Quantcast
Channel: VijayKarnataka
Viewing all articles
Browse latest Browse all 6795

ಮಿಸ್ತ್ರಿ ವಿರುದ್ಧ ಟಾಟಾ ಕೆಂಡ

$
0
0

ಉದ್ಯೋಗಿಗಳ ದೃಷ್ಟಿಯಲ್ಲಿ ಟಾಟಾ ಸಮೂಹದ ವರ್ಚಸ್ಸಿಗೆ ಮಸಿ ಬಳಿಯಲು ಮಿಸ್ತ್ರಿ ಯತ್ನಿಸಿರುವುದು ಅಕ್ಷಮ್ಯ: ಟಾಟಾ ಸನ್ಸ್‌

ಮುಂಬಯಿ: ಟಾಟಾ ಸಮೂಹದ ಆಡಳಿತ ಮಂಡಳಿಯ ಲೋಪದೋಷಗಳ ಬಗ್ಗೆ ಪದಚ್ಯುತ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಮಾಡಿರುವ ಗಂಭೀರ ಆರೋಪಗಳನ್ನು ಟಾಟಾ ಸನ್ಸ್‌ ಗುರುವಾರ ಸಾರಾಸಗಟಾಗಿ ಅಲ್ಲಗಳೆದಿದೆ. ಸಮೂಹವನ್ನು ಮುನ್ನಡೆಸಲು ಸೈರಸ್‌ ಮಿಸ್ತ್ರಿಯವರಿಗೆ ಎಲ್ಲ ಅಧಿಕಾರಗಳನ್ನು ನೀಡಲಾಗಿತ್ತು. ಆದರೆ ಆಡಳಿತ ಮಂಡಳಿಯ ಸದಸ್ಯರ ವಿಶ್ವಾಸವನ್ನು ಮಿಸ್ತ್ರಿ ತೀರಾ ಕಳೆದುಕೊಂಡಿದ್ದರು ಎಂದು ತಿರುಗೇಟು ಕೊಟ್ಟಿದೆ.

ವಜಾಗೊಂಡ ನಂತರ ಸೈರಸ್‌ ಮಿಸ್ತ್ರಿಯವರು ಆಡಳಿತ ಮಂಡಳಿಯ ಸದಸ್ಯರಿಗೆ ಪತ್ರ ಬರೆದು, ನಂತರ ಬಹಿರಂಗಪಡಿಸಿದ್ದರು. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿರುವ ಟಾಟಾ ಸನ್ಸ್‌, ಗೌಪ್ಯತೆಯಲ್ಲಿ ಇರಬೇಕಾಗಿದ್ದ ಪತ್ರವನ್ನು ಬಹಿರಂಗಪಡಿಸಿರುವುದು ಅಕ್ಷಮ್ಯ ಎಂದು ಕಿಡಿಕಾರಿದೆ.

ಸೈರಸ್‌ ಮಿಸ್ತ್ರಿಯವರ ಆಡಳಿತಾವಧಿಯಲ್ಲಿ ಪದೇಪದೆ ಟಾಟಾ ಸಮೂಹದ ಸಂಸ್ಕೃತಿ, ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗಿತ್ತು. ಟಾಟಾ ಸಮೂಹ, ಟಾಟಾ ಸನ್ಸ್‌ ಆಡಳಿತ ಮಂಡಳಿ ವಿರುದ್ಧ ಮಿಸ್ತ್ರಿಯವರು ಮಾಡಿರುವ ಆರೋಪಗಳು ಅವಹೇಳನಕಾರಿ ಹಾಗೂ ನಿರಾಧಾರವಾದದ್ದು ಎಂದು ಟಾಟಾ ಸನ್ಸ್‌ ಹೇಳಿಕೆಯಲ್ಲಿ ವಿವರಿಸಿದೆ.

ಟಾಟಾ ಸಮೂಹದಲ್ಲಿ ತಮ್ಮನ್ನು ಹಲ್ಲು ಕಿತ್ತ ಹಾವಿನಂತೆ ಇರಿಸಿಕೊಳ್ಳಲಾಗಿತ್ತು. ಪರ್ಯಾಯ ಶಕ್ತಿಕೇಂದ್ರ ಇತ್ತು. ಹೀಗಾಗಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗುತ್ತಿರಲಿಲ್ಲ ಎಂಬ ಸೈರಸ್‌ ಆರೋಪ ಅರ್ಥಹೀನವಾಗಿದೆ ಎಂದು ಟಾಟಾ ಸನ್ಸ್‌ ಹೇಳಿದೆ.

