Quantcast
Channel: VijayKarnataka
Viewing all articles
Browse latest Browse all 6795

ಒಣ ಹವೆ: ರಾಜ್ಯದ ಕಾಫಿ ಇಳುವರಿಗೆ ಹಾನಿ

$
0
0

* ಕೊಡಗು, ಹಾಸನ, ಚಿಕ್ಕಮಗಳೂರಿನಲ್ಲಿ ಮಳೆಯ ವ್ಯತ್ಯಯ

* ಶೇ.8-12ರಷ್ಟು ಇಳುವರಿ ಇಳಿಕೆ ನಿರೀಕ್ಷೆ

* ಒಣ ಹವೆಗೆ ಅರಳದ ಕಾಫಿ ಹೂಗಳು

* ಕೇಶವ ಪ್ರಸಾದ್‌.ಬಿ.ಕಿದೂರು ಬೆಂಗಳೂರು

ಈ ವರ್ಷ ಸಕಾಲದಲ್ಲಿ ಮುಂಗಾರು ಮಳೆಯಾಗದಿರುವ ಪರಿಣಾಮ ರಾಜ್ಯದಲ್ಲಿ ಕಾಫಿ ಬೆಳೆಯ ಕೊರತೆ ಉಂಟಾಗಲಿದೆ. ಕೆಲ ದಿನಗಳ ಹಿಂದೆ ಲೋಕಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೂ ಇದನ್ನು ಸ್ಪಷ್ಟಪಡಿಸಿದ್ದಾರೆ.

'' 2016-17ರ ಸಾಲಿನಲ್ಲಿ ಕಾಫಿ ಉತ್ಪಾದನೆಯಲ್ಲಿ ಶೇ.8ರಷ್ಟು ಇಳಿಮುಖವಾಗಬಹುದು ಎಂದು ನಿಮ್ಲ ಸೀತಾರಾಮನ್‌ ತಿಳಿಸಿದ್ದಾರೆ. ದೇಶದ ಕಾಫಿ ಉತ್ಪಾದನೆಯಲ್ಲಿ 70 ಪರ್ಸೆಂಟ್‌ಗೂ ಅಧಿಕ ಪಾಲನ್ನು ಕರ್ನಾಟಕದ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳು ಕೊಡುತ್ತಿರುವುದರಿಂದ ಸಹಜವಾಗಿ, ಈ ಭಾಗದಲ್ಲಿ ಕಾಫಿ ಉತ್ಪಾದನೆ ಇಳಿಕೆ ಖಚಿತವಾಗಿದೆ.

ಮುಂಗಾರಿನ ಮುನಿಸು:

ಈ ವರ್ಷ ಮಾರ್ಚ್‌-ಏಪ್ರಿಲ್‌ ಅವಧಿಯಲ್ಲಿ ಮಳೆಯಾಗಬೇಕಿತ್ತು. '' ಕಾಫಿ ಹೂವುಗಳು ಅರಳಿ ಕಾಯಿಯಾಗಬೇಕಿದ್ದರೆ, ಸಕಾಲದಲ್ಲಿ ವರ್ಷಧಾರೆಯಾಗಬೇಕು. ಆದರೆ ಈ ವರ್ಷ ವ್ಯತ್ಯಯವಾಗಿದ್ದು, ಹೂವು ಅರಳದೆ ಉದುರಿ ಹೋಗಿದೆ. ಹೀಗಾಗಿ ರಾಜ್ಯದಲ್ಲಿ ಶೇ8ರಿಂದ 12ರಷ್ಟು ಕಾಫಿ ಇಳುವರಿ ಕುಸಿಯಲಿದೆ'' ಎಂದು ಇಂಡಿಯಾ ಕಾಫಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಫಿ ಮಂಡಳಿಯ ಮಾಜಿ ಸದಸ್ಯ ಅನಿಲ್‌ ಕುಮಾರ್‌ ಭಂಡಾರಿ ಅವರು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಬೆಳೆಗೆ ಹಾನಿ:

ರಾಜ್ಯದ ಮೂರೂ ಜಿಲ್ಲೆಗಳಲ್ಲಿ ಅರೆಬಿಕಾ ಮಾದರಿಯ ಕಾಫಿ ಬೆಳೆಗೆ ಈ ಸಲ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಸಕಾಲದಲ್ಲಿ ಮಳೆಯ ಕೊರತೆ ಮತ್ತು ಕೀಟಗಳ ಕಾಟದಿಂದಲೂ ಹಾನಿಯಾಗಿದೆ ಎನ್ನುತ್ತಾರೆ ಅವರು.

ದರ ಏರಿಕೆಯಾದೀತೆ?

ಬ್ರೆಜಿಲ್‌, ಕೊಲಂಬಿಯಾ ಮತ್ತು ವಿಯೆಟ್ನಾಂನಲ್ಲಿ ಈ ವರ್ಷ ಬರದ ಪರಿಸ್ಥಿತಿಯ ಪರಿಣಾಮ ಕಾಫಿ ಉತ್ಪಾದನೆ ಅಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ. ಅಲ್ಲಿ ಬಂಪರ್‌ ಬೆಳೆಯಾದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ದರ ಇಳಿಯುತ್ತದೆ. ಆದರೆ ಈ ಸಲ ಅಂತಹ ಸಾಧ್ಯತೆ ಇಲ್ಲವೆನ್ನಲಾಗುತ್ತಿದೆ. ಹೀಗಿದ್ದರೂ ಆಗಸ್ಟ್‌ ತಿಂಗಳಿನಲ್ಲಿ ಜಾಗತಿಕ ಮಾರುಕಟ್ಟೆಯ ಚಿತ್ರಣ ಗೊತ್ತಾಗಬಹುದು. ಭಾರತದ ಕಾಫಿ ಉತ್ಪಾದನೆಯು ದರದ ಮೇಲೆ ಪ್ರಭಾವ ಬೀರುವುದಿಲ್ಲ ಎನ್ನುತ್ತಾರೆ ಭಂಡಾರಿ.

ಹವಾಮಾನ ಇಲಾಖೆಯ ಪ್ರಕಾರ ಕರ್ನಾಟಕದಲ್ಲಿ ಕಳೆದ ಮಾರ್ಚ್‌-ಏಪ್ರಿಲ್‌ ಅವಧಿಯಲ್ಲಿ ಸಾಮಾನ್ಯ ಮಟ್ಟಕ್ಕಿಂತ 51 ಪರ್ಸೆಂಟ್‌ನಷ್ಟು ಕಡಿಮೆ ಮಳೆಯಾಗಿದೆ. 2015ರ ಮಾರ್ಚ್‌ನಿಂದ 2016ರ ಮಾರ್ಚ್‌ ಅವಧಿಯಲ್ಲಿ ಭಾರತ 319,734 ಟನ್‌ ಕಾಫಿಯನ್ನು ರಫ್ತು ಮಾಡಿತ್ತು. ಅಂದರೆ ಶೇ.13ರಷ್ಟು ಏರಿಕೆಯಾಗಿತ್ತು. ಆದರೆ ಈ ವರ್ಷ ಮಳೆಯ ಅಭಾವ ಪರಿಣಾಮ ಬೀರಲಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>