Quantcast
Channel: VijayKarnataka
Viewing all articles
Browse latest Browse all 6795

ಬರಲಿವೆ ‘ಗಾಜಿನ ಛಾವಣಿ’ಯ ಐಷಾರಾಮಿ ರೈಲುಗಳು

$
0
0

ಸ್ವಿಟ್ಜರ್‌ಲೆಂಡ್‌ನಿಂದ ಪ್ರೇರಿತಗೊಂಡ ಇಲಾಖೆ / ಮೊದಲ ಹಂತದಲ್ಲಿ ಕಾಶ್ಮೀರ, ಅರಕು ಕಣಿವೆಯಲ್ಲಿ ಜಾರಿ

ಹೊಸದಿಲ್ಲಿ: ದೇಶಿ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯಲು ಭಾರತೀಯ ರೈಲ್ವೆ ಇಲಾಖೆ ಗಾಜಿನ ಛಾವಣಿಯುಳ್ಳ ವಿಶೇಷ ವಿನ್ಯಾಸದ ಬೋಗಿಗಳನ್ನು ಆಯ್ದ ಮಾರ್ಗಗಳಲ್ಲಿ ಪರಿಚಯಿಸಲಿದೆ. ಡಿಸೆಂಬರ್ ಹೊತ್ತಿಗೆ ಮೊದಲ ಹಂತದ ಯೋಜನೆ ಜಾರಿಗೆ ಬರಲಿದೆ.

ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಮತ್ತು ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಜೇಷನ್ (ಆರ್‌ಡಿಎಸ್‌ಒ) ಹಾಗೂ ಪೆರಂಬದೂರಿನ ಇಂಟಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಜಂಟಿಯಾಗಿ ‘ಗ್ಲಾಸ್ ಸೀಲಿಂಗ್’ ಬೋಗಿಗಳನ್ನು ಅಭಿವೃದ್ಧಿಗೊಳಿಸಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಇಂತಹ ಬೋಗಿಗಳಿದ್ದು, ‘ಮಹಾರಾಜಾಸ್ ಎಕ್ಸ್‌ಪ್ರೆಸ್’ ಇಲ್ಲವೇ ‘ಪ್ಯಾಲೇಸ್ ಆನ್ ವ್ಹೀಲ್ಸ್’ನಂತಹ ಐಶಾರಾಮಿ ಸೌಲಭ್ಯದ ರೈಲುಗಳಲ್ಲಿ ಇಂತಹ ಬೋಗಿಗಳನ್ನು ಅಳವಡಿಸುವ ಚಿಂತನೆ ಇಲಾಖೆಗಿದೆ. ಸಿರಿವಂತ ದೇಶೀಯ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.

4 ಕೋಟಿ ರೂ. ವೆಚ್ಚ:

ರೈಲ್ವೆ ಇಲಾಖೆಗೆ ಆಧುನಿಕ ಸ್ಪರ್ಶ ನೀಡಬೇಕೆಂಬ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಕೈಗೊಂಡ ಸುಧಾರಣಾ ಕ್ರಮಗಳ ಭಾಗವಾಗಿ 2015ರಲ್ಲಿ ಇಂತಹ ಒಂದು ಯೋಜನೆಗೆ ಚಾಲನೆ ದೊರೆತಿತ್ತು. ರೈಲ್ವೆ ಇಲಾಖೆಯು, ತಲಾ 4 ಕೋಟಿ ರೂ. ವೆಚ್ಚದಲ್ಲಿ ಇಂತಹ ಮೂರು ಬೋಗಿಗಳನ್ನು ಈ ತಯಾರಿಸಿದೆ. ಮೊದಲ ಹಂತವಾಗಿ ಕಾಶ್ಮೀರ ಕಣಿವೆಯಲ್ಲಿ ಒಂದು ಮತ್ತು ವಿಶಾಖಪಟ್ಟಣಂ ಸಮೀಪದ ‘ಅರಕು’ ಕಣಿವೆಯಲ್ಲಿ ಹಾದುಹೋಗುವ ಮಾರ್ಗಗಳಲ್ಲಿ ಸಂಚರಿಸುವ ಎರಡು ಆಯ್ದ ರೈಲುಗಳಿಗೆ ಈ ಬೋಗಿಗಳನ್ನು ಅಳವಡಿಸಲಾಗುವುದು. ಭಾರತದಲ್ಲಿ ಇದೊಂದು ಮೊದಲ ಪ್ರಯೋಗವಾಗಲಿದ್ದು, ವಿಶ್ವದರ್ಜೆಯ ಗುಣಮಟ್ಟ ಕಾಪಾಡಿಕೊಳ್ಳಲಾಗುವುದು ಎನ್ನುತ್ತಾರೆ ಐಆರ್‌ಸಿಟಿಸಿಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಮನೋಚಾ.

ತಿರುಗುವ ಕುರ್ಚಿ:

‘ಗ್ಲಾಸ್ ಸೀಲಿಂಗ್’ ಅಳವಡಿಸಿದ ಬೋಗಿಗಳು ಐಶಾರಾಮಿ ಸೌಲಭ್ಯ ಒಳಗೊಂಡಿರುತ್ತವೆ. ಬೋಗಿಯಲ್ಲಿ ತಿರುಗುವ ಕುರ್ಚಿ ಇರುತ್ತದೆ. ಅದರಲ್ಲಿ ಕುಳಿತು ಪ್ರಯಾಣಿಕರು ಭಗಶಃ ಗಾಜಿನ ಛಾವಣಿಯ ಮೂಲಕ ವೈಮಾನಿಕ ನೋಟವನ್ನು ಸವಿಯಬಹುದು. ಜತೆಗೆ ಅತ್ಯಾಧುನಿಕ ಕಿಟಕಿಗಳ ಮೂಲಕ ಪ್ರಾಕೃತಿಕ ಸೌಂದರ್ಯವನ್ನು ಅನುಭವಿಸಬಹುದು. ಆರಾಮವಾಗಿ ಕಾಲು ಚಾಚಲು ಆಸನದ ಮುಂಭಾಗ ಸಾಕಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ. ಜತೆಗೆ ಟಿವಿ, ಇಂಟರ್‌ನೆಟ್ ಸೇರಿದಂತೆ ನಾನಾ ಬಗೆಯ ಮನೋರಂಜನಾ ವ್ಯವಸ್ಥೆಯೂ ಲಭ್ಯವಿರಲಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>