Quantcast
Channel: VijayKarnataka
Viewing all articles
Browse latest Browse all 6795

ಯೋಧರ ಕೊಂಡಾಡಿದ ಭಾಗವತ್

$
0
0

ನಾಗ್ಪುರ: ಬಲ್ಟಿಸ್ಥಾನ, ಗಿಲ್ಗಿಟ್, ಮಿರ್‌ಪುರ, ಮುಜಾಫರಬಾದ್ ಸೇರಿದಂತೆ ಸಮಸ್ತ ಕಾಶ್ಮೀರವೂ ಭಾರತದ ಅವಿಭಾಜ್ಯ ಅಂಗ. ಈ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪನಾ ದಿನವಾದ ವಿಜಯ ದಶಮಿಯಂದು ಕೇಂದ್ರ ಕಚೇರಿಯಿರುವ ನಾಗ್ಪುರದಲ್ಲಿ ನಡೆದ ಬೃಹತ್ ಶೋಭಾಯಾತ್ರೆ ಹಾಗೂ ಸಮಾವೇಶ ಉದ್ದೇಶಿಸಿ ಮಾತನಾಡಿದ ಭಾಗವತ್, ಪಿಒಕೆಗೆ ನುಗ್ಗಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆಯ ‘ಸರ್ಜಿಕಲ್ ದಾಳಿ’ಯನ್ನು ಮನಸಾರೆ ಕೊಂಡಾಡಿದರು. ಸೇನೆಯು ಇಂತಹ ದಿಟ್ಟ ಕ್ರಮ ಕೈಗೊಳ್ಳುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸರಕಾರದ ದೃಢ ನಿರ್ಧಾರವೇ ಕಾರಣ ಎಂದು ಮೋದಿ ನಾಯಕತ್ವವನ್ನು ಶ್ಲಾಘಿಸಿದರು.

ಉಗ್ರ ದಮನದ ಮೂಲಕ ಭಾರತವು, ತನ್ನ ಸಹನೆಗೂ ಒಂದು ಮಿತಿಯಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಉಗ್ರರ ಹುಟ್ಟಡಗಿಸಲು ನಮ್ಮ ಸೇನೆ ತೋರುತ್ತಿರುವ ಧೀರ ಹೋರಾಟವನ್ನು ರಾಜಕೀಯ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಮುಕ್ತ ಮುನಸ್ಸಿನಿಂದ ಬೆಂಬಲಿಸಬೇಕು. ಅಲ್ಲದೆ ಉಗ್ರ ಪೋಷಕ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರಕ್ಕೆ ಸಾಥ್ ನೀಡಬೇಕು ಎಂದು ಕರೆಕೊಟ್ಟರು.

ಹಣೆಪಟ್ಟಿ ಬೇಡ:

‘‘ಗೋ ರಕ್ಷಣೆಯ ನೆಪದಲ್ಲಿ ಯಾರೋ ಕೆಲ ದುರುಳರು ದಲಿತರ ವಿರುದ್ಧ ದೌರ್ಜನ್ಯ ನಡೆಸಿದ ಮಾತ್ರಕ್ಕೆ ಎಲ್ಲ ಗೋ ರಕ್ಷಕರಗಳನ್ನು ಢೋಂಗಿಗಳು ಎಂದು ಜರಿಯುವುದು ಸರಿಯಲ್ಲ. ಜೈನ ಸಮುದಾಯದವರು ಅತ್ಯಂತ ಪ್ರಾಮಾಣಿಕತೆಯಿಂದ ಗೋವುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಈ ವಿಚಾರದಲ್ಲಿ ಅವರ ಸೇವೆ ಅನನ್ಯ. ಹೀಗಾಗಿ ಎಲ್ಲಾ ಗೋ ರಕ್ಷಕರನ್ನು ನಕಲಿ ಎಂದು ದೂರುವುದರಿಂದ ಕಾನೂನು ಪರಿಮಿತಿಯೊಳಗೆ ಗೋವುಗಳ ರಕ್ಷಣೆಯಲ್ಲಿ ತೊಡಗಿರುವ ಜನರ ಸೇವಾ ಮನೋಭಾವಕ್ಕೆ ಧಕ್ಕೆಯಾಗುತ್ತದೆ,’’ ಎಂದು ಹೇಳಿದರು.

ಚಡ್ಡಿಯಿಂದ ಪ್ಯಾಂಟ್‌ಗೆ....

ಈ ಮೊದಲೇ ನಿರ್ಧರಿಸಿದ್ದಂತೆ ಆರೆಸ್ಸೆಸ್ ಕಾರ‌್ಯಕರ್ತರು ಕಡು ಕಂದು ಬಣ್ಣದ ಪ್ಯಾಂಟ್, ಅದೇ ಬಣ್ಣದ ಸಾಕ್ಸ್ ಮತ್ತು ಕಪ್ಪು ಟೊಪ್ಪಿಯೊಂದಿಗೆ ಗಮನ ಸೆಳೆದರು. ಇದರೊಂದಿಗೆ ಸಂಘದ ನೂತನ ಸಮವಸ್ತ್ರ ದಸರಾ ದಿನದಂದೇ ಅಧಿಕೃತವಾಗಿ ಜಾರಿಗೆ ಬಂದಂತಾಗಿದೆ. 90 ವರ್ಷದ ಇತಿಹಾಸ ಹೊಂದಿರುವ ಆರೆಸ್ಸೆಸ್‌ನ ಖಾಕಿ ಚಡ್ಡಿ, ಖಾಕಿ ಸಾಕ್ಸ್ ಮಾಯವಾಗಿ, ಈಗ ಕಂದು ಬಣ್ಣದ ಪ್ಯಾಂಟ್ ಹಾಗೂ ಕಂದು ಬಣ್ಣದ ಸಾಕ್ಸ್‌ಗಳು ಬಂದಿವೆ. ಉಳಿದಂತೆ ಬಿಳಿ ಅಂಗಿ ಹಾಗೂ ಕಪ್ಪು ಬಣ್ಣದ ಟೋಪಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>