Quantcast
Channel: VijayKarnataka
Viewing all articles
Browse latest Browse all 6795

ಗಿರವಿ ಅಂಗಡಿಗಳಿಗೆ ಬಿತ್ತು ಭಾರೀ ಹೊಡೆತ

$
0
0

- 120 ಕೋಟಿಯಿಂದ 12 ಕೋಟಿಗೆ ಇಳಿದ ವಹಿವಾಟು-

ಎಚ್‌.ಪಿ.ಪುಣ್ಯವತಿ ಬೆಂಗಳೂರು

ಚಿನ್ನಾಭರಣ ಉದ್ಯಮದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಗಿರವಿ ಅಂಗಡಿಗಳ ವಹಿವಾಟು ಶೇ.12-15ಕ್ಕೆ ಕುಸಿದಿದೆ. ನಿತ್ಯದ ವಹಿವಾಟು 120-150 ಕೋಟಿ ರೂ. ಇದ್ದುದು ಇದೀಗ ನೋಟು ರದ್ಧತಿಯ ಪರಿಣಾಮ ಕೇವಲ 12-15 ಕೋಟಿಗೆ ಇಳಿದಿದೆ. ಇದರಿಂದ ಚಿನ್ನೋದ್ಯಮದಲ್ಲಿ ಭಾರೀ ಆತಂಕ ಉಂಟಾಗಿದೆ.

ಅಲ್ಲದೆ ಸಣ್ಣ-ಪುಟ್ಟ ವ್ಯಾಪಾರಿಗಳು ಹಾಗೂ ಇತರರಿಗೆ ಇದರಿಂದ ತೀವ್ರ ಹೊಡೆತ ಬಿದ್ದಿದೆ. ಹೂವಿನ ಮಂಡಿ, ವೀಳ್ಯದೆಲೆ, ಬಾಳೆ ಎಲೆ, ತರಕಾರಿ ಮಂಡಿ ಹೀಗೆ ಹಲವು ಸಣ್ಣ ವ್ಯಾಪಾರಿಗಳು ಕಡಿಮೆ ಬಡ್ಡಿದರದಲ್ಲಿ ದಿಢೀರ್‌ ಹಣ ಪಡೆಯಲು ಅವಲಂಬಿಸಿದ್ದುದು ಈ ಗಿರವಿ ಅಂಗಡಿಗಳನ್ನು. ಅಲ್ಲದೆ ತಮ್ಮ ಪ್ರೀತಿಪಾತ್ರರು ಕೊಡಿಸಿದ ಒಡವೆಗಳನ್ನು ಅಡ ಇಟ್ಟಿರುವವರು ಅವುಗಳನ್ನು ಬಿಡಿಸಿಕೊಳ್ಳಲಾರದೆ ಭಾವನಾತ್ಮಕವಾಗಿ ನೋವು ಅನುಭವಿಸುತ್ತಿದ್ದಾರೆ.

500 ಹಾಗೂ 1000 ರೂ. ಮುಖಬೆಲೆ ನೋಟುಗಳನ್ನು ರದ್ದುಪಡಿಸಿರುವುದರ ಪರಿಣಾಮ ಚಿನ್ನದ ಖರೀದಿ ಮಾತ್ರವಲ್ಲ, ಕಷ್ಟಕಾಲಕ್ಕೆ ನೆರವಾಗುತ್ತದೆ ಎಂದು ಚಿನ್ನ ಹೊಂದಿವವರಿಗೂ ತೊಂದರೆಯಾಗಿದೆ. ಚಿನ್ನವನ್ನು ಒತ್ತೆಯಿಟ್ಟುಕೊಂಡು ಹಣ ಕೊಟ್ಟವರ ಪಾಡೂ ಅತಂತ್ರಗೊಂಡಿದೆ. ರಾಜ್ಯಾದ್ಯಂತ ಸುಮಾರು 80,000 ಗಿರವಿ ಅಂಗಡಿಗಳಿವೆ. ಈ ಪೈಕಿ ಸುಮಾರು 8 ಸಾವಿರಕ್ಕೂ ಅಧಿಕ ಅಂಗಡಿಗಳು ಬೆಂಗಳೂರಿನಲ್ಲಿವೆ.

