Quantcast
Channel: VijayKarnataka
Viewing all articles
Browse latest Browse all 6795

ಖಲೀಫಾ ಸಾಮ್ರಾಜ್ಯ ಕಟ್ಟಲು ಭಟ್ಕಳ್‌ ಆಪ್ತನ ಯತ್ನ

$
0
0

*ಐಸಿಸ್‌ಗೂ ಮುನ್ನ ಸಂಘಟನೆ ಮುಂದಾಗಿದ್ದ ಅದ್ನಾನ್‌ ಹಸನ್‌

ಹೊಸದಿಲ್ಲಿ: ನಿಷೇಧಿತ ಉಗ್ರ ಸಂಘಟನೆ ಇಂಡಿಯನ್‌ ಮುಜಾಹಿದ್ದೀನ್‌ ಸ್ಥಾಪಕರಾದ ರಿಯಾಜ್‌ ಭಟ್ಕಳ ಮತ್ತು ಇಕ್ಬಾಲ್‌ ಭಟ್ಕಳ ಆಪ್ತ ಅದ್ನಾನ್‌ ಹಸನ್‌ ಐಸಿಸ್‌ ಉಗಮಕ್ಕೂ ಬಹಳ ಮೊದಲೇ ಸ್ವಯಂಘೋಷಿತ ಖಲೀಫಾ ಸಾಮ್ರಾಜ್ಯ ಸ್ಥಾಪನೆಗಾಗಿ ಭಾರತದಲ್ಲಿ ಜಿಹಾದಿಗಳ ನೇಮಕದಲ್ಲಿ ತೊಡಗಿದ್ದ ಎಂಬುದು ಬಯಲಾಗಿದೆ.

ಐಸಿಸ್‌ 2014ರ ಜೂನ್‌ನಲ್ಲಿ ಸ್ವಯಂಘೋಷಿತ 'ಖಲೀಫಾ' ಸಾಮ್ರಾಜ್ಯ ಸ್ಥಾಪನೆಯನ್ನು ಪ್ರಕಟಿಸಿದ ಬಳಿಕ ಕೆಲವು ಭಾರತೀಯರು ಅದರ ಜತೆ ಸಂಪರ್ಕ ಸಾಧಿಸಿರುವುದನ್ನು ಗುಪ್ತಚರ ಸಂಸ್ಥೆಗಳು ಈ ಹಿಂದೆ ಪತ್ತೆ ಹಚ್ಚಿದ್ದವು. ಆದರೆ ಈಗ ಗುಪ್ತಚರ ಸಂಸ್ಥೆಗಳು ಹೇಳುವ ಪ್ರಕಾರ ಅದಕ್ಕೂ ಮೊದಲೇ 2013ರ ಅಕ್ಟೋಬರ್‌ ಮತ್ತು ನವೆಂಬರ್‌ನಿಂದಲೇ ಅದ್ನಾನ್‌ ಹಸನ್‌ ಸ್ವಯಘೋಷಿತ ಖಲೀಫಾ ಸಾಮ್ರಾಜ್ಯ ಸ್ಥಾಪನೆಗೆ ಯತ್ನ ಆರಂಭಿಸಿದ್ದ.

ರಾಷ್ಟ್ರೀಯ ತನಿಖಾ ತಂಡವು ಕೋರ್ಟ್‌ಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಈ ಕಥೆಯನ್ನು ಬಿಚ್ಚಿಟ್ಟಿದೆ. ಅದ್ನಾನ್‌ ಬಹಳಷ್ಟು ಭಾರತೀಯ ಯುವಕರನ್ನು ಐಸಿಸ್‌ ಸಂಘಟನೆ ಮತ್ತು ಕೃತ್ಯಗಳಿಗೆ ಕೈಜೋಡಿಸುವಂತೆ ಉತ್ತೇಜಿಸುತ್ತಿದ್ದ. ಆನ್‌ಲೈನ್‌ನಲ್ಲಿ ಸುದ್ದಿ ಪೋಸ್ಟ್‌, ಕಮೆಂಟ್‌, ವೀಡಿಯೊ, ಫೋಟೊಗಳ, ಇಸ್ಲಾಂ ವಿದ್ವಾಂಸರ ಭಾಷಣಗಳನ್ನು ಪೋಸ್ಟ್‌ ಮಾಡುವ ಮೂಲಕ ಆತ ಯುವಕರನ್ನು ಜಿಹಾದ್‌ಗೆ ಸೆಳೆಯುವ ಕೆಲಸ ಮಾಡುತ್ತಿದ್ದ. ಭಾರತ ಮತ್ತು ವಿದೇಶಗಳಲ್ಲಿ ಐಸಿಸ್‌ ಸದಸ್ಯರ ಜತೆ ನಿಕಟ ಸಂಪರ್ಕದಲ್ಲಿದ್ದ ಎಂದು ತನಿಖಾ ತಂಡ ಹೇಳಿದೆ.

ಸಂಯುಕ್ತ ಅರಬ್‌ ಒಕ್ಕೂಟ ಅದ್ನಾನ್‌ನನ್ನು ಗಡೀಪಾರು ಮಾಡಿದ ಬಳಿಕ ಇಬ್ಬರು ಸಹಚರರ ಜತೆ ಆತನನ್ನು ಬಂಧಿಸಲಾಗಿತ್ತು. ನೈಜೀರಿಯಾ, ಪಾಕಿಸ್ತಾನ, ಆಸ್ಪ್ರೇಲಿಯಾ, ಫಿಲಿಪ್ಪೀನ್ಸ್‌ , ಬ್ರಿಟನ್‌, ಅಮೆರಿಕ, ಸರ್ಬಿಯಾ, ಸೌದಿ ಅರೇಬಿಯಾ, ಬಾಂಗ್ಲಾ, ಮಲೇಷ್ಯಾ, ಯುರೋಪ್‌ ರಾಷ್ಟ್ರಗಳ ಹಲವರ ಜತೆ ಅದ್ನಾನ್‌ ನಿರಂತರ ಸಂಪರ್ಕದಲ್ಲಿದ್ದಾನೆ.

ಆತ ಹಣ ಸಂಗ್ರಹಿಸಿ ಐಸಿಸ್‌ ಕಾರ್ಯಾಚರಣೆ ನಡೆಸುವವರಿಗೆ ವಿತರಿಸುತ್ತಿದ್ದ. ಪಾಕಿಸ್ತಾನ, ಅಫಘಾನಿಸ್ತಾನ, ಸಿರಿಯಾಗಳಲ್ಲಿರುವ ಇಂಡಿಯನ್‌ ಮುಜಾಹಿದ್ದೀನ್‌ ಸದಸ್ಯರು ಮತ್ತು ಐಸಿಸ್‌ನ ಭಾರತದ ಮುಖ್ಯ ನೇಮಕ ಪ್ರಕ್ರಿಯೆ ನಿರ್ವಹಿಸುವ ಶಫಿ ಅರ್ಮರ್‌ ಜತೆಗೂ ಸಂಪರ್ಕದಲ್ಲಿ ಇದ್ದಾನೆ ಎಂದು ತನಿಖಾ ತಂಡ ಹೇಳಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>