Quantcast
Channel: VijayKarnataka
Viewing all articles
Browse latest Browse all 6795

ಬಾಲ್ಯದ ಕನಸು ನನಸು ಮಾಡಿಕೊಂಡ ಸಂಸದ ಅನುರಾಗ್‌

$
0
0

ಹೊಸದಿಲ್ಲಿ: ಟೆರಿಟೋರಿಯಲ್‌ ಆರ್ಮಿಯ ಲೆಫ್ಟಿನೆಂಟ್‌ ಆಗಿ ಶುಕ್ರವಾರ ಸೇರುವ ಮೂಲಕ ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಸೇನೆಗೆ ಸೇರುವ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಮೂಲಕ ಟೆರಿಟೋರಿಯಲ್‌ ಆರ್ಮಿ ಸೇರಿದ ಮೊದಲ ಬಿಜೆಪಿ ಸಂಸದ(ಸೇವೆಯಲ್ಲಿರುವ) ಎಂಬ ಹೆಗ್ಗಳಿಕೆಯೂ ಅವರದ್ದಾಯಿತು.

ಅನುರಾಗ್‌ ಠಾಕೂರ್‌ ಅವರ ತಾತ ಭೂಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇಂತಹ ಕುಟುಂಬದಿಂದ ಬಂದ ಅವರಿಗೆ ಆರ್ಮಿ ಸೇರಿ ಯೋಧನಾಗಿ ದೇಶ ಸೇವೆ ಸಲ್ಲಿಸಬೇಕೆಂಬ ಆಸೆಯಿತ್ತು. ಆದರೆ, ಕನಸು ಕೈಗೂಡದ ಕಾರಣಕ್ರಿಕೆಟ್‌ ಮತ್ತು ರಾಜಕೀಯದಲ್ಲಿ ವೃತ್ತಿ ಜೀವನ ಕಂಡುಕೊಂಡರು.

ಬಾಲ್ಯದ ಕನಸಿಗೆ ತಿಲಾಂಜಲಿ ನೀಡದ ಠಾಕೂರ್‌, ಟೆರಿಟೋರಿಯಲ್‌ ಆರ್ಮಿಗೆ ಸೇರಬೇಕಾದ ಪರೀಕ್ಷೆಗಳಲ್ಲಿ ಕುಳಿತು ಉತ್ತೀರ್ಣರಾದರು.. ನಂತರ ಭೋಪಾಲ್‌ನಲ್ಲಿ ನಡೆದ ಅಲ್ಪ ಅವಧಿಯ ತರಬೇತಿ ಪೂರ್ಣಗೊಳಿಸಿದ್ದರು. ಅದರ ಅನ್ವಯ ದಿಲ್ಲಿಯಲ್ಲಿ ಭೂಸೇನಾ ವರಿಷ್ಠ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅವರು 'ಟೆರಿಟೋರಿಯಲ್‌ ಆರ್ಮಿ'ಗೆ ಠಾಕೂರ್‌ ಅವರನ್ನು ಸೇರಿಸಿಕೊಂಡರು. ಹಿಮಾಚಲ ಪ್ರದೇಶದ ಹಮೀರ್‌ಪುರದ ಸಂಸದ ಠಾಕೂರ್‌ ಅವರು ಮುಂದಿನ ದಿನಗಳಲ್ಲಿ ಮತ್ತೊಂದು ಸುತ್ತಿನ ಕಠಿಣ ತರಬೇತಿಗೆ ಒಳಗಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

ಏನಿದು ಟೆರಿಟೋರಿಯಲ್‌ ಆರ್ಮಿ?:

ದೇಶ ಸೇವೆ ಮಾಡ ಬಯಸುವ ಸ್ವಯಂ ಸೇವಕ ಪಡೆ. ಇದರ ನೇಮಕದ ಉಸ್ತುವಾರಿಯನ್ನೂ ಸೇನೆಯೇ ವಹಿಸಿಕೊಂಡಿದೆ. ಕಠಿಣವಾದ ಲಿಖಿತ ಮತ್ತು ದೈಹಿಕ ಪರೀಕ್ಷೆಗಳನ್ನು ಪಾಸ್‌ ಮಾಡಿದರೆ, ಶಸ್ತ್ರಾಸ್ತ್ರ ಬಳಕೆಯ ತರಬೇತಿಯನ್ನೂ ಸೇನೆ ನೀಡುತ್ತದೆ. ಇದಕ್ಕೆ ಸೇರುವ ಯೋಧರು ತುರ್ತು ಸಂದರ್ಭಗಳಲ್ಲಿ ದೇಶಸೇವೆಗೆ ಸಿದ್ಧರಿರಬೇಕು. ಇದಕ್ಕಾಗಿ ಯಾವುದೇ ರೀತಿಯ ಹಣಕಾಸಿನ ಪ್ರತಿಫಲ ದೊರೆಯದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>