Quantcast
Channel: VijayKarnataka
Viewing all articles
Browse latest Browse all 6795

ಉದ್ಯೋಗಿಗಳಿಗೆ 400 ಫ್ಲಾಟ್‌ಗಳು, 1,260 ಕಾರ್‌ಗಳ ಗಿಫ್ಟ್‌

$
0
0

ಸೂರತ್‌ ವಜ್ರದ ವ್ಯಾಪಾರಿಯಿಂದ ಭರ್ಜರಿ ದೀಪಾವಳಿ ಉಡುಗೊರೆ

* ನವ್‌ ಗುಜರಾತ್‌ ಸಮಯ್‌ ಸೂರತ್‌

ದೀಪಾವಳಿಯೆಂದರೆ ಉದ್ಯೋಗಿಗಳಿಗೆ ಬೋನಸ್‌, ಉಡುಗೊರೆಗಳ ನಿರೀಕ್ಷೆ ಸಹಜ. ಆದರೆ, ಸೂರತ್‌ನ ಸಾವ್ಜಿ ಧೋಲಾಕಿಯಾ ಅವರು ತಮ್ಮ ಉದ್ಯೋಗಿಗಳಿಗೆ 400 ಫ್ಲಾಟ್‌ಗಳು, 1,260 ಕಾರ್‌ಗಳ ಭರ್ಜರಿ ಉಡುಗೊರೆ ನೀಡಿದ್ದಾರೆ.

ಸಾವ್ಜಿ ನೇತೃತ್ವದ ಹರೇ ಕೃಷ್ಣ ಎಕ್ಸ್‌ಪೋರ್ಟ್ಸ್ ಎನ್ನುವ ವಜ್ರದ ಕಂಪನಿಯು ಈ ವರ್ಷ ಉದ್ಯೋಗಿಗಳಿಗೆ ಉಡುಗೊರೆ(ಬೋನಸ್‌) ನೀಡಲು 51 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. 1,716 ಸಿಬ್ಬಂದಿಯನ್ನು ಕಂಪನಿಯು ಉತ್ತಮ ನೌಕರರೆಂದು ಆಯ್ಕೆ ಮಾಡಿದೆ.

ಇತ್ತೀಚೆಗೆ ನಡೆದ ಉದ್ಯೋಗಿಗಳ ಸಭೆಯಲ್ಲಿ ಬೋನಸ್‌ ಅನ್ನು ಪ್ರಕಟಿಸಲಾಯಿತು. 2011ರಿಂದ ವರ್ಷಕ್ಕೊಮ್ಮೆ ಆಕರ್ಷಕ ಉಡುಗೊರೆಗಳನ್ನು ನೀಡುವ ಪರಿಪಾಠವನ್ನು ಕಂಪನಿ ಅನುಸರಿಸಿಕೊಂಡು ಬಂದಿದೆ.

ಕಳೆದ ವರ್ಷ ಸಾವ್ಜಿ ಕಂಪನಿಯು 491 ಕಾರ್‌ಗಳು, 200 ಫ್ಲಾಟ್‌ಗಳನ್ನು ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಿತ್ತು. 2014ರಲ್ಲಿ ವೃತ್ತಿ ದಕ್ಷತೆ ಗುರ್ತಿಸಿ ಉದ್ಯೋಗಿಗಳಿಗೆ ಇನ್ಸೆಂಟೀವ್‌ ನೀಡಲು 50 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು.

ಅಮ್ರೇಲಿ ಜಿಲ್ಲೆಯ ದುಧಾಲಾ ಗ್ರಾಮದ ಸಾವ್ಜಿಯದು ಶ್ರಮದ ಹಾದಿ. ತನ್ನ ಚಿಕ್ಕಪ್ಪನಿಂದ ಸಾಲ ಪಡೆದು ವಜ್ರದ ವ್ಯವಹಾರ ಆರಂಭಿಸಿ, ಇಂದು ನೂರಾರು ಕೋಟಿ ರೂ.ಗಳ ಒಡೆಯರಾಗಿ ಬೆಳೆದಿದ್ದಾರೆ. ''ನಾನು ಹಣವನ್ನು ಏಕಾಏಕಿ ಗಳಿಸಿಲ್ಲ. ಅದರ ಹಿಂದೆ ದೊಡ್ಡ ಶ್ರಮವಿದೆ,'' ಎಂದು ಸಾವ್ಜಿ ಹೇಳುತ್ತಿರುತ್ತಾರೆ. ಸುಮಾರು 6000 ಕೋಟಿ ರೂ. ವ್ಯವಹಾರವನ್ನು ಅವರು ಹೊಂದಿದ್ದಾರೆ.

ಮಗನನ್ನು ಮನೆಯಿಂದ ಹೊರಹಾಕಿದ್ದರು!

ಹಣದ ಬೆಲೆಯನ್ನು ತಮ್ಮ ಮಗ ದ್ರವ್ಯನಿಗೆ ಅರ್ಥ ಮಾಡಿಸಲು ಸಾವ್ಜಿ ಈ ಹಿಂದೆ ಪ್ರಯತ್ನಿಸಿದ್ದರು. ಮೂರು ಜತೆ ಬಟ್ಟೆ ಮತ್ತು ತುರ್ತು ಹಣವಾಗಿ 7,000 ರೂ.ಗಳನ್ನಷ್ಟೇ ನೀಡಿ ಮನೆಯಿಂದ ಮಗನನ್ನು ಆಚೆ ಕಳುಹಿಸಿದ್ದರು. ತನ್ನ ಕಾಲ ಮೇಲೆ ತಾನು ನಿಲ್ಲುವ ಶಕ್ತಿ ಬರಲೆಂದು ಹಾಗೆ ಮಾಡಿದ್ದರು. ಕೊಚ್ಚಿಗೆ ಬಂದಿದ್ದ ದ್ರವ್ಯ, ಅಲ್ಲಿ ನಾನಾ ಕೆಲಸಗಳನ್ನು ಮಾಡಿ, ದುಡಿಮೆಯ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದರು.

ಮಂಗಳೂರಿನ ಉದಾರಿ ಉದ್ಯಮಿ

ಸಾವ್ಜಿಯವರಂತೆಯೇ ಮಂಗಳೂರಿನ ವರದರಾಜ ಕಮಲಾಕ್ಷ ನಾಯಕ್‌ ಎಂಬ ಉದ್ಯಮಿಯೊಬ್ಬರು ತಮ್ಮ 12 ಮಂದಿ ನೌಕರರಿಗೆ ಟಾಟಾ ನ್ಯಾನೊ ಕಾರುಗಳನ್ನು ಕಳೆದ ವರ್ಷ ಉಡುಗೊರೆಯಾಗಿ ನೀಡಿದ್ದರು. ಉದ್ಯೋಗಿಗಳಿಂದಲೇ ತಾವು ಇಷ್ಟೆಲ್ಲ ಗಳಿಸಲು ಸಾಧ್ಯವಾಯಿತು ಎಂಬುದಾಗಿ ಅವರು ಹೇಳಿದ್ದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>