Quantcast
Channel: VijayKarnataka
Viewing all articles
Browse latest Browse all 6795

ಲಿಂಗ ಪರಿವರ್ತಿತ ಮಹಿಳೆಗೆ ಕಿರುಕುಳ:ಮಾನವ ಹಕ್ಕು ಫೌಂಡೇಷನ್‌ಗೆ ದೂರು

$
0
0

ಮುಂಬಯಿ: ಸುತ್ತಲ ನಿವಾಸಿಗಳು ಕಿರುಕುಳ ನೀಡುತ್ತಿದ್ದು, ಬೆದರಿಸುವ ಜತೆಗೆ ನಿಂದನೆ ಮತ್ತು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಪೂರ್ವ ನಲಸಪೊರಾದ ನಿವಾಸಿಗಳಾಗಿರುವ ಲಿಂಗ ಪರಿವರ್ತಿತ ಹೆಣ್ಣು ಮತ್ತು ದ್ವಿಲಿಂಗಿ ದಂಪತಿ ಮಾನವ ಹಕ್ಕುಗಳ ಫೌಂಡೇಷನ್‌ಗೆ ದೂರು ನೀಡಿದ್ದಾರೆ.

ರಾಂಶ್ರೀ ಮೊಹಮ್ಮದ್‌ ಆರ್ಯ ಮತ್ತು ಕಾಳಿಕಾ ದಂಪತಿ ದೂರು ನೀಡಿದ ದಂಪತಿ, ಕಿರುಕುಳ ಮತ್ತು ನಿಂದನೆ ತಾಳಲಾಗದೆ ಕಾಳಿಕಾ ಇತ್ತೀಚೆಗೆ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಇದೇ ಕಾರಣಕ್ಕೆ ಮಗುವನ್ನು ದತ್ತು ಪಡೆದುಕೊಳ್ಳುವುದನ್ನು ಕೂಡ ವಿಳಂಬ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಕಲಿನಾ ನಿವಾಸಿ ರಾಂಶ್ರೀ ದ್ವಿಲಿಂಗಿಯಾಗಿದ್ದು, ಅವರ ಮೊದಲ ಹೆಸರು ರಿಜ್ವಾನ್ ಖಾನ್‌. ಕಾಳಿಕಾ ಅವರ ಮೊದಲ ಹೆಸರು ಸಾಮ್ಸನ್‌ ಜೋಸ್‌ ಆಗಿದ್ದು, ಪುರುಷ ಸಲಿಂಗಕಾಮಿ ಆಗಿದ್ದರು. ಇವರಿಬ್ಬರೂ ಕೌಶಲ ತರಬೇತಿ ಕೇಂದ್ರದಲ್ಲಿ ಪರಿಚಿತರಾಗಿ ಗೆಳೆಯರಾಗಿದ್ದರು. 2008ರಲ್ಲಿ ಜೋಸ್‌ ಆಂಧ್ರದ ಕಡಪಾದಲ್ಲಿ ಹೆಣ್ಣಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದರು. ಆಗ ರಿಜ್ವಾನ್‌ ಹಣಕಾಸಿನ ನೆರವು ನೀಡಿದ್ದರು. ಬಳಿಕ ಇಬ್ಬರೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಮಿರಾ ರೋಡ್‌ನಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಅಲ್ಲಿಯ ನಿವಾಸಿಗಳು ಇವರನ್ನು ಸ್ವೀಕರಿಸದ್ದು, ಯಾವುದೇ ತೊಂದರೆ ಇರಲಿಲ್ಲ. ಅಲ್ಲಿಂದ ನಲಸಪೊರಾಗೆ ಬಮದ ಮೇಲೆ ಕಿರುಕುಳ ಆರಂಭವಾಯಿತು. ವಾಸವಿರುವ ಕಟ್ಟಡದ ಇತರ ನಿವಾಸಿಗಳು ಮುಂಜಾನೆ ಮೂರನೇ ಮಹಡಿಯಲ್ಲಿರುವ ತಮ್ಮ ಮನೆಯ ಬಾಗಿಲು ಬಡಿಯುತ್ತಾರೆ. ನಪುಂಸಕರೆಂದು ಕರೆಯುತ್ತಾರೆ ಎಂದು ದಂಪತಿ ವಿವರಿಸಿದ್ದಾರೆ.

