Quantcast
Channel: VijayKarnataka
Viewing all articles
Browse latest Browse all 6795

ಲಾಲ್‌ಬಾಗ್‌ ಕೆರೆ ಏರಿಗೆ ಅಲಂಕಾರಿಕ ಗೋಡೆ ರೂಪ

$
0
0

* ಸುಮಾರು 2 ಸಾವಿರ ಮೀಟರ್‌ ಉದ್ದ * ಅಲಂಕಾರಿಕ ಸಸ್ಯಗಳ ಮೆರುಗು

ಎಚ್‌.ಪಿ.ಪುಣ್ಯವತಿ ಬೆಂಗಳೂರು

ಲಾಲ್‌ಬಾಗ್‌ನಲ್ಲಿ ಕೆರೆಯ ಏರಿಯೊಂದು ಅಲಂಕಾರಿಕ ಗೋಡೆಯಾಗಿ ಹೊಸ ರೂಪ ಪಡೆಯುತ್ತಿದೆ.

ಉದ್ಯಾನದ ಪಶ್ಚಿಮ ದ್ವಾರ (ವೆಸ್ಟ್‌ ಗೇಟ್‌) ಬಳಿಯಿಂದ ಒಳಪ್ರವೇಶಿಸಿ ಬಲಬದಿಯಲ್ಲಿ ಕೆರೆ ಏರಿ ಕೆಳಗಡೆ ಸಾಗಿದರೆ ಅಥವಾ ಸಿದ್ದಾಪುರ ಪ್ರವೇಶ ದ್ವಾರದಿಂದ ಒಳಬಂದು ಕೆರೆ ಏರಿಯ ಬಲಬದಿಯಲ್ಲಿ ಕೆಳಭಾಗದಿಂದ ಸಾಗುತ್ತಿದ್ದರೆ ಅಲಂಕಾರಿಕ ಗೋಡೆ ಕಾಣ ಸಿಗುತ್ತದೆ.

ಅಗತ್ಯವಿರುವೆಡೆಗಳಲ್ಲಿ ಬಳ್ಳಿಯ ಜಾತಿಯ ಹಾಗೂ ಇತರೆ ಅಲಂಕಾರಿಕ ಸಸ್ಯಗಳನ್ನು ನೆಟ್ಟು ಗೋಡೆಯ ಸೊಬಗನ್ನು ಹೆಚ್ಚಿಸಲಾಗುವುದು. ಕೆಳಭಾಗದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಜನರು ಕುಳಿತುಕೊಳ್ಳಲು ಉದ್ದನೆಯ ಬೆಂಚು ನಿರ್ಮಿಸಲಾಗಿದೆ.

ಗೋಡೆಯ ಮೇಲಿಂದ ಇಳಿದ ನೀರು ಅನಗತ್ಯವಾಗಿ ಮಣ್ಣಿನಲ್ಲಿ ಇಂಗಿ ಹೋಗದಂತೆ ಗೋಡೆಯ ಕೆಳಭಾಗದಲ್ಲಿ ಕಾಲುವೆಯಾಕಾರದಲ್ಲಿ ನೀರು ಹರಿದು ಅಲ್ಲಿನ ಕೊಳದಲ್ಲಿ ಸಂಗ್ರಹಗೊಳ್ಳುವಂತೆ ನಿರ್ಮಿಸಲಾಗಿದೆ. ಅಲಂಕಾರಿಕ ಗೋಡೆಗೆ ಸುಮಾರು 40 ಲಕ್ಷ ರೂ. ವೆಚ್ಚವಾಗುತ್ತಿದ್ದು, ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. ಈ ತಿಂಗಳಾಂತ್ಯದೊಳಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್‌ ಮಾಹಿತಿ ನೀಡಿದ್ದಾರೆ.

ತ್ರಿಡಿ ಇಮೇಜ್‌ನ ಮಾರ್ಗ ನಕ್ಷೆ

ಉದ್ಯಾನಕ್ಕೆ ನಿತ್ಯ ಸಹಸ್ರಾರು ಮಂದಿ ಆಗಮಿಸುತ್ತಾರೆ. ಆದರೆ ಮೊದಲ ಬಾರಿ ಭೇಟಿ ನೀಡಿದವರಿಗೆ ಯಾವ ಮಾರ್ಗದಲ್ಲಿ ಹೋಗಬೇಕು ಎಂಬುದರ ಬಗ್ಗೆ ಮಾಹಿತಿಯಿರುವುದಿಲ್ಲ. ಹೀಗಾಗಿ ಉದ್ಯಾನಕ್ಕೆ ಬರುವವರಿಗೆ ಅನುಕೂಲವಾಗುವಂತೆ ತ್ರಿಡಿ ಇಮೇಜ್‌ನ ಐದು ಮಾರ್ಗ ನಕ್ಷೆಗಳನ್ನು ಅಳವಡಿಸಲಾಗಿದೆ.

