್ ಸಿಂಗ್ ಮೃತಪಟ್ಟಿದ್ದಾರೆ. ಇನ್ನೊಬ್ಬ ಯೋಧನ ಸ್ಥಿತಿ ಗಂಭೀರವಾಗಿದೆ. ಬಿಎಸ್ಎಫ್ ಕೂಡಾ ದಿಟ್ಟ ಪ್ರತ್ಯುತ್ತರ ನೀಡುತ್ತಿದ್ದು, ಚಕಮಕಿ ಸೋಮವಾರ ಸಂಜೆವರೆಗೂ ಮುಂದುವರಿದಿದೆ. ಶನಿವಾರ ನಡೆದ ದಾಳಿಯಲ್ಲಿ ಭಾರತ ಭಾಗದ ಎರಡು ಮನೆಗಳಿಗೆ ಹಾನಿಯಾಗಿದ್ದು, ಬಿಎಸ್ಎಫ್ ಯೋಧ ಮತ್ತು ಮಹಿಳೆ ಗಾಯಗೊಂಡಿದ್ದರು. ಸೆ.29ರಂದು ನಡೆದ ಸರ್ಜಿಕಲ್ ದಾಳಿಯ ಬಳಿಕ ಪಾಕಿಸ್ತಾನದ ಕಿರಿಕಿರಿ ಹೆಚ್ಚಾಗಿದ್ದು, ಇದುವರೆಗೆ 14 ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
↧
ಗಡಿಯಲ್ಲಿ ಗುಂಡು: ಯೋಧ ಹುತಾತ್ಮ
↧