Quantcast
Channel: VijayKarnataka
Viewing all articles
Browse latest Browse all 6795

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಅಬು ಜುಂದಾಲ್‌ ದೋಷಿ

$
0
0

ಮುಂಬಯಿ: ಔರಂಗಬಾದ್‌ನಲ್ಲಿ 2006ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ 26/11ರ ದಾಳಿಯ ಪ್ರಮುಖ ರೂವಾರಿ ಅಬು ಜುಂದಾಲ್‌ ದೋಷಿ ಎಂದು ಮೋಕಾ ವಿಶೇಷ ಕೋರ್ಟ್‌ ಹೇಳಿದೆ.

ಪ್ರಕರಣದ ಇತರ 21 ಆರೋಪಿಗಳಲ್ಲಿ 11 ಮಂದಿ ದೋಷಿಗಳು ಎಂದು ಹೇಳಿರುವ ಕೋರ್ಟ್‌ ಹತ್ತು ಮಂದಿಯನ್ನು ಖುಲಾಸೆಗೊಳಿಸಿದೆ. 2002ರ ಗುಜರಾತ್‌ ಗಲಭೆಯ ಬಳಿಕ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ವಿಶ್ವಹಿಂದೂ ಪರಿಷತ್ ಪ್ರವೀಣ್‌ ತೊಗಾಡಿಯಾ ಅವರನ್ನು ಹತ್ಯೆ ಮಾಡಲು ರೂಪಿಸಿದ ಸಂಚು ಇದಾಗಿತ್ತು.

2006ರ ಮೇ 8ರಂದು ಮಹಾರಾಷ್ಟ್ರ ಎಟಿಎಸ್ ಔರಂಗಬಾದ್‌ನ ಚಂದ್‌ವಾಡ್‌-ಮನ್ಮಾದ್‌ ಹೆದ್ದಾರಿಯಲ್ಲಿ ಕಾರನ್ನು ಬೆನ್ನಟ್ಟಿ ಮೂವರು ಶಂಕಿತ ಉಗ್ರರನ್ನು ಬಂಧಿಸಿ 30 ಕೆಜಿ ಆರ್‌ಡಿಎಕ್‌, 10 ಎಕೆ-47, 3,200 ಬುಲೆಟ್‌ ವಶಪಡಿಸಿಕೊಂಡಿತ್ತು. ಆದರೆ ಜುಂದಾಲ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಬಾಂಗ್ಲಾದೇಶಕ್ಕೆ ಹೋಗಿದ್ದು, ಬಳಿಕ ಪಾಕಿಸ್ತಾನಕ್ಕೆ ತೆರಳಿದ್ದ.

ಜುಂದಾಲ್‌ ಲಷ್ಕರೆ ಉಗ್ರನಾಗಿದ್ದು, ಮಹಾರಾಷ್ಟ್ರದ ಬೀದ್‌ ಜಿಲ್ಲೆಯ ನಿವಾಸಿ. 2012ರಲ್ಲಿ ಜುಂದಾಲ್‌ನನ್ನು ಸೌದಿ ಅರೇಬಿಯಾ ಭಾರತಕ್ಕೆ ಗಡಿಪಾರುಗೊಳಿಸಿತ್ತು. 2013ರ ಆಗಸ್ಟ್‌ನಲ್ಲಿ ವಿಶೇಷ ಕೋರ್ಟ್‌ 22 ಮಂದಿ ಬಂಧಿತರ ವಿರುದ್ಧ ಆರೋಪ ದಾಖಲಿಸಿತ್ತು.

ಮೋಕಾ ಕಾಯಿದೆಯ ಸಾಂವಿಧಾನಿಕತೆ ಪ್ರಶ್ನಿಸಿ ಒಬ್ಬ ಆರೋಪಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ ಆರೋಪಿಗಳ ವಿಚಾರಣೆಗೆ ತಡೆ ನಿಡಿತ್ತು. 2009ರಲ್ಲಿ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು. ಕಳೆದ ಆಗಸ್ಟ್‌ನಲ್ಲಿ ವಿಚಾರಣೆ ಚುರುಕುಗೊಳಿಸುವಂತೆ ಮುಂಬಯಿ ಹೈಕೋರ್ಟ್‌ ಕೆಳ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>