Quantcast
Channel: VijayKarnataka
Viewing all articles
Browse latest Browse all 6795

ದಿನಸಿ, ಪೀಠೋಪಕರಣ ವಲಯದತ್ತ ಫ್ಲಿಪ್‌ಕಾರ್ಟ್ ಕಣ್ಣು

$
0
0

ಎಕನಾಮಿಕ್‌ ಟೈಮ್ಸ್‌ ಬೆಂಗಳೂರು

ದಿನಸಿ, ಹಣ್ಣು ತರಕಾರಿ ಸೇರಿದಂತೆ ಕಿರಾಣಿ ಅಂಗಡಿಯಲ್ಲಿ ಸಿಗುವ ವಸ್ತುಗಳು ಈಗಾಗಲೇ ಅಮೆಜಾನ್‌ನಲ್ಲಿ ಲಭ್ಯ. ಈಗ ಇ-ಕಾಮರ್ಸ್‌ ವಲಯದ ಮತ್ತೊಂದು ಕಂಪನಿಯಾದ ಫ್ಲಿಪ್‌ಕಾರ್ಟ್‌, ದಿನಸಿ ವಲಯದತ್ತ ಕಣ್ಣಿಟ್ಟಿದೆ. ಮುಂದಿನ ದಿನಗಳಲ್ಲಿ ಈ ವಲಯಕ್ಕೆ ಮಾತ್ರವಲ್ಲದೇ, ಪೀಠೋಪಕರಣಗಳ ವ್ಯವಹಾರಕ್ಕೂ ಪ್ರವೇಶ ನೀಡಲು ಯೋಜನೆ ರೂಪಿಸಿದೆ. ಆ ಮೂಲಕ ತನ್ನ ವ್ಯಾಪ್ತಿ ವಿಸ್ತರಣೆಗೆ ಮುಂದಾಗಿದೆ.

ಇ-ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌ನ ಮುಖ್ಯಸ್ಥ ಬಿನ್ನಿ ಬನ್ಸಾಲ್‌ ಈ ಬಗ್ಗೆ ಮಾಹಿತಿ ನೀಡಿದ್ದು, ''ಮುಂದಿನ ವರ್ಷ ಆನ್‌ಲೈನ್‌ ಮೂಲಕ ದಿನಸಿ ಮಾರಾಟದ ಪ್ರಯೋಗವನ್ನು ಫ್ಲಿಪ್‌ಕಾರ್ಟ್‌ ಆರಂಭಿಸಲಿದೆ. ಮೂರು ವರ್ಷಗಳ ಅವಧಿಯಲ್ಲಿ ವ್ಯವಹಾರವನ್ನು ವೃದ್ಧಿಸುವ ಉದ್ದೇಶವಿದೆ,'' ಎಂದು ವಿವರಿಸಿದರು. ಅಲ್ಲದೇ, ''ದಿನಸಿ ವ್ಯವಹಾರದಿಂದ ಲಾಭ ಖಚಿತ. ಆದರೆ, ಇಲ್ಲಿ ಸವಾಲುಗಳೂ ಇವೆ,'' ಎಂದರು.

ಭಾರತದ ಪ್ರಮುಖ ನಗರಗಳಲ್ಲಿ ದಿನಸಿ ವಸ್ತುಗಳನ್ನು ಆನ್‌ಲೈನ್‌ ಮೂಲಕ ಖರೀದಿಸುವ ಅವಕಾಶವನ್ನು ಅಮೆಜಾನ್‌ ಈಗಾಗಲೇ ಆರಂಭಿಸಿದೆ. ಬಟ್ಟೆಗಳಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳ ತನಕ ದೇಶದ ಜನರು ಆನ್‌ಲೈನ್‌ನತ್ತ ನೋಡುತ್ತಿದ್ದು, ಇ-ಕಾಮರ್ಸ್‌ ವಲಯ ವಿಸ್ತರಣೆಯಾಗುತ್ತಿದೆ. 2025ರ ಹೊತ್ತಿಗೆ ಭಾರತದ ಆನ್‌ಲೈನ್‌ ಮಾರುಕಟ್ಟೆಯು 18,800 ಕೋಟಿ ಡಾಲರ್‌ ಮುಟ್ಟುವ ನಿರೀಕ್ಷೆ ಇದೆ.

ಪೀಠೋಪಕರಣ ವಲಯ ವಿಸ್ತರಣೆ

ದಿನಸಿ ಜತೆಗೆ ಆನ್‌ಲೈನ್‌ ಮೂಲಕ ಪೀಠೋಪಕರಣ ಮಾರಾಟಕ್ಕೂ ಫ್ಲಿಪ್‌ಕಾರ್ಟ್‌ ಯೋಜನೆ ರೂಪಿಸಿದೆ ಎಂದು ಬಿನ್ನಿ ಬನ್ಸಾಲ್‌ ತಿಳಿಸಿದ್ದಾರೆ. ಈಗಾಗಲೇ ಪೀಠೋಪಕರಣಗಳನ್ನು ಕಂಪನಿ ಮಾರಾಟ ಮಾಡುತ್ತಿದ್ದು, ಈ ವ್ಯವಹಾರವನ್ನು ಇನ್ನಷ್ಟು ವ್ಯವಸ್ಥಿತವಾಗಿ ಮರು ಆರಂಭಿಸಲು ಬನ್ಸಾಲ್‌ ಮುಂದಾಗಿದ್ದಾರೆ. ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಮರು ಆರಂಭ ಖಚಿತ ಎಂದು ಬನ್ಸಾಲ್‌ ತಿಳಿಸಿದ್ದಾರೆ.

ಸಾಂಪ್ರದಾಯಿಕ ಬಡಗಿಗಳು ಮತ್ತು ಸ್ಥಳೀಯ ಅಂಗಡಿಗಳನ್ನೇ ಪೀಠೋಪಕರಣ ಖರೀದಿಗೆ ದೇಶದ ಜನರು ನೆಚ್ಚಿಕೊಂಡಿದ್ದಾರೆ. ಆನ್‌ಲೈನ್‌ ಮೂಲಕ ಗುಣಮಟ್ಟದ ಪೀಠೋಪಕರಣಗಳನ್ನು ಒದಗಿಸುವುದು ತಮ್ಮ ಉದ್ದೇಶ ಎಂದು ಬನ್ಸಾಲ್‌ ಹೇಳಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್