Quantcast
Channel: VijayKarnataka
Viewing all articles
Browse latest Browse all 6795

ಕಾಶ್ಮೀರ ಯೋಧರಿಗೆ ಜೈ ಹೋ ಎಂದ ಸುದೀಪ್

$
0
0

ಎಸ್‌.ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಸಿನಿಮಾದ ಶೂಟಿಂಗ್‌ಗಾಗಿ ಕಾಶ್ಮೀರಕ್ಕೆ ತೆರಳಿದ್ದರು ಕಿಚ್ಚ ಸುದೀಪ್‌. ನೆಚ್ಚಿನ ನಟನನ್ನು ನೋಡಲು ಸ್ವತಃ ಸೈನಿಕರು ಶೂಟಿಂಗ್‌ ಸ್ಪಾಟ್‌ಗೆ ಬಂದಿದ್ದರು. ಅಲ್ಲದೇ ಸುದೀಪ್‌ ರಕ್ಷಣೆಗೂ ನಿಂತಿದ್ದು ವಿಶೇಷವಾಗಿತ್ತು.

ಶರಣು ಹುಲ್ಲೂರು

ಜಮ್ಮು ಮತ್ತು ಕಾಶ್ಮೀರ ಸುಡುತ್ತಲೇ ಇದೆ. ಆದರೂ, ಇಂತಹ ವೇಳೆಯಲ್ಲಿ ರಿಸ್ಕ್‌ ತಗೆದುಕೊಂಡು ಕಾಶ್ಮೀರದಲ್ಲಿ ಶೂಟಿಂಗ್‌ ಮಾಡಿದೆ ಹೆಬ್ಬುಲಿ ಸಿನಿಮಾ ತಂಡ. ಕಾಶ್ಮೀರದ ಸೋನ್‌ಮರ್ಗ್‌ ಮತ್ತು ಝೂಜಿಲಾ ಅಕ್ಕಪಕ್ಕ ಹೆಬ್ಬುಲಿ ಚಿತ್ರದ ಶೂಟಿಂಗ್‌ ನಡೆದದ್ದು ಕೈಯಲ್ಲಿ ಜೀವ ಹಿಡಿದುಕೊಂಡೇ ಚಿತ್ರೀಕರಣ ಮಾಡಿದ್ದಾರೆ ನಿರ್ದೇಶಕ ಎಸ್‌.ಕೃಷ್ಣ . ಇವರು ಅಂಥದ್ದೊಂದು ರಿಸ್ಕ್‌ ತಗೆದುಕೊಳ್ಳಲು ಕಾರಣ, ನಮ್ಮ ಸೈನಿಕರ ಮೇಲಿರುವ ನಂಬಿಕೆಯಂತೆ.

'ಜಮ್ಮು ಮತ್ತು ಕಾಶ್ಮೀರದಲ್ಲಿ ಶೂಟಿಂಗ್‌ ಮಾಡಲು ಹೊರಟಾಗ, ಅಲ್ಲಿನ ವಾತಾವರಣ ತಿಳಿಯಾಗಿರಲಿಲ್ಲ. ಎಲ್ಲರಿಗೂ ಗೊತ್ತಿರುವಂತೆ ಅಲ್ಲಿ ದಾಳಿಗಳು ನಡೆಯುತ್ತಲೇ ಇರುತ್ತವೆ. ಈಗಾಗಲೇ ಒಂದು ಸಲ ಶೂಟಿಂಗ್‌ ಪ್ಲಾನ್‌ ಮಾಡಿ, ಕ್ಯಾನ್ಸಲ್‌ ಕೂಡ ಮಾಡಿಕೊಂಡಿದ್ದೆವು. ಈ ಬಾರಿ ಧೈರ್ಯ ಮಾಡಿ ಹೊರಟೆವು. ನಮ್ಮ ಸೈನಿಕರು ನಮ್ಮ ರಕ್ಷಣೆಗೆ ನಿಲ್ಲುತ್ತಾರೆಂಬ ನಂಬಿಕೆ ಇತ್ತು. ಅದು ನಿಜವಾಯಿತು' ಅಂತಾರೆ ನಿರ್ದೇಶಕರು.

