Quantcast
Channel: VijayKarnataka
Viewing all articles
Browse latest Browse all 6795

ಸಸ್ಪೆನ್ಸ್‌ ನೆರಳು

$
0
0

ಇತ್ತೀಚೆಗೆ ನಾಯಕಿ ಪ್ರಧಾನ ಸಿನಿಮಾಗಳು ಕಡಿಮೆ ಆಗುತ್ತಿವೆ. ಅಂತಹ ಕೊರತೆಯನ್ನು ನೀಗಿಸಲು ಸಿನಿಮಾವೊಂದು ಮೂಡಿ ಬರುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿರುವ ಚಿತ್ರವು ಹಾರರ್‌ ಕತೆಯನ್ನು ಒಳಗೊಂಡಿದೆ.

ನಾಯಕಿಯ ಪ್ರಧಾನ ಸಿನಿಮಾಗಳು ತೀರಾ ಕಡಿಮೆ ಆಗುತ್ತಿವೆ. ಆ ಕೊರತೆಯನ್ನು ತುಂಬಲು ಸಿನಿಮಾವೊಂದನ್ನು ತಯಾರು ಮಾಡಿದ್ದಾರೆ ನಿರ್ದೇಶಕ ಬಿ.ಶಶಿಧರ್‌. ತೆಲುಗು ಮತ್ತು ಕನ್ನಡದಲ್ಲಿ ಚಿತ್ರವು ಏಕಕಾಲಕ್ಕೆ ನಿರ್ಮಾಣ ಆಗಿದ್ದು, ನಾಯಕಿ ಪ್ರಧಾನ ಕತೆಯನ್ನು ಒಳಗೊಂಡಿದೆ. ಅಲ್ಲದೇ ಇದು ಹಾರರ್‌ ಚಿತ್ರ ಕೂಡ ಆಗಿದೆ.

'ನೀನು ನನ್ನನ್ನು ಮುಟ್ಟಲಾರೆ' ಎಂಬ ಅಡಿ ಬರಹ ಚಿತ್ರಕ್ಕಿದ್ದು, ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಚಿತ್ರಕತೆ ಹೊಂದಿದೆ. 'ನೆರಳು ನಮ್ಮನ್ನು ತುಂಬಾನೇ ಭಯ ಬೀಳಿಸುತ್ತದೆ. ಆ ನೆರಳಿನ ಹಿಂದಿರುವ ರೋಚಕ ಘಟನೆಗಳನ್ನು ಸಿನಿಮಾ ಮಾಡಿದ್ದೇನೆ. ನೆರಳಿಗೆ ಬಣ್ಣ ಇರದೇ ಇದ್ದರೂ, ಅದಕ್ಕೆ ಬಣ್ಣ ತುಂಬುವ ಕೆಲಸ ಈ ಸಿನಿಮಾದಲ್ಲಿ ಆಗಿದೆ. ಹೀಗಾಗಿಯೇ ಇದು ವಿಭಿನ್ನ ಸಿನಿಮಾ ಎಂದು ಹೇಳುತ್ತೇನೆ' ಅಂತಾರೆ ನಿರ್ದೇಶಕರು.

ನಿರ್ದೇಶಕರೇ ಚಿತ್ರಕತೆ ಬರೆದದ್ದು, ಹೊಸ ಹುಡುಗರನ್ನು ಈ ಸಿನಿಮಾದ ಮೂಲಕ ಪರಿಚಯಿಸುತ್ತಿದ್ದಾರೆ. ಧಾರವಾಡ ಮೂಲದ ಪ್ರೀತಿ ಸಿನಿಮಾದ ನಾಯಕಿ. ಇವರಿಲ್ಲಿ ಕ್ಲಾಸಿಕಲ್‌ ಡ್ಯಾನ್ಸರ್‌ ಆಗಿ ಕಾಣಿಸಿಕೊಂಡಿದ್ದಾರೆ. 'ಇದು ನನ್ನ ಮೊದಲ ಸಿನಿಮಾ. ಚೊಚ್ಚಲು ಸಿನಿಮಾದಲ್ಲೇ ನನಗೆ ಉತ್ತಮ ಪಾತ್ರ ಸಿಕ್ಕಿದೆ. ನಿರ್ದೇಶಕರು ನನ್ನ ಮೇಲೆ ನಂಬಿಕೆ ಇಟ್ಟು ಪಾತ್ರ ನೀಡಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ ಅನ್ನುವ ವಿಶ್ವಾಸ ನನ್ನದು' ಅಂತಾರೆ ಪ್ರೀತಿ.

ನರೇಶ್‌ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿ ಬಂದಿದ್ದು, ನಂದಿನಿ ಮೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ತಮಿಳು ನಟ ನಾಜಿರ್‌, ಟೆನ್ನಿಸ್‌ ಕೃಷ್ಣ,ಊರ್ಮಿಳಾ, ಶ್ರೀತೇಜ ಮೊದಲಾದವರ ತಾರಾ ಬಳಗವಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್