Quantcast
Channel: VijayKarnataka
Viewing all articles
Browse latest Browse all 6795

ಡೀಲ್‌ ರಾಜ ಚಿತ್ರ ವಿಮರ್ಶೆ: ಕಚಗುಳಿ ಇಡುವ ಡೀಲ್ ರಾಜ

$
0
0

ಕನ್ನಡ ಚಿತ್ರ: ಡೀಲ್‌ ರಾಜ

-ಪದ್ಮಿನಿ ಜೈನ್‌

ಕಾಮಿಡಿಯಂತೆ ಕಾಣುವ ಈ ಸಿನಿಮಾದ ಒಳಗೆ ಒಂದು ಸೀರಿಯಸ್‌ ಮಿಸ್ಸಿಂಗ್‌ ಲಿಂಕ್‌ ಇದೆ. ಕೋಮಲ್‌ ತಮ್ಮ ಹಳೆಯ ಸಿನಿಮಾದಂತೆ ಇಲ್ಲೂ ಹಾಸ್ಯ ನಾಯಕನಾಗಿಯೇ ಗುರುತಿಸಿಕೊಂಡಿದ್ದಾರೆ. 20 ವರ್ಷದ ಹಿಂದೆ ಮಣ್ಣಿನಲ್ಲಿ ಹೂತು ಹೋದ ಅಮೂಲ್ಯ ವಜ್ರ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಪತ್ರದ ಮೇಲೊಂದು ಡೀಲ್‌ ನಡೆಯುತ್ತದೆ. ಈ ಡೀಲ್‌ಗೆ ಕಥಾನಾಯಕ ಹೇಗೋ ಒಳಗಾಗುತ್ತಾನೆ. ಅದೇ ವೇಳೆಗೆ ಆತನಿಗೆ ಸನ್ಯಾಸಿಯೊಬ್ಬ 'ಜೈಲು ಸೇರಿದರೆ ಒಳ್ಳೆಯದಾಗುತ್ತದೆ. ಕೊಟ್ಯಾಧಿಪತಿ ಆಗುತ್ತಿ' ಎಂದು ಸಲಹೆ ನೀಡುತ್ತಾನೆ. ನಾಯಕ ಜೈಲು ಸೇರಿದ್ದೂ ಆಗುತ್ತದೆ. ಅಲ್ಲಿಂದ ಅಸಲಿ ಕತೆ ಶುರು. ಯಾರು ಯಾರಿಗೆ ಡೀಲ್‌ ಮಡುತ್ತಾರೆ, ಯಾರ ಡೀಲ್‌ ಕ್ಲಿಕ್‌ ಆಗುತ್ತದೆ ಎಂಬುದೇ ಇಡೀ ಸಿನಿಮಾ.

ಅಸಲಿಗೆ ಸಿನಿಮಾ ಕತೆ ಚೆನ್ನಾಗಿದೆ. ನಿಧಿಯ ಹುಡುಕಾಟಕ್ಕಾಗಿ ನಡೆಯುವ ಡೀಲ್‌ಗಳ ಬಗ್ಗೆ ಈಗಾಗಲೇ ಅನೇಕ ಚಿತ್ರಗಳು ಬಂದು ಹೋಗಿವೆ. 'ಡೀಲ್‌ ರಾಜ' ಸಿನಿಮಾದಲ್ಲಿ ನಿಧಿ ಹುಡುಕಾಟದ ಜತೆಗೆ ಬೇರೆ ಒಂದಷ್ಟು ಎಲಿಮೆಂಟ್ಸ್‌ ಬೆರೆತಿರುವುದರಿಂದ ತೀರಾ ಬೋರ್‌ ಅನ್ನಿಸುವುದಿಲ್ಲ. ಸಿನಿಮಾದ ಮೊದಲಾರ್ಧದಲ್ಲಿ ಕತೆ ಕುದುರೆ ವೇಗದಲ್ಲಿ ಸಾಗಿ ದೃಶ್ಯಗಳು ಪಟಾಪಟ್‌ ಎಂದು ಮುಗಿಯುತ್ತವೆ. ಆದರೆ ದ್ವಿತಿಯಾರ್ಧ ಚ್ಯೂಯಿಂಗ್‌ ಗಮ್‌. ಎಳೆದೂ ಎಳೆದೂ ಮೂರು ಗಂಟೆ ಸಿನಿಮಾ ಮಾಡಿದಂತಿದೆ. ಕತೆಯನ್ನು ನೀಟಾಗಿ ಎರಡೂ ಭಾಗಗಳಿಗೆ ಆಗುವಂತೆ ವಿಂಗಡಿಸಿ ತೆರೆ ಮೇಲೆ ತರುವಲ್ಲಿ ನಿರ್ದೇಶಕರು ಸೋತಿದ್ದಾರೆ.

ಕೋಮಲ್‌ ಕಾಮಿಡಿ ಚಿತ್ರವನ್ನು ಜೀವಂತವಾಗಿಟ್ಟಿದೆ. ಉಳಿದಂತೆ ಕುರಿ ಪ್ರತಾಪ್‌, ತಬಲ ನಾಣಿ, ಮಿತ್ರ ಕೂಡಾ ಕೋಮಲ್‌ಗೆ ಕಾಮಿಡಿಯಲ್ಲಿ ಸಾಥ್‌ ನೀಡಿರುವುದರಿಂದ ನಗುವಿಗೆ ಬರವಿಲ್ಲ. ಜೈ ಜಗದೀಶ್‌, ಸುಮನ್‌ ರಂಗನಾಥ್‌, ಅವಿನಾಶ್‌ ತಮ್ಮ ಪಾತ್ರವನ್ನು ನೀಟಾಗಿ ನಿರ್ವಹಿಸಿದ್ದಾರೆ. ಆದರೆ ನಾUಯಕಿ ಭಾನುಶ್ರಿ ಸುಮಾರು. ನಟನೆ, ನೃತ್ಯ ಎರಡರಲ್ಲೂ ಆಕೆಯದ್ದು ತೀರಾ ಸಪ್ಪೆ ಪರ್ಪಾಮೆನ್ಸ್‌. ಚಿತ್ರದ ಹಾಡುಗಳು ಒಮ್ಮೆಗೆ ಇಷ್ಟವಾಗುತ್ತವೆ, ಆದರೆ ಮತ್ತೆ ಮತ್ತೆ ಕೇಳುವಂತದ್ದೇನೂ ಇಲ್ಲ. ಚಿತ್ರದ ಅನೇಕ ಭಾಗಗಳಲ್ಲಿ ಕಂಟಿನ್ಯುಟಿ ಮಿಸ್‌ ಆಗಿದ್ದು ಎದ್ದು ಕಾಣುತ್ತದೆ.

ನಿರ್ದೇಶಕ ರಾಜ್‌ ಗೋಪಿಸೂರ್ಯ ಅವರೇ ಸಂಭಾಷಣೆಯನ್ನೂ ಬರೆದಿದ್ದು ಪ್ರೇಕ್ಷಕರನ್ನು ನಗಿಸುವಲ್ಲಿ ಸಫಲರಾಗಿದ್ದಾರೆ. ಸೆಕೆಂಡ್‌ ಹಾಫ್‌ ಬಗ್ಗೆ ಹಾಡುಗಳು ಇಷ್ಟವಾಗುತ್ತವಾದರೂ ಒಮ್ಮೆ ಕೇಳಿ ಮರೆಯುವಂತಹವೇ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>