Quantcast
Channel: VijayKarnataka
Viewing all articles
Browse latest Browse all 6795

ಕ್ರಿಕೆಟ್‌ ಕ್ರಾಂತಿಯ ಕೆಪಿಎಲ್‌

$
0
0

ದೇಶೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಬರೆದ ಕೆಪಿಎಲ್‌ | 5ನೇ ಆವೃತ್ತಿಯ ಟೂರ್ನಿಗೆ ದಿನಗಣನೆ

ಬೆಂಗಳೂರು: ಕರುನಾಡ ಕ್ರಿಕೆಟ್‌ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. 5ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಸೆ.16ರಿಂದ ಶುರುವಾಗಲಿದ್ದು, ರಾಜ್ಯದ ಪ್ರತಿಭಾವಂತ ಕ್ರಿಕೆಟಿಗರ ಪ್ರತಿಭಾ ಪ್ರದರ್ಶನಕ್ಕೆ ಮತ್ತೊಮ್ಮೆ ವೇದಿಕೆಯಾಗಲಿದೆ.

ಕೆಪಿಎಲ್‌ ದೇಶೀಯ ಕ್ರಿಕೆಟ್‌ನಲ್ಲಿ ಹಲವು ರೀತಿಯಲ್ಲಿ ತನ್ನದೇ ಛಾಪು ಮೂಡಿಸಿರುವ ಟೂರ್ನಿ. 2006ರಲ್ಲಿ ದೇಶದಲ್ಲೇ ಮೊಟ್ಟ ಮೊದಲ ಟಿ20 ಟೂರ್ನಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 2009ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಮಾದರಿಯಲ್ಲಿ ಕೆಪಿಎಲ್‌ ಅನ್ನು ಹುಟ್ಟು ಹಾಕಿತು. ಅಲ್ಲಿಂದ ಇಲ್ಲಿಯವರೆಗೆ ನಡೆದಿರುವ 4 ಆವೃತ್ತಿಗಳ ಕೆಪಿಎಲ್‌ ಟೂರ್ನಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಟಿಎನ್‌ಪಿಎಲ್‌ಗೆ ಕೆಪಿಎಲ್‌ ಸ್ಫೂರ್ತಿ

ಕರ್ನಾಟಕ ಪ್ರೀಮಿಯರ್‌ ಲೀಗ್‌ ಇತರ ರಾಜ್ಯಗಳಿಗೂ ಸ್ಫೂರ್ತಿ ಎಂಬುದು ರಾಜ್ಯಕ್ಕೆ ಹೆಮ್ಮೆಯ ವಿಚಾರ. ಕೆಪಿಎಲ್‌ನಿಂದ ಸ್ಫೂರ್ತಿ ಪಡೆದ ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಈ ವರ್ಷ ತಮಿಳುನಾಡು ಪ್ರೀಮಿಯರ್‌ ಲೀಗ್‌ (ಟಿಎನ್‌ಪಿಎಲ್‌) ಟೂರ್ನಿ ಆರಂಭಿಸಿದೆ. ಮುಂಬಯಿ ಕ್ರಿಕೆಟ್‌ ಸಂಸ್ಥೆ ಮುಂಬಯಿ ಪ್ರೀಮಿಯರ್‌ ಲೀಗ್‌, ಬಂಗಾಳ ಕ್ರಿಕೆಟ್‌ ಸಂಸ್ಥೆ ಬಂಗಾಳ ಪ್ರೀಮಿಯರ್‌ ಲೀಗ್‌ ಆರಂಭಿಸಲು ಚಿಂತನೆ ನಡೆಸಿದ್ದು, ಇದಕ್ಕೆಲ್ಲಾ ಪ್ರೇರಣೆ ನಮ್ಮ ಕೆಪಿಎಲ್‌.

