Quantcast
Channel: VijayKarnataka
Viewing all articles
Browse latest Browse all 6795

ಮಗನಿಗೆ ಹೊಡೆದ ಟೀಚರ್‌ಗೆ ಕಪಾಳಮೋಕ್ಷ

$
0
0

ವಡೋದರ: ತರಗತಿಯಲ್ಲಿ ಮೂರು ವರ್ಷದ ವಿದ್ಯಾರ್ಥಿಗೆ ಶಿಕ್ಷಕರು ಹೊಡದ ನಂತರ ಸಾಮದ ನವಯುಗ್‌ ಆಂಗ್ಲ ಮಾಧ್ಯಮ ಶಾಲೆ ಶುಕ್ರವಾರ ಭಾರಿ ರಂಪಾಟಕ್ಕೆ ಸಾಕ್ಷಿ ಆಯಿತು.

ಶಿಕ್ಷಕಿ ರಶ್ಮಿ ಗೊಹಿಲ್‌ ಬಾಲಕನನ್ನು ಥಳಿಸಿರುವ ವಿಷಯ ತಿಳಿದ ನಂತರ ಶಾಲೆಗೆ ಧಾವಿಸಿದ ಪೋಷಕರು ಶಿಕ್ಷಕಿ ಜತೆ ವಾಗ್ವಾದ ನಡೆಸಿದ್ದರು. ಜಗಳ ತಾರಕಕ್ಕೇರಿ ಬಾಲಕನ ತಂದೆ ರಿತೇಶ್‌ ರಾಜಪೂತ್‌ ಶಿಕ್ಷಕಿ ಕೆನ್ನೆಗೆ ಬಾರಿಸಿದ್ದರು.

ಘಟನೆ ನಂತರ ರಿತೀಶ್‌ ಹಾಗೂ ಗೊಹಿಲ್‌ ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದರು. 'ಇಬ್ಬರನ್ನು ಬಂಧಿಸಿದ್ದೆವು, ಇಬ್ಬರಿಗೂ ಜಾಮೀನು ದೊರೆತಿದೆ. ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ಗೊಹಿಲ್‌ ತಳ್ಳಿ ಹಾಕಿದ್ದಾರೆ,'ಎಂದು ಸಾಮದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

'ಗುರುವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಬಂದ ಮಗ ಅಳುತ್ತಿದ್ದ. ಕೆನ್ನೆಯ ಮೇಲೆ ಪೆಟ್ಟು ಬಿದ್ದಿತ್ತು, ವಿಚಾರಿಸಿದಾಗ ಶಿಕ್ಷಕಿ ಹೊಡೆದ ವಿಷಯ ತಿಳಿಸಿದ. ಘಟನೆ ನಂತರ ಮಗ ಜ್ವರದಿಂದ ಬಳಲುತ್ತಿದ್ದು, ನಿದ್ದೆ ಮಾಡುತ್ತಿಲ್ಲ,'ಎಂದು ರಿತೇಶ್‌ ದೂರಿದ್ದಾರೆ.

'ಶಾಲೆಯ ಪ್ರಾಂಶುಪಾಲರಿಗೆ ಈ ಬಗ್ಗೆ ದೂರು ನೀಡಿದಾಗ, ಅವರು ವಿಷಯ ಒಪ್ಪಿಕೊಳ್ಳಲಿಲ್ಲ. ನಿಮ್ಮ ಮಗ ಕೆಳಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿರಬಹುದು ಎಂದರು. ಶಿಕ್ಷಕಿಯನ್ನು ಕರೆದು ವಿಚಾರಣೆ ನಡೆಸಲಿಲ್ಲ. ಹಾಗಾಗಿ ನಾವೇ ನೇರವಾಗಿ ಶಿಕ್ಷಕಿಯನ್ನುವಿಚಾರಿಸಿದೆವು,'ಎಂದು ಅವರು ತಿಳಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>