Quantcast
Channel: VijayKarnataka
Viewing all articles
Browse latest Browse all 6795

ಸಂತೆಯಲ್ಲಿ ನಿಂತ ಕಬೀರ ಚಿತ್ರ ವಿಮರ್ಶೆ: ಸಾಮರಸ್ಯ ಸಾರುವ ಸಂತ ಕಬೀರ

$
0
0

ಕನ್ನಡ ಚಿತ್ರ: ಸಂತೆಯಲ್ಲಿ ನಿಂತ ಕಬೀರ

-ಪದ್ಮಾ ಶಿವಮೊಗ್ಗ

15ನೇ ಶತಮಾನದ ಸಂತ, ಸುಧಾರಣಾವಾದಿಗಳಾದ ಕಬೀರರ ಬದುಕು, ಆದರ್ಶವನ್ನು ಹೇಳುವ 'ಸಂತೆಯಲ್ಲಿ ನಿಂತ ಕಬೀರ' ಚಿತ್ರ ಕನ್ನಡದಲ್ಲಿ ತೆರೆಕಂಡ ಅಪರೂಪದ ಚಿತ್ರಗಳಲ್ಲೊಂದು ಎಂದು ನಿಸ್ಸಂಶಯವಾಗಿ ಹೇಳಬಹುದು. ಇಂದ್ರಬಾಬು ನಿರ್ದೇಶನದ ಈ ಚಿತ್ರವನ್ನು ಕಥಾವಸ್ತುವಿನ ಕಾರಣಕ್ಕಾದರೂ ಒಮ್ಮೆ ನೋಡಲೇಬೇಕು. ಧರ್ಮದ ಕುರಿತು ಇಂಥದ್ದೊಂದು ಸಿನಿಮಾ ಕನ್ನಡದಲ್ಲಿ ಮಾಡಿದ್ದಕ್ಕೆ, 'ಏನನ್ನೂ ಕಟ್ಟದಿರಬೇಕಯ್ಯಾ ಕಬೀರ, ಏನನ್ನೂ ಕೆಡವದಿರು...' ಎಂಬ ಕಬೀರರ ಪದಗಳನ್ನು ಜನರಿಗೆ ತಲುಪಿಸಿದ್ದಕ್ಕೆ ಶಿವರಾಜ್‌ ಕುಮಾರ್‌ ಸೇರಿ ನಿರ್ದೇಶಕ ಮತ್ತು ನಿರ್ಮಾಪಕರನ್ನು ಪ್ರಶಂಸಿಸಲೇಬೇಕು.

'ಸಂತೆಯಲ್ಲಿ ನಿಂತ ಕಬೀರ' ಶಿವರಾಜ್‌ ಕುಮಾರ್‌ ಅವರ ಅಭಿಮಾನಿಗಳು ಮಾತ್ರವೇ ಅಲ್ಲ ಎಲ್ಲರೂ ನೋಡಬೇಕಾದ ಚಿತ್ರವೆನ್ನಬಹುದು. ಕಬೀರರು ತಮ್ಮ ಹರಿತವಾದ ಪದಗಳು ಮತ್ತು ಸಿದ್ಧಾಂತಗಳಿಂದ ಮೂಲಭೂತವಾದಿಗಳನ್ನು ಎದುರ್ಗೊಳ್ಳುತ್ತಾರೆ. ಮಾನವ ಪ್ರೇಮವೇ ದೊಡ್ಡದು ಎಂದು ಪ್ರತಿಪಾದಿಸುತ್ತಾರೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವವರ ವಿರುದ್ಧ ದನಿ ಎತ್ತುತ್ತಾರೆ.ಯಾರಿಗೂ ಹೆದರದ ಕಬೀರರ ದಿಟ್ಟ ನುಡಿ, ನಡೆ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಈ ಚಿತ್ರದಲ್ಲಿ ಅದೆಲ್ಲ ಒಂದು ಚೌಕಟ್ಟಿನೊಳಗೆ ತಂದು ನಿರ್ದೇಶಕರು ಹದವಾಗಿ ತೋರಿಸಿದ್ದಾರೆ.

ಕಬೀರರಾಗಿ ಶಿವರಾಜ್‌ ಕುಮಾರ್‌ ನಟನೆ ಅದ್ಭುತ. ಪ್ರೇಕ್ಷಕರಿಗೆ ಈ ಪಾತ್ರದಲ್ಲಿ ಅವರು ಕಬೀರರನ್ನು ಸಾಕ್ಷಾತ್ಕರಿಸಿದ್ದಾರೆನ್ನಬಹುದು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಭಾಗೀರಥಿ ಬಾಯಿ ಕದಂ (ಕಬೀರನ ತಾಯಿ) ಅವರ ಅಭಿನಯವೂ ಇನ್ನೊಂದು ಎತ್ತರ. ಇವರಿಬ್ಬರ ದೃಶ್ಯಗಳು ಹೃದಯ ಕರಗಿಸಿಬಿಡುವಂತಿವೆ.