ಪಿಂಕ್‌ ಮೊದಲು ಬಳಸಿದ್ದು ಕೆಎಸ್‌ಸಿಎ

ದೇಶೀಯ ಕ್ರಿಕೆಟ್‌ನಲ್ಲೀಗ ಪಿಂಕ್‌ ಬಾಲ್‌ ಕ್ರಿಕೆಟ್‌ ಸದ್ದು ಮಾಡುತ್ತಿದೆ. ಪಿಂಕ್‌ ಬಾಲನ್ನು ಭಾರತದಲ್ಲಿ ಮೊದಲು ಬಳಸಿದ ಹೆಗ್ಗಳಿಕೆ ಕೆಎಸ್‌ಸಿಎಗೆ ಸಲ್ಲುತ್ತದೆ. 2010ರಲ್ಲಿ ನಡೆದ 2ನೇ ಆವೃತ್ತಿಯ ಕೆಪಿಎಲ್‌ನಲ್ಲಿ ಪಿಂಕ್‌ ಬಾಲನ್ನು ಬಳಸಲಾಗಿತ್ತು. ಅದುವರೆಗೆ ದೇಶದ ಯಾವ ಲೀಗ್‌ನಲ್ಲೂ ಪಿಂಕ್‌ ಬಾಲ್‌ ಬಳಕೆ ಆಗಿರಲಿಲ್ಲ. ಕಳೆದ ಜೂನ್‌ನಲ್ಲಿ ಬಂಗಾಳ ಕ್ರಿಕೆಟ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ಸಿಎಬಿ ಸೂಪರ್‌ ಲೀಗ್‌ ಹೊನಲು ಬೆಳಕಿನ ಫೈನಲ್‌ ಪಂದ್ಯವನ್ನು ಪಿಂಕ್‌ ಬಾಲ್‌ನಲ್ಲಿ ಆಡಲಾಗಿತ್ತು. ಇದು ಭಾರತದ ಮೊದಲ ಪಿಂಕ್‌ ಬಾಲ್‌ ಪಂದ್ಯ ಎಂಬ ಪ್ರಚಾರ ಗಿಟ್ಟಿಸಿತ್ತು. ಆದರೆ ಪಿಂಕ್‌ ಬಾಲನ್ನು ದೇಶದಲ್ಲಿ ಮೊದಲ ಬಾರಿ ಬಳಸಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ. ಇದೀಗ ದುಲೀಪ್‌ ಟ್ರೋಫಿ ಪಂದ್ಯಗಳೂ ಪಿಂಕ್‌ ಬಾಲ್‌ನಲ್ಲಿ ನಡೆಯುತ್ತಿವೆ.

ಕೆಪಿಎಲ್‌ನಿಂದ ಐಪಿಎಲ್‌ ಅವಕಾಶ

ರಾಜ್ಯದ ಕೆಲ ಯುವ ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಅವಕಾಶ ಸಿಗಲು ಕೆಪಿಎಲ್‌ ಕಾರಣ. 2014ರ ಕೆಪಿಎಲ್‌ನಲ್ಲಿ ಮೈಸೂರು ವಾರಿಯರ್ಸ್‌ ಪರ ಮಿಂಚಿದ ಜೆ. ಸುಚಿತ್‌ಗೆ 2015ರಲ್ಲಿ ಐಪಿಎಲ್‌ ಬಾಗಿಲು ತೆರೆಯಿತು. ಮೈಸೂರಿನ ಪ್ರತಿಭಾನ್ವಿತ ಸವ್ಯಸಾಚಿಯನ್ನು ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ಖರೀದಿಸಿತು. ಆ ವರ್ಷದ ಐಪಿಎಲ್‌ನಲ್ಲಿ 13 ಪಂದ್ಯಗಳಲ್ಲಿ ಅವಕಾಶ ಪಡೆದ ಸುಚಿತ್‌ 10 ವಿಕೆಟ್‌ ಪಡೆದು ಮಿಂಚಿದ್ದಷ್ಟೇ ಅಲ್ಲದೆ, ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲೂ ಮಿಂಚಿನ ಪ್ರದರ್ಶನ ತೋರಿದರು. 2016ರಲ್ಲಿ ಸುಚಿತ್‌ ಒಂದು ಪಂದ್ಯದಲ್ಲಿ ಅವಕಾಶ ಪಡೆದರು.

