ಗುರುಗ್ರಾಮ ಜಿಲ್ಲೆಯ ಅಲಿಪುರ್, ರೊಜ್ಕಾ ಮಿಯೊ, ಹರ್ಚಂದ್ರಪುರ್ ಹಾಗೂ ತಾಜ್ನಗರ ಮತ್ತು ನುಹ್ ಜಿಲ್ಲೆಯ ದೌಹ್ಲಾ ಗ್ರಾಮವನ್ನು ರಾಷ್ಟ್ರಪತಿಗಳು ಜುಲೈನಲ್ಲಿ ದತ್ತು ಪಡೆದಿದ್ದರು. ಈ ಗ್ರಾಮಗಳನ್ನು ರಾಷ್ಟ್ರಪತಿ ಭವನದಲ್ಲಿ ನಡೆಯುವ ಅಭಿವೃದ್ಧಿಯ ಮಾದರಿಯಲ್ಲಿಯೇ ಅವುಗಳು ಪ್ರಗತಿ ಸಾಧಿಸುವಂತೆ ಮಾಡುವ ಬಗ್ಗೆ ಪಣ ತೊಟ್ಟಿದ್ದರು.
ಆಯುಶ್ ಕ್ಲಿನಿಕ್ ಮತ್ತು ಆರೋಗ್ಯ ಕೇಂದ್ರ ಮಾತ್ರವಲ್ಲದೆ ಶುದ್ಧ ಕುಡಿಯುವ ನೀರಿಗಾಗಿ ‘ವಾಟರ್ ಎಟಿಎಂ’ ಮತ್ತು ಯುವಕರ ಉದ್ಯೋಗ ಅವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ‘ಕೌಶಲ್ಯ ಅಭಿವೃದ್ಧಿ ಕೇಂದ್ರ’ಗಳನ್ನು ತೆರೆಯಲಾಗಿದೆ.
ಸ್ಮಾರ್ಟ್ಗ್ರಾಮಗಳ ಉದ್ಘಾಟನೆಯನ್ನು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ರಾಷ್ಟ್ರಪತಿಗಳ ಕಾರ್ಯದರ್ಶಿ ಒಮಿತಾ ಪೌಲ್ ನೆರವೇರಿಸಿದರು.
‘‘ಜನರಿಗೆ ಕೇವಲ ಹಣ ಹಂಚುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ, ಜನರು ಸ್ವಾವಲಂಬಿಯಾಗಿ ಬದುಕುವ ನಿಟ್ಟಿನಲ್ಲಿ ಉದ್ಯೋಗ ಮತ್ತು ಕೌಶಲ್ಯವನ್ನು ನೀಡಬೇಕು,’’ ಎಂದು ಖಟ್ಟರ್ ಅಭಿಪ್ರಾಯ ಪಟ್ಟಿದ್ದಾರೆ.
ಗುರುಗ್ರಾಮ: ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ದತ್ತು ಪಡೆದಿರುವ ಹರಿಯಾಣದ ಐದು ಗ್ರಾಮಗಳ ಗ್ರಾಮಸ್ಥರು ಈಗ ರಾಷ್ಟ್ರಪತಿ ಭವನದ ವೈದ್ಯರಿಂದ ಚಿಕಿತ್ಸೆ ಪಡೆಯಬಹುದು. ಸ್ಮಾರ್ಟ್ಗ್ರಾಮ ಯೋಜನೆಯಡಿಯಲ್ಲಿ ಆಯುಶ್ ಕ್ಲಿನಿಕ್ಗಳನ್ನು ಮೇಲ್ದರ್ಜೆಗೆರಿಸಲಾಗಿದ್ದು ‘ಇ-ಡಾಕ್ಟರ್’ ಸೌಲಭ್ಯದಿಂದ ರಾಷ್ಟ್ರಪತಿ ಭವನದ ವೈದ್ಯರೊಂದಿಗೆ ಸಮಾಲೋಚನೆ ನಡೆಸಬಹುದು.