Quantcast
Channel: VijayKarnataka
Viewing all articles
Browse latest Browse all 6795

ಕುಣಿಸಿದ ಪ್ರೇಮಾಸುರ

$
0
0

ದಕ್ಷಿಣ ಭಾರತದ ಫೇಮಸ್‌ ಕೊರಿಯೋಗ್ರಾಫರ್‌ ಪ್ರೇಮ್‌ ರಕ್ಷಿತ್‌, ಕನ್ನಡದ ಪ್ರೇಮಾಸುರ ಚಿತ್ರದ ಹಾಡಿಗಾಗಿ ವಿಶೇಷ ಕೊರಿಯೋಗ್ರಫಿ ಮಾಡಿದ್ದಾರೆ. ಹಾಡಿಗಾಗಿ ವಿಭಿನ್ನ ಸೆಟ್‌ ಕೂಡ ಹಾಕಲಾಗಿತ್ತು.

ದಕ್ಷಿಣ ಭಾತರದ ಹೆಸರಾಂತ ನೃತ್ಯ ನಿರ್ದೇಶಕ ಪ್ರೇಮ್‌ ರಕ್ಷಿತ್‌ ಮತ್ತೊಂದು ಕನ್ನಡ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ನಾಗೇಶ್‌ ಕ್ಯಾಲನೂರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ರೇಮಾಸುರ ಚಿತ್ರದ ಹಾಡಿಗೆ ಇವರು ನೃತ್ಯ ಸಂಯೋಜಿಸಿದ್ದಾರೆ.

ಪ್ರೇಮ್‌ ರಕ್ಷಿತ್‌ ಈಗಾಗಲೇ ಕನ್ನಡದ ಹಲವು ಚಿತ್ರಗಳ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು, ಅವುಗಳಿಗಿಂತಲೂ ಈ ಚಿತ್ರದ ಹಾಡು ವಿಭಿನ್ನವಾಗಿದೆಯಂತೆ. ಹೀಗಾಗಿ ಡಿಫರೆಂಟ್‌ ಸೆಟ್‌ ಕೂಡ ಹಾಕಿಸಿದ್ದಾರಂತೆ.

'ಹಾಡಿನ ರಿದಂ ಚೆನ್ನಾಗಿದೆ. ಹಾಗಾಗಿಯೇ ಕೊರಿಯೋಗ್ರಫಿ ಮಾಡಲು ಒಪ್ಪಿಕೊಂಡೆ. ಹೊಸ ಹುಡುಗರಾಗಿದ್ದರೂ, ತುಂಬಾ ಚೆನ್ನಾಗಿ ಹೆಜ್ಜೆ ಹಾಕಿದ್ದಾರೆ. ಅವರಿಗೆ ಒಳ್ಳೆಯ ಭವಿಷ್ಯವಿದೆ. ಕನ್ನಡದಲ್ಲಿ ಅನೇಕ ಚಿತ್ರಗಳು ಸಿಗುತ್ತಿವೆ. ಹೀಗಾಗಿ ಸ್ಯಾಂಡಲ್‌ವುಡ್‌ಗೆ ನಾನು ಋುಣಿಯಾಗಿರುತ್ತೇನೆ' ಅಂತಾರೆ ಪ್ರೇಮ್‌ ರಕ್ಷಿತ್‌.

ಸಿನಿಮಾದ ಕತೆ ಕೂಡ ವಿಭಿನ್ನವಾಗಿದೆ. ಆಕಸ್ಮಿಕವಾಗಿ ಹುಟ್ಟುವ ಪ್ರೀತಿಯನ್ನು ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತುಗಳನ್ನು ಮಾಡುವುದನ್ನು ನೋಡಿದ್ದೇವೆ. ಈ ಸಿನಿಮಾದ ನಾಯಕ ಪ್ರೀತಿಗೋಸ್ಕರ ರಾಕ್ಷ ಸನಾಗುತ್ತಾನೆ. ಅವನು ಯಾವ ಕಾರಣಕ್ಕೆ ಈ ರೀತಿ ಬದಲಾಗುತ್ತಾನೆ' ಅನ್ನುವುದೇ ಸಿನಿಮಾ.

ಈ ಚಿತ್ರದ ಮೂಲಕ ಹೊಸ ನಾಯಕ ಮತ್ತು ನಾಯಕಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಬೆಳಗಾವಿ ಮೂಲದ ಶೀತಲ್‌ ರಾಜ್‌ ಚಿತ್ರದ ನಾಯಕ. ಹಳ್ಳಿಯಿಂದ ಪಟ್ಟಣಕ್ಕೆ ಬಂದು ಪ್ರೀತಿಯ ಹಿಂದೆ ಬೀಳುವ ಹುಡುಗನಾಗಿ ಅವರಿಲ್ಲಿ ಕಾಣಿಸಿಕೊಂಡಿದ್ದಾರೆ. ನಟನಾ ತರಬೇತಿಯನ್ನು ಪಡೆದು ಕ್ಯಾಮೆರಾ ಮುಂದೆ ನಿಂತಿದ್ದಾರೆ. ಹುಬ್ಬಳಿ ಮೂಲದ ಮೃದುಲಾ ನಾಯಕಿ. ಇಬ್ಬರಿಗೂ ಹೊಸ ಅನುಭವ.

ಶ್ರೀಹರ್ಷ ಸಂಗೀತದಲ್ಲಿ ಐದು ಹಾಡುಗಳು ಮೂಡಿ ಬಂದಿದ್ದು, ನಿರ್ದೇಶಕರೇ ಚಿತ್ರಕ್ಕೆ ಕತೆ ಬರೆದಿದ್ದಾರೆ. ನಿರ್ದೇಶಕ ಚೊಚ್ಚಲು ಸಿನಿಮಾ ಇದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>