Quantcast
Channel: VijayKarnataka
Viewing all articles
Browse latest Browse all 6795

ಬೆಲ್ಜಿಯಂಗೆ ಶರಣಾದ ಭಾರತ ಹಾಕಿ ತಂಡ

$
0
0

4 ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿ

ವಲೆನ್ಸಿಯಾ: ಸ್ಫೂರ್ತಿದಾಯಕ ಪ್ರದರ್ಶನ ತೋರುವಲ್ಲಿ ವಿಫಲಗೊಂಡ ಭಾರತ ಕಿರಿಯರ ಪುರುಷರ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಪರಾಭವಗೊಂಡಿದೆ.

ಸತತ ಎರಡನೇ ಜಯದ ವಿಶ್ವಾಸದೊಂದಿಗೆ ಬುಧವಾರ ಕಣಕ್ಕಿಳಿದ ಭಾರತ 2-4 ಗೋಲ್‌ಗಳಿಂದ ಬೆಲ್ಜಿಯಂಗೆ ಶರಣಾಯಿತು. ಇದಕ್ಕೂ ಮುನ್ನ ತನ್ನ ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ 3-1 ಗೋಲ್‌ಗಳಿಂದ ಗೆದ್ದು ಶುಭಾರಂಭ ಮಾಡಿತ್ತು.

ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಬೆಲ್ಜಿಯಂ ಭಾರತೀಯರ ಮೇಲೆ ಒತ್ತಡ ಹೇರುವ ಯತ್ನ ನಡೆಸಿತು. ಇದರ ಫಲವಾಗಿ ಮೊದಲನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್‌ ಅವಕಾಶ ಗಿಟ್ಟಿಸಿದ ಬೆಲ್ಜಿಯಂ, ವಿಕ್ಟೋರ್‌ ವೆಗ್ನೆಜ್‌ ಅವರ ಸಹಾಸದಿಂದ ಗೋಲಿನ ಖಾತೆ ತೆರೆಯಿತು. ನಂತರ ಉಭಯ ತಂಡಗಳು ಗೋಲ್‌ ಸಿಡಿಸಲು ಹಲವು ಬಾರಿ ಯತ್ನಿಸಿದವಾದರೂ ಯಶ ಸಿಗಲಿಲ್ಲ. ಇದರ ಮಧ್ಯೆ 4ನೇ ನಿಮಿಷದಲ್ಲಿ ಎರಡನೇ ಪೆನಾಲ್ಟಿ ಅವಕಾಶ ಪಡೆದ ಭಾರತದ ಗೋಲ್‌ ಸಮಬಲ ಸಾಧಿಸುವ ಸುಲಭ ಅವಕಾಶ ಹೊಂದಿತ್ತು. ಆದರೆ ಎದುರಾಳಿ ತಂಡದ ಲೊಯಿಕ್‌ ವ್ಯಾನ್‌ ಡೊರೆನ್‌ ಅವರ ಭದ್ರ ರಕ್ಷ ಣೆಯಿಂದಾಗಿ ಭಾರತದ ಯತ್ನ ಕೈಗೂಡಲಿಲ್ಲ.

ತಿರುಗೇಟು ನೀಡಿದ ಭಾರತ

11ನೇ ನಿಮಿಷದಲ್ಲಿ ಎರಡನೇ ಬಾರಿ ಪೆನಾಲ್ಟಿ ಕಾರ್ನರ್‌ ಅವಕಾಶ ಗಿಟ್ಟಿಸಿದ ಭಾರತಕ್ಕೆ ಯಾವುದೇ ತಪ್ಪೆಸಗದೆ ಹರ್ಮನ್‌ಪ್ರೀತ್‌ ಸಿಂಗ್‌ ಗೋಲ್‌ ಸಿಡಿಸಿ ಭಾರತದ ತಿರುಗೇಟಿಗೆ ಕಾರಣರಾದರು. ನಂತರದ ನಾಲ್ಕು ನಿಮಿಷಗಳ ಆಟದಲ್ಲಿ ಉಭಯ ತಂಡಗಳು ಹಲವು ಬಾರಿ ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದರೂ ಗೋಲ್‌ ಮಾತ್ರ ದಾಖಲಾಗಲಿಲ್ಲ. ಹೀಗಾಗಿ 1-1ರಲ್ಲಿ ಮೊದಲ ಕ್ವಾರ್ಟರ್‌ ಅಂತ್ಯಗೊಂಡಿತು.

ಎರಡನೇ ಕ್ವಾರ್ಟರ್‌ನಲ್ಲಿ ಬಿಗುವಿನ ಆಟವಾಡಿದ ಬೆಲ್ಜಿಯಂ ಭಾರತೀಯರ ಕೈಗೆ ಚೆಂಡು ಸಿಗದಂತೆ ಎಚ್ಚರವಹಿಸಿ ಮೇಲುಗೈ ಸಾಧಿಸಿತು. ಮೂರನೇ ಕ್ವಾರ್ಟರ್‌ ಆಟವು ಇದಕ್ಕೆ ಹೊರತಾಗಿರಲಿಲ್ಲ. ಆದರೆ ನಾಲ್ಕನೇ ಕ್ವಾರ್ಟರ್‌ನಲ್ಲಿ ಪರಿಣಾಮಕಾರಿ ಆಟಕ್ಕೆ ಆದ್ಯತೆ ನೀಡಿದ ಬೆಲ್ಜಿಯಂ ಪರ ಫ್ಯಾಬ್ರಿಕ್‌ ವಾನ್‌ ಬೊಕ್ರಿಜಕ್‌(49ನೇ ನಿಮಿಷ), ಆಂಟೊನೆ ಕಿನಾ (56ನೇ ನಿಮಿಷ) ಮತ್ತು ಜಾರ್ಜ್‌ ಸ್ಟಾಕ್‌ಬ್ರೊಕ್ಸ್‌ (57ನೇ ನಿಮಿಷ) ತಲಾ ಒಂದು ಗೋಲ್‌ ಬಾರಿಸಿ ಜಯದ ರೂವಾರಿಯಾಗಿ ಕಂಗೊಳಿಸಿದರು. 60ನೇ ನಿಮಿಷದಲ್ಲಿ ಅಜಯ್‌ ಯಾದವ್‌ ಅವರ ನೆರವಿನಿಂದ ಭಾರತ ಒಂದು ಗೋಲ್‌ ದಾಖಲಿಸಿತಾದರೂ ಎರಡು ಗೋಲ್‌ಗಳ ಕೊರತೆಯಿಂದ ಸೋಲನುಭವಿಸಿತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್