Quantcast
Channel: VijayKarnataka
Viewing all articles
Browse latest Browse all 6795

ಇತಿಹಾಸ ಪುಟದತ್ತ ವಜ್ರೇಶ್ವರಿ ಕಂಬೈನ್ಸ್‌ ಕಟ್ಟಡ

$
0
0

ಬೆಂಗಳೂರಿನ ಗಾಂಧಿನಗರದಲ್ಲಿ ವಜ್ರೇಶ್ವರಿ ಕಂಬೈನ್ಸ್‌ ಸಿನಿಮಾ ನಿರ್ಮಾಣ ಕಂಪನಿಗೆ ಅದರದೇ ಆದ ಇತಿಹಾಸವಿದೆ. ವರನಟ ಡಾ. ರಾಜ್‌ಕುಮಾರ್‌ ಸೇರಿದಂತೆ ರಾಜ್‌ ಕುಟುಂಬದ ಎಲ್ಲ ನಾಯಕರ ಸಿನಿಮಾಗಳ ವ್ಯವಹಾರಗಳು ಚರ್ಚೆಯಾಗುತ್ತಿದ್ದುದು ಈ ಕಟ್ಟಡದಲ್ಲಿಯೇ. ಇಂತಹ ಕಟ್ಟಡವೀಗ ಇತಿಹಾಸ ಸೇರುತ್ತಿದೆ. ಅರ್ಥಾತ್‌ ಹಳೆಯ ಕಟ್ಟಡ ತೆರವುಗೊಂಡು ಅದೇ ಜಾಗದಲ್ಲಿ ವಜ್ರೇಶ್ವರಿ ಕಂಬೈನ್ಸ್‌ನ ಹೊಸ ಕಟ್ಟಡ ಎದ್ದುನಿಲ್ಲಲಿದೆ.

ಡಾ. ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌,ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಈಗ ವಿನಯ್‌ ರಾಜ್‌ಕುಮಾರ್‌ ಸೇರಿದಂತೆ ದೊಡ್ಡ ಮನೆಯ ಎಲ್ಲರ ಸಿನಿಮಾಗಳ ವ್ಯವಹಾರಗಳು ಇದೇ ಕಚೇರಿಯಲ್ಲಿ ರೂಪುಗೊಂಡಿದ್ದು. ಸಿನಿಮಾ ಸಂಬಂಧಿ ಚರ್ಚೆಗಳು, ನಿರ್ದೇಶಕರು ಮತ್ತು ನಿರ್ಮಾಪಕರ ಭೇಟಿಗಳು ಎಲ್ಲವೂ ಇಲ್ಲಿಯೇ ನಡೆಯುತ್ತಿದ್ದವು. ದಿನ ಕಳೆದಂತೆ ಈ ಕಟ್ಟಡದಲ್ಲಿ ಎಡಿಟಿಂಗ್‌ ಸೇರಿದಂತೆ ಸಾಕಷ್ಟು ಸಿನಿಮಾ ಸಂಬಂಧಿ ಕೆಲಸಗಳು ಆರಂಭವಾದವು. ಆದರೆ ಕಟ್ಟಡವೀಗ ಹಳತಾಗಿದೆ. ಮಳೆ ಬಂದರೆ ಕೆಲವು ಕಡೆ ಸೋರುವುದು ಸೇರಿದಂತೆ ಅನೇಕ ಸಮಸ್ಯೆಗಳು ಇವೆ. ಇದನ್ನು ಗಮನಿಸಿದ ರಾಘವೇಂದ್ರ ರಾಜ್‌ಕುಮಾರ್‌ ಇದೇ ಜಾಗದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ತೀರ್ಮಾನಿಸಿದ್ದು, ಅದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎಡಿಟಿಂಗ್‌ ಸ್ಟೂಡಿಯೋ, ಡಬ್ಬಿಂಗ್‌ ಸ್ಟೂಡಿಯೋ, ಚಿತ್ರ ಪ್ರದರ್ಶನಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅವರ 25 ನೇ ಸಿನಿಮಾ ದೊಡ್ಮನೆ ಹುಡುಗ ಸಿನಿಮಾದ ಎಡಿಟಿಂಗ್‌ ಇಲ್ಲಿ ನಡೆಯುವ ಸಿನಿಮಾ ಸಂಬಂಧಿತ ಕೊನೆಯ ಕೆಲಸವಾಗಲಿದೆ. ಒಂದು ವರ್ಷದೊಳಗೆ ಹೊಸ ಕಟ್ಟಡ ತಲೆ ಎತ್ತುವ ನಿರೀಕ್ಷೆಯೂ ಇದೆ.

ವಜ್ರೇಶ್ವರಿ ಕಂಬೈನ್ಸ್‌ನ ಸದ್ಯದ ಕಟ್ಟಡ ಹಳೆಯದಾಗಿದೆ. ಹಾಗಾಗಿ ಅದನ್ನು ರಿನೋವೇಷನ್‌ ಮಾಡುತ್ತಿದ್ದೇವೆ. ಅದೇ ಜಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎಡಿಟಿಂಗ್‌, ಡಬ್ಬಿಂಗ್‌ ಇರುವ ಸ್ಟುಡಿಯೋ ನಿರ್ಮಾಣ ಮಾಡುವ ಯೋಚನೆ ಇದೆ.

- ಗುರು ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಪುತ್ರ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>