ಸೋನ್‌ಮರ್ಗ್‌ ಮತ್ತು ಝೂಜಿಲಾ ಪ್ರದೇಶಕ್ಕೆ ಹೋಗುತ್ತಿದ್ದಂತೆಯೇ ಸೈನಿಕರು ಇವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಸುದೀಪ್‌ರನ್ನು ಕಂಡು ಕುಣಿದಿದ್ದಾರೆ. ಶೂಟಿಂಗ್‌ ಮುಗಿಯುವ ತನಕ ತಂಡದ ರಕ್ಷಣೆ ಮಾಡಿದ್ದಾರೆ. ನೆಚ್ಚಿನ ನಟನ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

'ನಾವು ಚಿತ್ರೀಕರಿಸಿದ ಸ್ಥಳಗಳು ಸೂಕ್ಷ್ಮ ಪ್ರದೇಶಗಳಾಗಿದ್ದವು. ಕತೆಗಾಗಿ ಅಲ್ಲಿಯೇ ಶೂಟ್‌ ಮಾಡಬೇಕಿತ್ತು. ಹಾಗಾಗಿ ಕಾಂಪ್ರಮೈಸ್‌ ಮಾಡಿಕೊಳ್ಳಲಿಲ್ಲ. ಸುದೀಪ್‌ ಮತ್ತು ತಂತ್ರಜ್ಞರ ಸಹಕಾರವನ್ನು ನಾನು ಮರೆಯುವಂತಿಲ್ಲ. ಅದ್ಭುತವಾದ ದೃಶ್ಯಗಳನ್ನು ಸೆರೆ ಹಿಡಿದಿರುವ ಖುಷಿ ನನಗಿದೆ' ಅಂತಾರೆ ನಿರ್ದೇಶಕರು.

ಹೆಬ್ಬುಲಿ ಸಿನಿಮಾದಲ್ಲಿ ಕಮ್ಯಾಂಡೊ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಸುದೀಪ್‌. ಹಾಗಾಗಿಯೇ ಜಮ್ಮು ಮತ್ತು ಕಾಶ್ಮೀರದ ಶೂಟಿಂಗ್‌ ಮಹತ್ವದ್ದಾಗಿತ್ತು. ಅದಕ್ಕಾಗಿಯೇ ಇಡೀ ತಂಡ ಅಲ್ಲಿಗೆ ಪ್ರಯಾಣ ಬೆಳೆಸಿತ್ತು. ಸುದೀಪ್‌ ಜತೆ ಚಿಕ್ಕಣ್ಣ ಕೂಡ ಸಾಥ್‌ ನೀಡಿದ್ದರು.

ಹಲವು ಕಾರಣಗಳಿಂದಾಗಿ ಚಿತ್ರವು ಕುತೂಹಲ ಮೂಡಿಸಿದೆ. ಈ ಚಿತ್ರಕ್ಕಾಗಿ ಸುದೀಪ್‌ ವಿಭಿನ್ನ ಕೇಶವಿನ್ಯಾಸ ಮಾಡಿಸಿಕೊಂಡಿದ್ದಾರೆ. ಕಮ್ಯಾಂಡೋ ಅವತಾರದ ಫೋಟೋ ಶೂಟ್‌ ಅನ್ನು ಅಂತಾರಾಷ್ಟ್ರೀಯ ಖ್ಯಾತಿಯ ಆಸ್ಪ್ರೇಲಿಯಾದ ಫೋಟೋಗ್ರಾಫರ್‌ ಡ್ಯಾರೆನ್‌ ಸೆಂಟೋಫಾಂಟಿ ಮಾಡಿದ್ದಾರೆ. ಖ್ಯಾತ ಮೂವರು ಖಳನಾಯಕರು ಸಿನಿಮಾದಲ್ಲಿ ನಟಿಸುತ್ತಿದ್ದು, ಮಾಣಿಕ್ಯ ಚಿತ್ರದ ನಂತರ ಸುದೀಪ್‌ ಮತ್ತು ರವಿಚಂದ್ರನ್‌ ಮತ್ತೆ ಒಟ್ಟಾಗಿದ್ದಾರೆ. ಮೈಸೂರು, ಹೈದರಾಬಾದ್‌, ಬಳ್ಳಾರಿ, ಬೆಂಗಳೂರು, ಐಸ್‌ಲ್ಯಾಂಡ್‌ ಮತ್ತು ನಾರ್ವೆಯಲ್ಲಿ ಶೂಟಿಂಗ್‌ ಮಾಡುವ ಪ್ಲಾನ್‌ ನಿರ್ದೇಶಕರದ್ದು.

-------------------------

ಸೋನ್‌ಮರ್ಗ್‌ ಮತ್ತು ಝೂಜಿಲಾ ಪ್ರದೇಶಕ್ಕೆ ಹೋಗುತ್ತಿದ್ದಂತೆಯೇ ಸೈನಿಕರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಸುದೀಪ್‌ರನ್ನು ಕಂಡು ಕುಣಿದಿದ್ದಾರೆ. ಶೂಟಿಂಗ್‌ ಮುಗಿಯುವ ತನಕ ತಂಡದ ರಕ್ಷಣೆ ಮಾಡಿದ್ದಾರೆ.

-ಎಸ್‌.ಕೃಷ್ಣ, ನಿರ್ದೇಶಕ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>