ಲೆಗ್‌ ಸ್ಪಿನ್ನರ್‌ ಕಿಶೋರ್‌ ಕಾಮತ್‌ 2015ರ ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್‌ ಪರ ಉತ್ತಮ ಪ್ರದರ್ಶನ ತೋರಿದ್ದರಿಂದ 2016ರ ಐಪಿಎಲ್‌ ಹರಾಜಿನಲ್ಲಿ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ 1.4 ಕೋಟಿ ಖರೀದಿಸಿತು. ಆದರೆ ಆಡುವ ಅವಕಾಶ ಸಿಗಲಿಲ್ಲ.

ಶಿವಿಲ್‌, ಕಾರಿಯಪ್ಪ ಮಿಂಚು

2015ರ ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್‌ ಪರ ತೋರಿದ ಮಿಂಚಿನ ಪ್ರದರ್ಶನ ಚೈನಾಮನ್‌ ಸ್ಪಿನ್ನರ್‌ ಶಿವಿಲ್‌ ಕೌಶಿಕ್‌ಗೆ ಐಪಿಎಲ್‌ನಲ್ಲಿ ಅವಕಾಶ ಸಿಗುವಂತೆ ಮಾಡಿತು. 2016ರ ಐಪಿಎಲ್‌ನಲ್ಲಿ ಗುಜರಾತ್‌ ಲಯನ್ಸ್‌ ಪರ ಕಣಕ್ಕಿಳಿದ ಶಿವಿಲ್‌ ತಮ್ಮ ವಿಶಿಷ್ಠ ಬೌಲಿಂಗ್‌ ಶೈಲಿಯಿಂದ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದರು. ಅಲ್ಲದೆ 7 ಪಂದ್ಯಗಳಲ್ಲಿ 6 ವಿಕೆಟ್‌ ಪಡೆದು ಮಿಂಚಿದರು.

ಕೆಪಿಎಲ್‌ನಿಂದ ಪ್ರಸಿದ್ಧಿ ಪಡೆದು ಐಪಿಎಲ್‌ನಲ್ಲಿ ಅವಕಾಶ ಪಡೆದ ಮತ್ತೊಬ್ಬ ಆಟಗಾರ ಕೆ.ಸಿ ಕಾರಿಯಪ್ಪ. 2014ರ ಕೆಪಿಎಲ್‌ನಲ್ಲಿ ಶ್ರೇಷ್ಠ ಬೌಲಿಂಗ್‌ ಪ್ರದರ್ಶಿಸಿದ ಕೆ.ಸಿ ಕಾರಿಯಪ್ಪಗೆ 2015ರ ಐಪಿಎಲ್‌ನಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ 2.4 ಕೋಟಿ ರೂ. ನೀಡಿ ಖರೀದಿಸಿತು. 2016ರ ಹರಾಜಿನಲ್ಲಿ ಕಾರಿಯಪ್ಪ 80 ಲಕ್ಷ ರೂ.ಗಳಿಗೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಕ್ಕೆ ಮಾರಾಟವಾದರು.

ಕೆಪಿಎಲ್‌ನಲ್ಲಿ ಮಿಂಚಿ ಐಪಿಎಲ್‌ನಲ್ಲಿ ಅವಕಾಶ ಪಡೆದವರು

* ಜೆ.ಸುಚಿತ್‌ (ಮುಂಬೈ ಇಂಡಿಯನ್ಸ್‌)

* ಕೆ.ಸಿ ಕಾರಿಯಪ್ಪ (ಕೋಲ್ಕೊತಾ ನೈಟ್‌ ರೈಡರ್ಸ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌)

* ಶಿವಿಲ್‌ ಕೌಶಿಕ್‌ (ಗುಜರಾತ್‌ ಲಯನ್ಸ್‌)

* ಕಿಶೋರ್‌ ಕಾಮತ್‌ (ಮುಂಬೈ ಇಂಡಿಯನ್ಸ್‌)


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್