ಬೌದ್ಧಿಕವಾಗಿ ಬಿಗಿಯಾದ ಸಂಭಾಷಣೆ ಮತ್ತು ದೃಶ್ಯಗಳೆಲ್ಲವನ್ನೂ ಸಹಜವಾಗಿ ಕಟ್ಟಿಕೊಟ್ಟ ಛಾಯಾಗ್ರಹಣ ಚಿತ್ರದ ಮತ್ತೊಂದು ಹೈಲೈಟ್‌. ಸಂಭಾಷಣೆ ಮತ್ತು ಹಾಡುಗಳನ್ನು ಬರೆದ ಗೋಪಾಲ ವಾಜಪೇಯಿ ತೆರೆಯ ಹಿಂದಿನ ಹೀರೋ. ಲೀಲಾಮಯ... ಹಾಡಿನ ಸಂಗೀತಕ್ಕೆ ಮತ್ತು ಅದಕ್ಕೆ ಶಿವರಾಜ್‌ ಕುಮಾರ್‌ ಹೆಜ್ಜೆ ಹಾಕಿರುವ ರೀತಿಗೆ ಪ್ರೇಕ್ಷಕ ಫಿದಾ ಆಗೋದ್ರಲ್ಲಿ ಅನುಮಾನವಿಲ್ಲ. ಇಸ್ಮಾಯಿಲ್‌ ದರ್ಬಾರ್‌ ಸಂಗೀತದ ಚಕಾರವೆತ್ತುವಂತಿಲ್ಲ.

ನಾಯಕಿ ಸನುಷಾರ ತಾಜಾ ಮುಖ, ಮುಗ್ಧ ಅಭಿನಯ ಇಷ್ಟವಾಗುತ್ತದೆ. ಅನಂತನಾಗ್‌, ಪ್ರಶಾಂತ್‌ ಸಿದ್ದಿ, ಶರತ್‌ ಲೋಹಿತಾಶ್ವ ಉತ್ತಮವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಮೈನಸ್‌ ಪಾಯಿಂಟ್‌ ಅಂದ್ರೆ ಸುಲ್ತಾನ. ಪಾತ್ರ ಪೋಷಣೆ ಮತ್ತು ಕಾಸ್ಟ್ಯೂಮ್‌ ಚೆನ್ನಾಗಿಲ್ಲ. ಪಾತ್ರದಲ್ಲಿ ಶರತ್‌ ಕುಮಾರ್‌ ನಟನೆ ನಿರಾಶೆ ಮಾಡುತ್ತದೆ. ಡಬ್‌ ಮಾಡಿರುವ ಕಂಠ ಡಾಮಿನೇಟ್‌ ಅನ್ನಿಸುತ್ತದೆ. ಕೊನೆಯಲ್ಲಿ ಬಹಳ ಮುಖ್ಯವಾದ, ಶಿವರಾಜ್‌ ಕುಮಾರ್‌ ಮತ್ತು ಶರತ್‌ ಮುಖಾಮುಖಿ ಆಗುವ ದೃಶ್ಯ ಕೊಂಚ ದುರ್ಬಲವಾಗಿ ಮೂಡಿಬಂದಿದೆ. ನಿರ್ದೇಶಕರು ಇನ್ನಷ್ಟು ಚಾಣಾಕ್ಷತನ ತೋರಬೇಕಿತ್ತು.

ಇದೆಲ್ಲದರ ಹೊರತಾಗಿಯೂ ಒಮ್ಮೆ ನೋಡಲೇಬೇಕಾದ ಚಿತ್ರ ಇದು. ಎಲ್ಲಕ್ಕಿಂತ ಇಂದು ಧರ್ಮಗಳ ಬಗ್ಗೆ ಎದ್ದಿರುವ ಗೊಂದಲಕ್ಕೆ ಉತ್ತರ ನೀಡುತ್ತದೆ. ಶಿವರಾಜ್‌ ಕುಮಾರ್‌ ಅವರ ಇದುವರೆಗಿನ ಚಿತ್ರಗಳನ್ನು ಬದಿಗಿಟ್ಟು ಈ ಚಿತ್ರ ನೋಡಬೇಕು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>