Quantcast
Channel: VijayKarnataka
Viewing all articles
Browse latest Browse all 6795

ಮರವೇರಿ ಕುಳಿತು ಬೆದರಿಸಿದ ಯುವಕ

$
0
0

ಬೆಂಗಳೂರು: ಯುವಕನೊಬ್ಬ ಮರ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದರಿಂದ ಹೊಸೂರು ರಸ್ತೆಯ ಫೋರಂ ಮಾಲ್‌ ಬಳಿ ಬುಧವಾರ ರಾತ್ರಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆತನ ರಕ್ಷ ಣೆಗೆ ಸುಮಾರು 3 ಗಂಟೆಗೂ ಅಧಿಕ ಕಾಲ ಹರಸಾಹಸ ಪಟ್ಟ ಬಳಿಕ ನಾಟಕಕ್ಕೆ ತೆರೆಬಿತ್ತು.

ರಾಯಚೂರು ರಘುನಾಥನಹಳ್ಳಿ ಮೂಲದ ಸೋಮಶೇಖರ್‌(24) ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗೆ ಪೀಕಲಾಟ ತಂದಿಟ್ಟ ವ್ಯಕ್ತಿ. ತಾಯಿ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಸಂಜೆ 5 ಗಂಟೆ ವೇಳೆಗೆ ಮರ ಏರಿ ಕುಳಿತಿದ್ದ ಸೋಮಶೇಖರ್‌ ಅರೆಬೆತ್ತಲೆಯಾಗಿದ್ದ. ಅಲ್ಲದೆ ತಾನು ಮರದಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಂಜ್ಞೆ ಮೂಲಕ ಬೆದರಿಕೆ ಹಾಕಿದ್ದ. ಆತನನ್ನು ಕಂಡ ಸಾರ್ವಜನಿಕರು ತಕ್ಷ ಣ ಪೊಲೀಸ್‌ ನಿಯಂತ್ರಣಾ ಕೊಠಡಿಗೆ ಕರೆ ಮಾಡಿ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಆತನ ಮನವೊಲಿಸಿ ಕೆಳಗಿಳಿಸಲು ಮುಂದಾದರು. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಆತ ಮರವೇರಿ ಕುಳಿತಿದ್ದರಿಂದ ಅದನ್ನು ನೋಡಲು ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು. ಇದರಿಂದ ಆ ಭಾಗದಲ್ಲಿ ಸಂಚಾರ ದಟ್ಟಣೆ ಸಹ ಉಂಟಾಗಿತ್ತು. ಅಲ್ಲಿ ನೆರೆದಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಕೊನೆಗೂ ರಾತ್ರಿ 9.20ರ ವೇಳೆಗೆ ಆತ ಕೆಳಗೆ ಜಿಗಿದ ನಂತರ ಈ ಹೈಡ್ರಾಮಕ್ಕೆ ತೆರೆ ಬಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಕೋರಮಂಗಲ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಆತ ಕಳೆದ ನಾಲ್ಕು ದಿನಗಳಿಂದ ಎಲ್ಲಿದ್ದ, ಮನೆಬಿಟ್ಟು ಬರಲು ನಿಖರ ಕಾರಣ ಏನು ಎಂಬಿತ್ಯಾದಿ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

7 ಅಡಿಯಿಂದ ಜಂಪ್‌

ತಾನು ಕೆಳಗಿಳಿದರೆ ಪೊಲೀಸರು ಹಲ್ಲೆ ಮಾಡುತ್ತಾರೆ ಎಂದು ಮತ್ತಷ್ಟು ಹೆದರಿದ ಆತ ಮೊದಲು ಕೆಳಗಿಳಿಯಲಿಲ್ಲ. ಕೊನೆಗೆ ಆತನಿಗೆ ಎಲ್ಲಾ ಭರವಸೆ ನೀಡಿದ ನಂತರ ಸುಮಾರು 7 ಅಡಿ ಎತ್ತರದಿಂದ ಅಗ್ನಿಶಾಮಕ ಇಲಾಖೆಯ ವಾಹನದ ಮೇಲೆ ಜಿಗಿದಿದ್ದಾನೆ. ತಕ್ಷ ಣ ಆತನನ್ನು ಸ್ಥಳದಲ್ಲಿದ್ದ 108 ವಾಹನದಲ್ಲಿ ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತನಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಆರ್‌ಎಫ್‌ ನಾಗೇಶ್‌ 'ವಿಕ' ಗೆ ತಿಳಿಸಿದ್ದಾರೆ.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>