'' ಸಮೂಹದ ಅಧ್ಯಕ್ಷರಾಗಿ ಸೈರಸ್‌ ಮಿಸ್ತ್ರಿಯವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿತ್ತು. ಆದರೆ ವಜಾಗೊಂಡ ಬಳಿಕ ಹೀಗೆ ಅವಹೇಳನಕಾರಿಯಾಗಿ ಆರೋಪಿಸುತ್ತಿರುವುದು ದುರದೃಷ್ಟಕರ. ದಶಕಗಟ್ಟಲೆ ಅನುಭವ ಇರುವ ಮಾಜಿ ಅಧ್ಯಕ್ಷರಿಗೆ ಇದು ಶೋಭೆಯಲ್ಲ'' ಎಂದು ಟಾಟಾ ಸನ್ಸ್‌ ಪ್ರಹಾರ ನಡೆಸಿದೆ.

'' ಟಾಟಾ ಸಮೂಹದಲ್ಲಿ ಅವಕಾಶಗಳನ್ನು ನಿರ್ವಹಿಸಲು ಮತ್ತು ಸವಾಲುಗಳನ್ನು ಎದುರಿಸಲು ಅಧ್ಯಕ್ಷರಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ದುರದೃಷ್ಟವಶಾತ್‌ ಮಿಸ್ತ್ರಿಯವರು ಆಡಳಿತ ಮಂಡಳಿಯ ಸಂಪೂರ್ಣ ವಿಶ್ವಾಸವನ್ನೇ ಕಳೆದುಕೊಂಡಿದ್ದರು'' ಎಂದು ಟಾಟಾ ಸನ್ಸ್‌ ಹೇಳಿದೆ.

ಮಿಸ್ತ್ರಿಯವರು 2006ರಿಂದ ಟಾಟಾ ಸನ್ಸ್‌ ಆಡಳಿತ ಮಂಡಳಿಯಲ್ಲಿದ್ದರು. 2011ರ ನವೆಂಬರ್‌ನಲ್ಲಿ ಉಪಾಧ್ಯಕ್ಷರಾದರು. 2012ರ ಡಿಸೆಂಬರ್‌ 28ರಿಂದ ಅಧ್ಯಕ್ಷರಾಗಿದ್ದರು. ಟಾಟಾ ಸಮೂಹದ ಸಂಸ್ಕೃತಿ, ಮೌಲ್ಯಗಳು, ಆಡಳಿತ ವ್ಯವಸ್ಥೆ, ಹಣಕಸು ಹಾಗೂ ಕಾರ್ಯಾಚರಣೆಗಳ ಬಗ್ಗೆ ಮಿಸ್ತ್ರಿಯವರಿಗೆ ಚೆನ್ನಾಗಿ ಅರಿವಿತ್ತು. ಹೀಗಿದ್ದರೂ ಈಗ ವೃಥಾರೋಪಗಳನ್ನು ಮಾಡುತ್ತಿದ್ದಾರೆ ಎಂದಿದೆ.

'' ಉದ್ಯೋಗಿಗಳ ದೃಷ್ಟಿಯಲ್ಲಿ ಟಾಟಾ ಸಮೂಹದ ವರ್ಚಸ್ಸಿಗೆ ಮಸಿ ಬಳಿಯಲು ಮಿಸ್ತ್ರಿ ಯತ್ನಿಸಿರುವುದು ಅಕ್ಷಮ್ಯ'' ಎಂದು ಟಾಟಾ ಸನ್ಸ್‌ ಕೆಂಡವಾಗಿದೆ.

ಸೈರಸ್‌ ಮಿಸ್ತ್ರಿಯವರು ಕಾರ್ಪೊರೇಟ್‌ ಆಡಳಿತದ ನೀತಿ ಸಂಹಿತೆಯನ್ನು ಗಾಳಿಗೆ ತೂರಿದ್ದು, ಟಾಟಾ ಸಮೂಹದ ವಿರುದ್ಧ ಸಲ್ಲದ ಆರೋಪ ಮಾಡಿದ್ದಾರೆ. ಅವುಗಳು ಸತ್ಯಕ್ಕೆ ದೂರವಾದ್ದೆಂಬುದನ್ನು ಸಾಬೀತುಪಡಿಸಲು ದಾಖಲೆಗಳಿವೆ. ಕೆಲವು ಬಿಸಿನೆಸ್‌ಗಳಲ್ಲಿ ಮಿಸ್ತ್ರಿಯವರ ನಿರ್ಧಾರಗಳ ಬಗ್ಗೆ ಟಾಟಾ ಟ್ರಸ್ಟ್‌ನ ಟ್ರಸ್ಟಿಗಳು ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದರು. ಆದರೆ ಇದನ್ನು ಮಿಸ್ತ್ರಿ ಪರಿಹರಿಸಿಕೊಳ್ಳಲಿಲ್ಲ ಎಂದಿದೆ.


Viewing all articles
Browse latest Browse all 6795

Trending Articles


ಪತಿ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಮೃತದೇಹ ಪತ್ತೆ


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಸಿನಿ ಪ್ರೇಕ್ಷಕರ ಗಮನ ಸೆಳೆದ ‘Supplier ಶಂಕರ’


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