Quantcast
Channel: VijayKarnataka
Viewing all articles
Browse latest Browse all 6795

ಸಾರ್ವಜನಿಕ ಬ್ಯಾಂಕ್‌ ಸಿಬ್ಬಂದಿ ಮುಷ್ಕರ ಇಂದು

$
0
0

ಹೊಸದಿಲ್ಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಿಬ್ಬಂದಿ ಶುಕ್ರವಾರ ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಎಸ್‌ಬಿಐ ಮತ್ತು ಅದರ ಅಧೀನ ಬ್ಯಾಂಕ್‌ಗಳ ವಿಲೀನವನ್ನು ವಿರೋಧಿಸಿ, ಹಾಗೂ ಬ್ಯಾಂಕಿಂಗ್‌ ಸುಧಾರಣೆಗೆ ಸಂಬಂಧಿಸಿದ ಸರಕಾರದ ಪ್ರಸ್ತಾಪಗಳನ್ನು ಖಂಡಿಸಿ ಯುನೈಟೆಡ್‌ ಫೋರಮ್‌ ಆಫ್‌ ಬ್ಯಾಂಕ್ಸ್‌ ಯೂನಿಯನ್‌ (ಯುಎಫ್‌ಬಿಯು) ಮುಷ್ಕರಕ್ಕೆ ಕರೆ ಕೊಟ್ಟಿದೆ. ಈ ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟು 8 ಲಕ್ಷ ಸಿಬ್ಬಂದಿ ಇದ್ದಾರೆ. ಮುಷ್ಕರದ ಪರಿಣಾಮ ಚೆಕ್‌ ಕ್ಲಿಯರೆನ್ಸ್‌, ನಗದು ಠೇವಣಿ, ಮತ್ತು ಬ್ಯಾಂಕ್‌ ಶಾಖೆಗಳಲ್ಲಿ ಹಣ ಹಿಂತೆಗೆತಕ್ಕೆ ಸಮಸ್ಯೆಯಾಗಬಹುದು. ಆದರೆ ಎಟಿಎಂಗಳಲ್ಲಿ ಹಣ ಹಿಂತೆಗೆದುಕೊಳ್ಳಬಹುದು.

ಎಸ್‌ಬಿಐ ಹಾಗೂ ಇತರ ಬ್ಯಾಂಕ್‌ಗಳು ಗ್ರಾಹಕರಿಗೆ, ಜುಲೈ 29ರಂದು ಮುಷ್ಕರದ ಪರಿಣಾಮ ಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ತಿಳಿಸಿವೆ.

''ಆಲ್‌ ಇಂಡಿಯಾ ಸ್ಟೇಟ್‌ ಬ್ಯಾಂಕ್‌ ಆಫೀಸರ್ಸ್‌ ಫೆಡರೇಷನ್‌ ಮತ್ತು ಆಲ್‌ ಇಂಡಿಯಾ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ಟಾಫ್‌ ಫೆಡರೇಷನ್‌, ಯುಎಫ್‌ಬಿಯು ಸದಸ್ಯತ್ವ ಹೊಂದಿವೆ. ಆದ್ದರಿಂದ ಮುಷ್ಕರ ಪ್ರಭಾವ ಬೀರಬಹುದು'' ಎಂದು ಪ್ರಕಟಣೆ ತಿಳಿಸಿದೆ.

ಆಲ್‌ ಇಂಡಿಯಾ ಬ್ಯಾಂಕ್‌ ಎಂಪ್ಲಾಯೀಸ್‌ ಅಸೋಸಿಯೇಷನ್‌ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿಎಚ್‌ ವೆಂಕಟಾಚಲಮ್‌ ಅವರ ಪ್ರಕಾರ ಜುಲೈ 26ರಂದು ಕಾರ್ಮಿಕ ಆಯುಕ್ತರ ಜತೆಗೆ ನಡೆಸಿದ ಮಾತುಕತೆ ವಿಫಲವಾಗಿದೆ. ಆದರೆ ಒಕ್ಕೂಟದ ಬೇಡಿಕೆಯನ್ನು ಪರಿಹರಿಸಲು ಸರಕಾರ ಯತ್ನಿಸಿದರೆ, ಒಕ್ಕೂಟ ಕೂಡ ಮುಷ್ಕರದ ಬಗ್ಗೆ ಮರು ಪರಿಶೀಲನೆ ನಡೆಸಲಿದೆ.

'' ಬ್ಯಾಂಕ್‌ ಒಕ್ಕೂಟಗಳು ಸೌಹಾರ್ದಯುತ ಮಾತುಕತೆಗೆ ಸಿದ್ಧವಿದೆ. ಆದರೆ ಸರಕಾರ ತನ್ನ ಹಠಮಾರಿತನ ಬಿಡುತ್ತಿಲ್ಲ. ಆದ್ದರಿಂದ ಮಾತುಕತೆಯಲ್ಲಿ ಅರ್ಥವಿಲ್ಲದಾಗಿದೆ'' ಎಂದು ಅವರು ಹೇಳಿದರು.

ಬ್ಯಾಂಕಿಂಗ್‌ನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನೂ ಒಕ್ಕೂಟಗಳು ವಿರೋಧಿಸುತ್ತಿವೆ.

ಶನಿವಾರ ಬ್ಯಾಂಕ್‌ ತೆರೆಯಲಿವೆ

ಜುಲೈ 29ರಂದು ಬ್ಯಾಂಕ್‌ ಮುಷ್ಕರ ಇದ್ದರೂ, ಜುಲೈ 30ರಂದು ಶನಿವಾರ ಎಂದಿನಂತೆ ಇಡೀ ದಿನ ಕಾರ್ಯನಿರ್ವಹಿಸಲಿವೆ ಎಂದು ಇಂಡಿಯನ್‌ ನ್ಯಾಷನಲ್‌ ಬ್ಯಾಂಕ್‌ ಎಂಪ್ಲಾಯೀಸ್‌ ಫೆಡರೇಷನ್‌ನ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಕೆ ನರಸಿಂಹ ಮೂರ್ತಿ ತಿಳಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>