Quantcast
Channel: VijayKarnataka
Viewing all articles
Browse latest Browse all 6795

ಗುಜರಾತ್‌ನಲ್ಲೀಗ ದನಗಳ ಶವ ಸಂಸ್ಕಾರವೇ ಸಮಸ್ಯೆ

$
0
0

ರಕ್ಷಣೆ ಕೋರಿ ದಲಿತರ ಮುಷ್ಕರ * ದಿನಕ್ಕೆ 200 ದನಗಳ ಸಾವು

ಅಹಮದಾಬಾದ್‌: ದನಗಳ ಚರ್ಮ ಸುಲಿದು ಹದಗೊಳಿಸುವ ಕೆಲಸ ಮಾಡುತ್ತಿದ್ದ ದಲಿತರು ಶವಗಳ ದಫನಕ್ಕೆ ನಿರಾಕರಿಸಿ ಮುಷ್ಕರ ನಡೆಸುತ್ತಿರುವುದರಿಂದ ದನಗಳ ಅಂತ್ಯಕ್ರಿಯೆಯೇ ಗುಜರಾತ್‌ನಲ್ಲಿ ದೊಡ್ಡದೊಂದು ಸಮಸ್ಯೆಯಾಗಿ ಕಾಡಿದೆ.

ಉನಾದಲ್ಲಿ ಸತ್ತ ದನದ ಚರ್ಮ ಸುಲಿದ ಯುವಕರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ ಘಟನೆಯ ಬಳಿಕ ಇದೀಗ ದಲಿತ ಸಮುದಾಯದವರು ತಮ್ಮ ಕೆಲಸಕ್ಕೆ ರಕ್ಷಣೆ ನೀಡಬೇಕು ಮತ್ತು ಗೋರಕ್ಷಕರ ಕಿರುಕುಳ ತಡೆಯಲು ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ.

ಗುಜರಾತ್‌ನ ಸುಂದರ್‌ ನಗರ ಜಿಲ್ಲೆಯಲ್ಲಿ ಸುಮಾರು 14-15 ಗೋಶಾಲೆಗಳಿದ್ದು, ಅವುಗಳಲ್ಲಿ ದಿನUಕ್ಕೆ 120ರಷ್ಟು ಹಸುಗಳು ಸಾಯುತ್ತಿವೆ. ಅವುಗಳನ್ನು ದಫನ್‌ ಮಾಡುವ ಕೆಲಸವನ್ನು ದಲಿತರು ಮಾಡುತ್ತಿದ್ದರು. ಅವರ ಮುಷ್ಕರದಿಂದಾಗಿ ಸ್ಥಳೀಯಾಡಳಿತ ಭಾರಿ ತೊಂದರೆ ಅನುಭವಿಸಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಸ್ಥಳೀಯಾಡಳಿತ ತನ್ನದೇ ಕೆಲಸಗಾರರನ್ನು ಬಳಸಿಕೊಂಡು 80 ಸತ್ತ ದನಗಳ ವಿಲೇವಾರಿ ಮಾಡಿದೆ.

ಇದಲ್ಲದೆ ಗ್ರಾಮೀಣ ಭಾಗದಲ್ಲೂ 100ಕ್ಕೂ ಅಧಿಕ ದನಗಳು ವಯೋಸಹಜ ಮತ್ತಿತರ ಕಾರಣಗಳಿಂದ ಪ್ರಾಣ ಕಳೆದುಕೊಂಡಿದ್ದು, ಅವುಗಳ ವಿಲೇವಾರಿಗೂ ಕಷ್ಟ ಎದುರಾಗಿದೆ.

ವಿವಾದ ತಿಳಿಯಾದ ಬಳಿಕ ದಲಿತ ನಾಯಕರನ್ನು ಕರೆದು ಆವರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಜಿಲ್ಲಾಧಿಕಾರಿ ಉದಿತ್‌ ಅಗರ್ವಾಲ್‌ ತಿಳಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್