Quantcast
Channel: VijayKarnataka
Viewing all articles
Browse latest Browse all 6795

ಮುಕುಂದ ಮುರಾರಿ ಚಿತ್ರ ಖುಷಿ ಕೊಟ್ಟಿದೆ

$
0
0

ನಂದ ಕಿಶೋರ್‌ ನಿರ್ದೇಶನದ ಮುಕುಂದ ಮುರಾರಿ ಚಿತ್ರ ಇದೇ ಶುಕ್ರವಾರ (ಅ.28) ರಿಲೀಸ್‌ ಆಗಲಿದೆ. ಸುದೀಪ್‌ ಮತ್ತು ಉಪೇಂದ್ರ ನಟನೆಯ ಈ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ ನಿರ್ಮಾಪಕಿ ಜಯಶ್ರೀ ದೇವಿ. ಮುಕುಂದ ಮುರಾರಿ ತಮಗೆ ಬಿಗ್‌ ರೀ ಎಂಟ್ರಿ ಎಂದಿದ್ದಾರೆ ಅವರು.

- ಪದ್ಮಾ ಶಿವಮೊಗ್ಗ

ಅಮೃತವರ್ಷಿಣಿ, ಸ್ನೇಹಲೋಕ, ನಮ್ಮೂರ ಮಂದಾರ ಹೂವೆ, ನಿಶ್ಯಬ್ದ, ವಂದೇ ಮಾತರಂ, ಶ್ರೀ ಮಂಜುನಾಥ ಸೇರಿದಂತೆ ಅನೇಕ ಕನ್ನಡ ಹಿಟ್‌ ಚಿತ್ರಗಳನ್ನು ಕೊಟ್ಟಿರುವ ನಿರ್ಮಾಪಕಿ ಜಯಶ್ರೀ ದೇವಿ, ಏಳು ವರ್ಷಗಳ ನಂತರ ಮತ್ತೆ ಇದೀಗ ಕನ್ನಡದಲ್ಲಿ ಮುಕುಂದ ಮುರಾರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದು ಇದೇ ವಾರ (ಅ.28) ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದು, ಸಿನಿಮಾ ತಮ್ಮ ನಿರೀಕ್ಷೆಯಂತೆಯೇ ಮೂಡಿಬಂದಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಚಿತ್ರದ ಪ್ರೊಡಕ್ಷನ್‌ ಕೆಲಸವನ್ನು ತಾವೇ ಖುದ್ದು ನಿರ್ವಹಿಸಿದ್ದಾರೆ. ವಿತರಕ ಮತ್ತು ನಿರ್ಮಾಪಕ ಎಂ.ಎನ್‌. ಕುಮಾರ್‌ ಸಹ ನಿರ್ಮಾಣದೊಂದಿಗೆ ಎಂಎನ್‌ಕೆ ಮೂವೀಸ್‌ ಬ್ಯಾನರ್‌ನಡಿ ಚಿತ್ರ ನಿರ್ಮಾಣಗೊಂಡಿದೆ.

'ಏಳು ವರ್ಷಗಳ ಗ್ಯಾಪ್‌ನಲ್ಲಿ ತೆಲುಗಿನಲ್ಲಿ ಮೂರು ಚಿತ್ರಗಳನ್ನು ಮಾಡಿದೆ. ಆದರೆ ಮತ್ತೆ ಕನ್ನಡದಲ್ಲೇ ಚಿತ್ರ ಮಾಡಬೇಕೆನ್ನೋ ಆಸೆ ಈಗ ಈಡೇರಿದೆ. ಚಿತ್ರದ ರೀಮೇಕ್‌ ರೈಟ್ಸ್‌ ಇಟ್ಟುಕೊಂಡು ಕುಮಾರ್‌ರನ್ನು ಸಿನಿಮಾ ಮಾಡೋಣ ಎಂದು ಕೇಳಿದೆ. ಅವರು ಪೂರ್ಣ ಬೆಂಬಲ ನೀಡಿದರು. ನನಗೆ ಪ್ರೊಡಕ್ಷನ್‌ ಕೆಲಸ ಮಾಡಲು ಹೇಳಿ, ಉಳಿದದ್ದನ್ನು ತಾವು ನೋಡಿಕೊಳ್ಳುವುದಾಗಿ ನುಡಿದರು. 100% ಶ್ರಮ ಹಾಕಿದ್ದೇನೆ. ಯಾವುದರಲ್ಲೂ ರಾಜಿ ಮಾಡಿಕೊಳ್ಳದೇ ರಿಚ್‌ ಆಗಿ ಸಿನಿಮಾ ಮಾಡಿದ್ದೇವೆ' ಎನ್ನುತ್ತಾರೆ ಜಯಶ್ರೀ ದೇವಿ.

ಈ ಚಿತ್ರ ಹಿಂದಿಯ ಓ ಮೈ ಗಾಡ್‌ ಸಿನಿಮಾದ ರೀಮೇಕ್‌ ಆಗಿದ್ದರೂ, ಅಲ್ಲಿ ಹೇಳದೆ ಬಿಟ್ಟ ಎಷ್ಟೋ ವಿಷಯಗಳು ಮುಕುಂದ ಮುರಾರಿ ಚಿತ್ರದಲ್ಲಿವೆ ಎಂಬುದು ಈ ನಿರ್ಮಾಪಕಿಯ ಮಾತು, 'ಚಿತ್ರದ ಸ್ಕ್ರೀನ್‌ ಪ್ಲೇ ಹಿಂದಿ ಚಿತ್ರಕ್ಕಿಂತ ಚೆನ್ನಾಗಿದೆ. ಕನ್‌ಕ್ಲೂಡ್‌ ಕ್ಲಿಯರ್‌ ಆಗಿದೆ. ಚಿತ್ರದಲ್ಲಿ ಉಪೇಂದ್ರರನ್ನು ಲೇಡೀಸ್‌ ಇನ್ನೂ ಹೆಚ್ಚು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ. ಸುದೀಪ್‌ ಮತ್ತು ಉಪೇಂದ್ರ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಚಿತ್ರ ಇಷ್ಟವಾಗುತ್ತೆ' ಎನ್ನುತ್ತಾರೆ ಅವರು.

'ಸಿನಿಮಾದಲ್ಲಿ ಹೆಂಡತಿ ಮಕ್ಕಳಿಗಾಗಿ ಉಪೇಂದ್ರ ಮಾಡುವ ಹೋರಾಟ ಪ್ರೇಕ್ಷಕರಿಗೆ ಹಿಡಿಸುತ್ತೆ. ದೇವರು ಅಂದ್ರೆ ಏನು?ನಮ್ಮ ನಡವಳಿಕೆ ಹೇಗಿರಬೇಕು? ಮನುಷ್ಯತ್ವವೇ ದೇವರು ಅನ್ನೋದು ಚಿತ್ರದಲ್ಲಿದೆ. ಇದನ್ನು ನೋಡಿದ ಪ್ರೇಕ್ಷಕರು ಪ್ರಾಕ್ಟಿಕಲ್‌ ಆಗಿ ಯೋಚಿಸುತ್ತಾರೆ. ಫುಲ್‌ ಎಂಟರ್‌ಟೇನ್‌ಮೆಂಟ್‌ ಇದೆ' ಎಂಬ ಮಾತನ್ನೂ ಸೇರಿಸುತ್ತಾರೆ ಜಯಶ್ರೀ ದೇವಿ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್