ಎಲ್ಲ ದಾಖಲೆಗಳಲ್ಲೂ ಮಹಿಳೆ ಎಂದು ನಮೂದಿಸಿದ್ದೇನೆ, ಆದರೆ ಸುತ್ತಲ ನಿವಾಸಿಗಳು ಇದನ್ನು ಒಪ್ಪುತ್ತಿಲ್ಲ, ಪುರುಷನಂತೆ ನಾನು ಬದುಕಬೇಕು ಎಂದು ಬಯಸುತ್ತಿದ್ದಾರೆ, ಅದು ಸಾಧ್ಯವಿಲ್ಲ,' ಎಂದು ಕಾಳಿಕಾ ಹೇಳಿದ್ದಾರೆ.

ಈ ದಂಪತಿ ನಿರಂತರ ಭಯದಲ್ಲೇ ಬದುಕುತ್ತಿದ್ದಾರೆ. ಹೆಚ್ಚಿನ ರಾತ್ರಿ ಇವರ ಮನೆ ಬಾಗಿಲ ಎದುರು ಸ್ಥಳೀಯ ಪುರುಷರು ಇರುತ್ತಾರೆ. ನಾನಾ ರೀತಿ ನಿಂದಿಸಿ ಅಪಹಾಸ್ಯ ಮಾಡುತ್ತಾರೆ. ಕಳೆದ ತಿಂಗಳು ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾರೆ. ಪೊಲೀಸರು ಈ ದಂಪತಿ ಬಗ್ಗೆ ಅಲ್ಲಿನವರನ್ನು ಪ್ರಶ್ನಿಸಿದರೆ ಉತ್ತರಿಸಲು ನಿರಾಕರಿಸುತ್ತಾರೆ. ಇಲ್ಲಿನವರಿಗೆ ಲಿಂಗ ಪರಿವರ್ತನೆಯ ಬಗ್ಗೆ ಅರಿವೇ ಇಲ್ಲ, ಹೀಗಾಗಿ ಲೇವಡಿ ಮಾಡುತ್ತಾರೆ ಎಂದು ಸ್ಥಳೀಯ ರಾಜಕೀಯ ಕಾರ್ಯಕರ್ತರು ಹೇಳುತ್ತಾರೆ.

ಭಾರತದಲ್ಲಿ ಇಂಥ ಮದುವೆಯನ್ನು ಇಂದಿಗೂ ಸಹಜವಾಗಿ ಸ್ವೀಕರಿಸುತ್ತಿಲ್ಲ. ದಂಪತಿ ಪರಿಸ್ಥಿತಿ ಕೈ ಮೀರದಂತೆ ನಲಸಪೊರಾದಲ್ಲಿರುವ ಲಿಂಗ ಪರಿವರ್ತಿತರ ಸಮುದಾಯದ ಜತೆ ಸಂಪರ್ಕದಲ್ಲಿ ಇರುವುದು ಅಗತ್ಯ ಎಂದು ಲಿಂಗಪರಿವರ್ತಿತ ಕಾರ್ಯಕರ್ತರಾದ ಅಭಿನಾ ಅಹೆರ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ಮೂರನೆಯವರ ಮಧ್ಯಪ್ರವೇಶ ಅಗತ್ಯ ಎಂದು ಸಮಾನ ಹಕ್ಕುಗಳ ಕಾರ್ಯಕರ್ತ ಹರೀಶ್‌ ಅಯ್ಯರ್ ಹೇಳಿದ್ದಾರೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>