ಗ್ರಾಹಕರ ಹಿತ ಕಾಪಾಡುವ ಗಿರವಿದಾರರು

ಯಾವುದೇ ಒಬ್ಬ ವ್ಯಕ್ತಿ ಚಿನ್ನಾಭರಣವನ್ನು ಅಡ ಇಟ್ಟು ಸಾಲ ಪಡೆದರೆ ಅದನ್ನು ಬಿಡಿಸಿಕೊಳ್ಳಲು 11 ತಿಂಗಳು 21 ದಿನ ಕಾಲಾವಕಾಶವಿರುತ್ತದೆ. ಅಷ್ಟರಲ್ಲಿ ಗ್ರಾಹಕರು ಅದನ್ನು ಬಿಡಿಸಿಕೊಳ್ಳದಿದ್ದರೆ ಅದರ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂಬ ನಿಯಮವಿದೆ. (ಕಾನೂನುಬದ್ಧವಾಗಿ ವ್ಯವಹಾರ ನಡೆಸಿದರೆ) ಆದರೆ ಗಿರವಿ ಅಂಗಡಿಯವರು ಗ್ರಾಹಕರ ಹಿತದೃಷ್ಟಿಯಿಂದ ಹಾಗೆ ಮಾಡುವುದಿಲ್ಲ. ಮೂರು ವರ್ಷದ ನಂತರ ಬಂದರೂ ಅವರ ಆಭರಣಗಳನ್ನು ಹಿಂದಿರಿಗಿಸುತ್ತಾರೆ ಎನ್ನುತ್ತಾರೆ ಆಭರಣ ಮಾರಾಟಗಾರರು.

---

''ತುರ್ತು ಅಗತ್ಯಗಳಿಗೆ ಹಣ ಪಡೆಯಲು ತಮ್ಮಲ್ಲಿನ ಆಭರಣಗಳನ್ನು ಗಿರವಿ ಅಂಗಡಿಗಳಲ್ಲಿಡುವವರು ಬಹುತೇಕ ಬಡವರು. ಇದೀಗ ಏಕಾಏಕಿ 4 ಸಾವಿರಕ್ಕಿಂತ ಹೆಚ್ಚು ಹಣ ಸ್ವೀಕರಿಸಬಾರದು ಎಂಬ ಸರಕಾರದ ನೀತಿಯಿಂದ ಗ್ರಾಹಕ ಮತ್ತು ಮಾರಾಟಗಾರರಿಬ್ಬರಿಗೂ ಅನ್ಯಾಯವಾಗುತ್ತದೆ.

ಬಿ. ರಾಮಚಾರಿ, ಅಧ್ಯಕ್ಷರು, ಕರ್ನಾಟಕ ಸ್ಟೇಟ್‌ ಜ್ಯುವೆಲ್ಲರಿ ಟ್ರೇಡರ್ಸ್‌ ಆಂಡ್‌ ವರ್ಕರ್ಸ್‌ ಅಸೋಸಿಯೇಷನ್‌ ಫೆಡರೇಷನ್‌

---

''ನಾನು ವೀಳ್ಯದೆಲೆ ವ್ಯಾಪಾರ ಮಾಡುತ್ತೇನೆ. ವ್ಯಾಪಾರಕ್ಕೆ ಹಣ ಬೇಕಿತ್ತು. ಎಲ್ಲಾ ಕಡೆ ಸಾಲಕ್ಕಾಗಿ ಅಲೆದೆ. ಎಲ್ಲೂ ಸಿಗಲಿಲ್ಲ. ಕೊನೆಗೆ ನನ್ನ ಪತಿ ಮಾಡಿಸಿದ್ದ ಚಿನ್ನದ ಸರವನ್ನು ಗಿರವಿ ಅಂಗಡಿಯಲ್ಲಿ ಅಡ ಇಟ್ಟು ಹಣ ತಂದೆ. ಇನ್ನೂ ಒಡವೆ ಬಿಡಿಸಿಕೊಂಡಿಲ್ಲ. ಇದೀಗ ದುಡ್ಡು ತೆಗೆದುಕೊಂಡು ಗಿರವಿ ಅಂಗಡಿಗೆ ಹೋದರೆ ಹಳೆಯ ಹಣ ಸ್ವೀಕರಿಸುವುದಿಲ್ಲ ಎನ್ನುತ್ತಾರೆ ಎಂದು ಅಲವತ್ತುಕೊಳ್ಳುತ್ತಾರೆ ಹೆಸರು ಹೇಳಲಿಚ್ಛಿಸದ ವೀಳ್ಯದೆಲೆ ವ್ಯಾಪಾರಿ.

10 ಸಾವಿರ ಕೋಟಿ ನಷ್ಟ

ಕಳೆದ ಒಂದು ವಾರದಿಂದೀಚೆಗೆ ಚಿನ್ನೋದ್ಯಮದ ವಹಿವಾಟು ಪಟ್ಟಣ ಪ್ರದೇಶದಲ್ಲಿ ಶೇ.60-70 ವ್ಯಾಪಾರ ಸ್ಥಗಿತಗೊಂಡಿದೆ. ಗ್ರಾಮೀಣ ಭಾಗದಲ್ಲಿ ಶೇ.50ರಷ್ಟು ವ್ಯಾಪಾರ ವಹಿವಾಟು ನಿಂತು ಹೋಗಿದೆ. ಇದರ ಪರಿಣಾಮ ವಾರದಿಂದೀಚೆಗೆ ರಾಜ್ಯಾದ್ಯಂತ 10,000 ಕೋಟಿಯಷ್ಟು ನಷ್ಟವಾಗಿದೆ ಎನ್ನುತ್ತಾರೆ ಆಭರಣ ಸಂಘದ ಸದಸ್ಯರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್