Quantcast
Channel: VijayKarnataka
Viewing all articles
Browse latest Browse all 6795

ಅರ್ಜುನ್‌ ಜನ್ಯ ಹೊಸ ಟ್ರೆಂಡ್‌

$
0
0

ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯ 'ಸರಿಯಾಗಿ ನೆನಪಿದೆ' ಹಾಡು ಸಾಮಾಜಿಕ ಜಾಲತಾಣದಲ್ಲಿ ಹೊಸ ರೀತಿಯ ಟ್ರೆಂಡ್‌ ಸೆಟ್‌ ಮಾಡಿದೆ. ಹಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ ಫೇಮಸ್‌ ಆಗಿರುವ ಕವರ್‌ ವರ್ಷನ್‌ ಟ್ರೆಂಡ್‌ ಈ ಗೀತೆಗೆ ಸಿಕ್ಕಿದೆ.

ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯರ ಹಾಡೊಂದು 'ಕವರ್‌ ವರ್ಷನ್‌' ಟ್ರೆಂಡ್‌ಗೆ ಸಾಕ್ಷಿಯಾಗಿದೆ. ಎರಡು ವಾರಗಳ ಹಿಂದೆ ತೆರೆಕಂಡ ಮುಂಗಾರು ಮಳೆ-2 ಸಿನಿಮಾದ 'ಸರಿಯಾಗಿ ನೆನಪಿದೆ ನನಗೆ' ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆ ಬರೆದಿದೆ. ಹಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ ಫೇಮಸ್‌ ಆಗಿರುವ ಕವರ್‌ ವರ್ಷನ್‌ ಟ್ರೆಂಡ್‌ಗೆ ಈ ಹಾಡು ಸಾಕ್ಷಿಯಾಗಿದ್ದು ವಿಶೇಷ.

ಕವರ್‌ ವರ್ಷನ್‌ ಟ್ರೆಂಡ್‌ ಕನ್ನಡಕ್ಕೆ ಹೊಸದಾಗಿರುವ ಕಾರಣ, ಹಾಗೆಂದರೇನು ಅನ್ನುವ ಕುತೂಹಲ ಎಲ್ಲರದ್ದು. ಅದಕ್ಕೆ ಅರ್ಜುನ್‌ ಜನ್ಯ ಕೊಡುವ ಉತ್ತರ ಹೀಗೆ, 'ತಮಗಿಷ್ಟವಾದ ಗೀತೆಯನ್ನು ತಮ್ಮದೇ ಶೈಲಿಯಲ್ಲಿ ನಿರೂಪಿಸುವುದೇ ಕವರ್‌ ವರ್ಷನ್‌. ಸರಿಯಾಗಿ ನೆನಪಿದೆ ಹಾಡನ್ನು ಪ್ರೇಕ್ಷಕರು ತಮ್ಮದೇ ಆದ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಕೆಲವರು ಸಾಂಗ್‌ ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇನ್ನೂ ಕೆಲವರು ಗುಂಪು ಮಾಡಿಕೊಂಡು ಹಾಡಿಗೆ ಹೆಜ್ಜೆ ಹಾಕಿ ಅದನ್ನು ಚಿತ್ರೀಕರಿಸಿದ್ದಾರೆ. ಮಕ್ಕಳು, ವೃದ್ಧರು, ದಂಪತಿಗಳು ಹೀಗೆ ವಯಸ್ಸನ್ನೂ ಮರೆತು ಹಾಡಿನಲ್ಲಿ ಒಂದಾಗಿದ್ದಾರೆ. ಇದೊಂದು ಹೊಸ ಟ್ರೆಂಡ್‌' ಅಂತಾರೆ.

ಸದ್ಯ ಈ ಟ್ರೆಂಡ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅರ್ಜುನ್‌ ಜನ್ಯ ಅವರ ಹಾಡನ್ನು ಇಷ್ಟಪಡುವವರು, ಮತ್ತೆ ಆ ಹಾಡನ್ನು ತಮ್ಮದೇ ಧ್ವನಿಯಲ್ಲಿ ಹಾಡಿ ರಂಜಿಸಿದ್ದಾರೆ. ಹೀಗಾಗಿ ಸಹಜವಾಗಿಯೇ ಅರ್ಜುನ್‌ಗೆ ಸಂಭ್ರಮವಾಗಿದೆ.

'ನನ್ನ ಹಾಡುಗಳನ್ನು ಕೇಳುಗರ ಇಷ್ಟಪಡುತ್ತಿರುವುದಕ್ಕೆ ಸಹಜವಾಗಿಯೇ ಖುಷಿಯಾಗುತ್ತಿದೆ. ಡಿಜಿಟಲ್‌ ಮಾರ್ಕೆಟ್‌ಯಲ್ಲಿ ದೊಡ್ಡ ಸದ್ದು ಮಾಡುತ್ತಿವೆ ಎಂದು ಕೇಳಿದಾಗ ಥ್ರಿಲ್‌ ಆಗುತ್ತದೆ. ಐ ಟ್ಯೂನ್ಸ್‌ನಲ್ಲೂ ಟಾಪ್‌ ಕೇಳುಗರ ಲಿಸ್ಟ್‌ನಲ್ಲಿ ಕನ್ನಡದ ಚಿತ್ರವನ್ನು ಕಂಡಾಗ ಹೆಮ್ಮೆ ಆಗುತ್ತದೆ. ಮತ್ತಷ್ಟು ಹೊಸ ರೀತಿಯ ಹಾಡುಗಳನ್ನು ಕಂಪೋಸ್‌ ಮಾಡಲು ಪ್ರೇರೇಪಿಸುತ್ತದೆ' ಅನ್ನುವುದು ಅರ್ಜುನ್‌ ಮಾತು.

ಜಾನಿ ಜಾನ್‌ ಜನಾರ್ದನ್‌ ಸೇರಿದಂತೆ ಹಲವು ಸಿನಿಮಾಗಳಿಗೆ ಇವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾದ ಹಾಡುಗಳು ಕೂಡ ಮಾರುಕಟ್ಟೆಗೆ ಬರಲಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>