Quantcast
Channel: VijayKarnataka
Viewing all articles
Browse latest Browse all 6795

ವರ್ತುಲ ರೈಲ್ವೆ ಯೋಜನೆಗೆ ಕ್ರಿಯಾಯೋಜನೆ : ಜಾರ್ಜ್‌

$
0
0

ಬೆಂಗಳೂರು : ನಗರದ ಸಂಚಾರ ದಟ್ಟಣೆ ತಗ್ಗಿಸುವ ಹಾಗೂ ನಮ್ಮ ಮೆಟ್ರೊಗೆ ಪೂರಕವಾಗುವ ವರ್ತುಲ ರೈಲ್ವೆ ಯೋಜನೆ (ಮೆಮೋ) ಅನುಷ್ಠಾನಗೊಳಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, ''ಈ ಯೋಜನೆಗೆ ಒಟ್ಟಾರೆ 9 ಸಾವಿರ ಕೋಟಿ ರೂ. ಅಗತ್ಯವಿದೆ. ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು. ಮೊದಲ ಹಂತದಲ್ಲಿ ವೈಟ್‌ಫೀಲ್ಡ್‌ನಿಂದ ಜ್ಞಾನಭಾರತಿ ಹಾಗೂ ಮಂಡ್ಯದಿಂದ ಜ್ಞಾನಭಾರತಿ ವರೆಗೆ ವರ್ತುಲ ರೈಲು ಸೇವೆ ಪ್ರಾರಂಭವಾಗಲಿದ್ದು, ಮೆಟ್ರೋಗೆ ಜೋಡಣೆಯಾಗಲಿದೆ. ತುಮಕೂರು-ಯಶವಂತಪುರ ನಡುವೆಯೂ ಈ ಸಂಚಾರ ಆರಂಭಿಸುವ ಬಗ್ಗೆ ಚರ್ಚಿಸಲಾಗಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು 50:50 ರ ಅನುಪಾತದಡಿ ವೆಚ್ಚ ಭರಿಸಲಿವೆ,'' ಎಂದರು.

ಟಿಡಿಆರ್‌ ಮೌಲ್ಯ ಹೆಚ್ಚಿಸಲು ಚಿಂತನೆ

ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಸಂಬಂಧ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಕೊಡುವ ಟಿಡಿಆರ್‌ ಪ್ರಮಾಣ ದ್ವಿಗುಣಗೊಳಿಸುವ ಚಿಂತನೆಯಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ.

ಸದ್ಯಕ್ಕೆ ಖಾಸಗಿಯವರಿಂದ ವಶಪಡಿಸಿಕೊಂಡ ಜಮೀನಿನ ಒಂದೂವರೆ ಪಟ್ಟು ಟಿಡಿಆರ್‌ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಲು ಕಾನೂನು ಇಲಾಖೆಯ ಸಲಹೆ ಪಡೆಯಲಾಗುತ್ತಿದೆ. ಬಳಿಕ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಬೆಂಗಳೂರು ಮತ್ತು ಇತರೆ ಜಿಲ್ಲಾ ಕೇಂದ್ರಗಳ ಟಿಡಿಆರ್‌ನಲ್ಲಿ ಪ್ರತ್ಯೇಕ ಸ್ಪ್ಯಾಬ್‌ ಇರುತ್ತವೆ. ಈ ಹಿಂದೆ ನೀಡಿರುವ ಟಿಡಿಆರ್‌ನಲ್ಲಿ ಅಕ್ರಮದ ಆರೋಪ ಇರುವುದರಿಂದ ಹೊಸ ಪ್ರಮಾಣ ಪತ್ರ ನೀಡಲಾಗುವುದು. ನಕಲಿ ಟಿಡಿಆರ್‌ ಪತ್ರಗಳನ್ನು ರದ್ದುಪಡಿಸಲಾಗುವುದು ಎಂದರು.

ಮಾನವೀಯ ನೆರವು

''ಅಕ್ರಮ ಭೂ ಒತ್ತುವರಿ ಪ್ರಕರಣಗಳಲ್ಲಿ ಮಾನವೀಯ ದೃಷ್ಟಿಯಿಂದ ಆರ್ಥಿಕವಾಗಿ ಹಿಂದುಳಿದವರ ಹಿತ ಕಾಯಲು ಯೋಚಿಸಲಾಗುತ್ತಿದೆ. ಈ ಸಂಬಂಧ ಒತ್ತುವರಿ ತೆರವು ಕಾರ್ಯಾಚರಣೆಗೆ ಒಳಗಾದವರ ಆರ್ಥಿಕ ಹಿನ್ನೆಲೆಯ ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು. ಬೆಳ್ಳಂದೂರು ಕೆರೆ ಸಮಸ್ಯೆ ಪರಿಹಾರ ಕುರಿತು ವರದಿ ಪಡೆಯಲಾಗಿದೆ. ನಗರದ ಕೆರೆಗಳ ಉಸ್ತುವಾರಿಗೆ ಸ್ಥಳೀಯರನ್ನು ಒಳಗೊಂಡ ಸಮಿತಿ ರಚಿಸಲಾಗುವುದು,''ಎಂದು ಸಚಿವ ಜಾರ್ಜ್‌ ಹೇಳಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>