Quantcast
Channel: VijayKarnataka
Viewing all articles
Browse latest Browse all 6795

ಉತ್ತರಾಖಂಡ: 12 ಸಾವಿರ ಅಡಿ ಎತ್ತರದಲ್ಲಿ ಹುಲಿ ಪತ್ತೆ

$
0
0

ಡೆಹ್ರಾಡೂನ್: ಹುಲಿ ಸಂತತಿ ನಶಿಸುತ್ತಿರುವ ಸುದ್ದಿ ಆತಂಕ ಮೂಡಿಸುತ್ತಿರುವ ಬೆನ್ನಲ್ಲೇ, ಉತ್ತರಾಖಂಡದ 12 ಸಾವಿರ ಅಡಿ ಎತ್ತರದಲ್ಲಿ ಹುಲಿ ವಾಸಿಸುತ್ತಿರುವ ಬಗ್ಗೆ ಸುಳಿವು ಸಿಕ್ಕಿದ್ದು, ವನ್ಯಜೀವಿ ಪ್ರಿಯರಿಗೆ ಸಂತಸ ತಂದಿದೆ.

ಹಿಮ ಚಿರತೆಗಳ ವಾಸಸ್ಥಾನವಾದ ಉತ್ತರಾಖಂಡದ ಪಿಥೋರಾಗಡ್ ಜಿಲ್ಲೆಯ ಹಿಮಾಲಯದ ಅಸ್ಕೋಟ್‌ನಲ್ಲಿ ಹುಲಿ ಸುಳಿದಾಡಿದ ಹೆಜ್ಜೆ ಗುರುತುಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಜೀವ ವಿಜ್ಞಾನ ಸಂರಕ್ಷಣಾ ಯೋಜನೆಯಡಿಯಲ್ಲಿ ಭಾರತೀಯ ವನ್ಯಮೃಗ ಸಂಸ್ಥೆಯ ವಿಜ್ಞಾನಿಯಾದ ಬಿಲಾಲ್ ಹಬೀಬ್ ಅವರು ಈ ಪ್ರದೇಶದಲ್ಲಿ ಹುಲಿ ಹೆಜ್ಜೆ ಗುರುತಿನ ಫೋಟೋ ಸೆರೆ ಹಿಡಿದಿದ್ದು, ಭಾರತದಲ್ಲಿಯೇ ಅತ್ಯಂತ ಎತ್ತರದ ಪ್ರದೇಶದಲ್ಲಿ ಹುಲಿ ಇರುವ ಸ್ಥಳವಿದು, ಎಂದಿದ್ದಾರೆ.

'ಈ ಪ್ರದೇಶಗಳಲ್ಲಿ ಹುಲಿಗಳಿದ್ದ ಬಗ್ಗೆ ಬ್ರಿಟಿಷ್ ದಾಖಲೆಗಳಲ್ಲಿ ಮಾಹಿತಿ ಇದ್ದರೂ, ಇದುವರೆಗೆ ಯಾವುದೇ ವೈಜ್ಞಾನಿಕ ಅಥವಾ ಫೋಟೋ ಸಾಕ್ಷಿಗಳು ಲಭ್ಯವಿರಲಿಲ್ಲ,' ಎಂದ ಹಬೀಬ್ 'ಇದುವರೆಗಿನ ದಾಖಲೆಯಂತೆ 13 ಸಾವಿರ ಅಡಿ ಎತ್ತರದಲ್ಲಿರುವ ಬೂತಾನ್‌ನಲ್ಲಿ ಹುಲಿ ಸಂಸತಿ ಅಸ್ತಿತ್ವದಲ್ಲಿದೆ,' ಎಂದಿದ್ದಾರೆ.

'ಈ ಪ್ರದೇಶದಲ್ಲಿ ಬೇಟೆಗಾರರ ಉಪಟಳ ಹೆಚ್ಚಿದ್ದು, ಹುಲಿಗೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಈ ಹುಲಿ ಸಂರಕ್ಷಣೆ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳುವ ಅಗತ್ಯವಿದೆ,' ಎನ್ನುತ್ತಾರೆ ಪ್ರಧಾನ ಅರಣ್ಯ ಸಂರಕ್ಷಕ ಡಿವಿಎಸ್ ಖಟಿ.

ಹುಲಿಗಳ ಆವಾಸ ಸ್ಥಾನ ಬದಲಾದ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ, ಎನ್ನುತ್ತಾರೆ ವಿಜ್ಞಾನಿಗಳು.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>