Quantcast
Channel: VijayKarnataka
Viewing all articles
Browse latest Browse all 6795

ಮೊರೊಕೊ ರಾಲಿಯಲ್ಲಿ ಅರವಿಂದ್‌ ಮಿಂಚು

$
0
0

ಡಕಾರ್‌ ರಾರ‍ಯಲಿಗೆ ಅಧಿಕೃತ ಅರ್ಹತೆ ಪಡೆದ ಕನ್ನಡಿಗ

ಬೆಂಗಳೂರು: ಟಿವಿಎಸ್‌ ರೇಸಿಂಗ್‌ ತಂಡದ ಚಾಂಪಿಯನ್‌ ರೈಡರ್‌ ಕನ್ನಡಿಗ ಕೆ.ಪಿ ಅರವಿಂದ್‌, ಉತ್ತರ ಆಫ್ರಿಕಾದ ಮೊರೊಕೊದಲ್ಲಿ ನಡೆದ ಒಯ್ಲಿಬಿಯಾ ರಾರ‍ಯಲಿ ಆಫ್‌ ಮೊರೊಕೊದಲ್ಲಿ ಸಮಗ್ರ 26ನೇ ಸ್ಥಾನ ಪಡೆದು 2017ರ ಡಕಾರ್‌ ರಾರ‍ಯಲಿಗೆ ಅಧಿಕೃತ ಅರ್ಹತೆ ಗಿಟ್ಟಿಸಿದ್ದಾರೆ.

ಮೋಟಾರ್‌ ಸ್ಪೋರ್ಟ್ಸ್ ರಾರ‍ಯಲಿಯಲ್ಲಿ ದೇಶದ ನಂ.1 ರೈಡರ್‌ ಎನಿಸಿಕೊಂಡಿರುವ ಅರವಿಂದ್‌, ಒಯ್ಲಿಬಿಯಾ ರಾರ‍ಯಲಿಯ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ 2 ಸ್ಥಾನ ಮೇಲೇರಿ ಸಮಗ್ರ 26ನೇ ಸ್ಥಾನ ಪಡೆದರೆ, 450 ಸಿಸಿ ವಿಭಾಗದಲ್ಲಿ ಗಮನಾರ್ಹ 17ನೇ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾದರು.

ಇನ್ನು ಮೊದಲ ಪ್ರಯತ್ನದಲ್ಲಿಯೇ ರಾರ‍ಯಲಿ ಪೂರೈಸಿದ ಉಡುಪಿ ಮೂಲದ ರಾರ‍ಯಲಿಪಟು ಅರವಿಂದ್‌, ಫೆರೇಷನ್‌ ಆಫ್‌ ಇಂಟರ್‌ನ್ಯಾಷನಲ್‌ ಮೋಟಾರ್‌ಸೈಕ್ಲಿಂಗ್‌ (ಎಫ್‌ಐಎಮ್‌)ನಲ್ಲಿ 19ನೇ ರಾರ‍ಯಂಕಿಂಗ್‌ ಸಂಪಾದಿಸುವ ಮೂಲಕ ಮುಂದಿನ ವರ್ಷ ನಡೆಯಲಿರುವ ಡಕಾರ್‌ ರಾರ‍ಯಲಿಗೆ ಅಧಿಕೃತ ಪ್ರವೇಶ ಪಡೆದುಕೊಂಡರು.

''ರಾರ‍ಯಲಿ ಪೂರೈಸಿರುವುದು ರೋಮಾಂಚಕ ಅನುಭವ ನೀಡಿದೆ. ಪ್ರತಿಯೊಂದು ಹಂತವೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅತ್ಯಂತ ಸವಾಲಿನದ್ದಾಗಿತ್ತು. ಆದರೆ, ರಾರ‍ಯಲಿ ಆರಂಭಕ್ಕೂ ಮೊದಲು ಪಡೆದಿದ್ದ ನ್ಯಾವಿಗೇಷನ್‌ ತರಬೇತಿ ಹಾಗೂ ಅಭ್ಯಾಸದಿಂದ ಯಶಸ್ವಿಯಾಗಿ ಗುರಿ ಮುಟ್ಟಲು ಸಾಧ್ಯವಾಯಿತು. ಮುಂದಿನ ವರ್ಷದ ಡಕಾರ್‌ ರಾರ‍ಯಲಿಗೆ ಇಲ್ಲಿನ ಅನುಭವ ನೆರವಾಗಲಿದೆ,'' ಎಂದು ಟಿವಿಎಸ್‌ ರೇಸಿಂಗ್‌ ಪ್ರಕಟಿಸಿರುವ ಹೇಳಿಕೆಯಲ್ಲಿ ಅರವಿಂದ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಅರವಿಂದ್‌ ತಂಡದ ಸಹ ರೈಡರ್‌ಗಳಾದ ಜೊವಾನ್‌ ಪೆಡ್ರೆರೊ ಮತ್ತು ಏಡ್ರಿಯನ್‌ ಮೆಟೆಜ್‌ ಕ್ರಮವಾಗಿ 8ನೇ ಮತ್ತು 11ನೇ ಸ್ಥಾನಿಯಾಗಿ ರಾರ‍ಯಲಿ ಪೂರೈಸಿದ್ದಾರೆ.

ಸಂತೋಷ್‌ಗೆ 35ನೇ ಸ್ಥಾನ

ವಿಶ್ವದ ಅತ್ಯಂತ ಕಠಿಣ ರಾರ‍ಯಲಿಯಾದ ಡಕಾರ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊಟ್ಟ ಮೊದಲ ರೈಡರ್‌ ಖ್ಯಾತಿಯ ಕನ್ನಡಿಗ ಸಿ.ಎಸ್‌ ಸಂತೋಷ್‌ ಒಯ್ಲಿಬಿಯಾ ರಾರ‍ಯಲಿ ಆಫ್‌ ಮೊರೊಕೊದಲ್ಲಿ ಸಮಗ್ರ 35ನೇ ಸ್ಥಾನ ಪಡೆದಿದ್ದಾರೆ. ತಾಂತ್ರಿಕ ದೋಶಗಳನ್ನು ಎದುರಿಸಿ ಸಮಗ್ರ 74ನೇ ಸ್ಥಾನಕ್ಕೆ ಕುಸಿದಿದ್ದ ಹೀರೊ ಮೋಟಾರ್‌ ಸ್ಪೋರ್ಟ್ಸ್ ಟೀಮ್‌ ರಾರ‍ಯಲಿ ತಂಡದ ರೈಡರ್‌ ಸಂತೋಷ್‌, ರಾರ‍ಯಲಿಯ ಕೊನೆಯ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ 35ನೇ ಸ್ಥಾನಕ್ಕೇರುವಲ್ಲಿ ಸಫಲರಾದರು. ತಂಡದ ಮತ್ತೊಬ್ಬ ಚಾಲಕ ರಾಡ್ರೀಗಸ್‌ 14ನೇ ಸ್ಥಾನಿಯಾಗಿ ರಾರ‍ಯಲಿ ಪೂರೈಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್