ಸಸಿ ನೆಟ್ಟ ಗಣ್ಯರ ಹೆಸರು

ಉದ್ಯಾನ ಆರಂಭದಿಂದ ಈವರೆಗೆ ದೇಶ-ವಿದೇಶಗಳ ಅನೇಕ ಗಣ್ಯಾತಿಗಣ್ಯರು ನಾನಾ ರೀತಿಯ ಸಸಿಗಳನ್ನು ನೆಟ್ಟಿದ್ದಾರೆ. ಅವರಲ್ಲಿ ಅತಿಮುಖ್ಯ 25 ಮಂದಿ ನೆಟ್ಟಿರುವ ಸಸಿಗಳ ಬಳಿ ಆ ಗಣ್ಯರ ವಿವರ, ಸಸ್ಯಗಳ ವೈಜ್ಞಾನಿಕ ವಿವರವುಳ್ಳ ಫಲಕಗಳನ್ನು ಅಳವಡಿಸಲಾಗುತ್ತಿದೆ. ಜತೆಗೆ ಟೋಪಿಯಾರಿ ಗಾರ್ಡನ್‌, ಬೊನ್ಸಾಯ್‌ ಗಾರ್ಡನ್‌ ಮತ್ತಿತರೆಡೆ ಪ್ರವೇಶ ದ್ವಾರಗಳಲ್ಲಿ ಪರಿಸರ ಸ್ನೇಹಿ ಫಲಕಗಳನ್ನು ಅಳವಡಿಸಲಾಗುತ್ತಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು.

ಸಸ್ಯತೋಟ ಕುರಿತ ಕೃತಿಗಳ ಪ್ರಕಟ

ಲಾಲ್‌ಬಾಗ್‌ಗೆ ಸುಮಾರು 150 ವರ್ಷಗಳ ಇತಿಹಾಸವಿದೆ. ಇಲ್ಲಿ ಸಹಸ್ರಾರು ಬಗೆಯ ಸಸ್ಯಗಳು, ಪಕ್ಷಿ ಸಂಕುಲವಿದೆ. ಈ ಕುರಿತಂತೆ ತೋಟಗಾರಿಕೆ ಇಲಾಖೆಯು 'ಲಾಲ್‌ಬಾಗ್‌ ಎ ಬರ್ಡ್ಸ್ ಐ ವ್ಯೂ' ಎಂಬ ಪುಸ್ತಕ ಹೊರತಂದಿದೆ. ಇದರಲ್ಲಿ ಲಾಲ್‌ಬಾಗ್‌ನ ಏರಿಯಲ್‌ ನೋಟ, ಹಲವು ಪ್ರಬೇಧಗಳ ಸಸ್ಯಗಳ ಫೋಟೊಗಳು ಮುದ್ರಿತಗೊಂಡಿವೆ. ಇದಲ್ಲದೆ 'ಬಟಾನಿಕಲ್‌ ಪೇಂಟಿಂಗ್ಸ್‌ ಆಫ್‌ ಲಾಲ್‌ಬಾಗ್‌' ಎಂಬ ಪುಸ್ತಕವನ್ನು ಕೆ. ಚಲುವಯ್ಯ ರಾಜು ಅವರ ರಚಿಸಿದ್ದು, 200 ಪೇಟಿಂಗ್‌ಗಳು ಈ ಪುಸ್ತಕದಲ್ಲಿವೆ ಎಂದು ಜಗದೀಶ್‌ ತಿಳಿಸಿದರು.

----

ಕೆರೆ ಏರಿಯನ್ನು ವೈಜ್ಞಾನಿಕ ರೀತಿಯಲ್ಲಿ ಅಲಂಕಾರಿಕ ಗೋಡೆಯಾಗಿ ನಿರ್ಮಿಸುವ ಮೂಲಕ ಉದ್ಯಾನಕ್ಕೆ ವಿಶೇಷ ಮೆರುಗು ನೀಡಲಾಗುತ್ತಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೊಸ ನಕ್ಷೆಗಳು ಮತ್ತು ಫಲಕಗಳನ್ನು ಅಳವಡಿಸಲಾಗುತ್ತಿದೆ.

-ಡಾ. ಎಂ. ಜಗದೀಶ್‌, ಜಂಟಿ ನಿರ್ದೇಶಕರು, ರಾಜ್ಯ ತೋಟಗಾರಿಕೆ ಇಲಾಖೆ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>