Quantcast
Channel: VijayKarnataka
Viewing all articles
Browse latest Browse all 6795

ಇಪಿಎಫ್‌ಒ ಟ್ರಸ್ಟಿಗಳ ಸಭೆಗೆ ಬಹಿಷ್ಕಾರ

$
0
0

ಹೊಸದಿಲ್ಲಿ: ಮಂಗಳವಾರ ನಡೆದ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ಟ್ರಸ್ಟಿಗಳ ಸಭೆಯನ್ನು ಕಾರ್ಮಿಕ ಸಂಘಟನೆಗಳು ಬಹಿಷ್ಕರಿಸಿವೆ. ಸಭಾತ್ಯಾಗದ ಮೂಲಕ, ಪಿಎಫ್‌ ನಿಷ್ಕ್ರಿಯ ಖಾತೆಗಳಲ್ಲಿನ 17,000 ಕೋಟಿ ರೂ.ಗಳ ಹಣವನ್ನು ಹಿರಿಯ ನಾಗರಿಕರ ಕಲ್ಯಾಣಕ್ಕೆ ಬಳಸುವ ಕೇಂದ್ರದ ನೀತಿಯನ್ನು ಖಂಡಿಸಿವೆ.

ಪಿಎಫ್‌ಗೆ ಸಂಬಂಧಿಸಿದ ಕೇಂದ್ರ ಸರಕಾರದ ಇತ್ತೀಚಿನ ನೀತಿಗಳು ವಿವಾದ ಮತ್ತು ಕಾರ್ಮಿಕರ ವಿರೋಧಕ್ಕೆ ಕಾರಣವಾಗಿವೆ. ನಿಷ್ಕ್ರಿಯ ಖಾತೆಗಳ ಹಣವನ್ನು ಬಳಸಿಕೊಳ್ಳುವ ಸಂಬಂಧ ಇತ್ತೀಚೆಗೆ ಹಣಕಾಸು ಸಚಿವಾಲಯವು ಸುತ್ತೋಲೆ ಹೊರಡಿಸಿತ್ತು.

ಮಂಗಳವಾರ ನಡೆದ 214ನೇ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ(ಸಿಬಿಟಿ) ಸಭೆಯಲ್ಲಿ ಕೇಂದ್ರದ ನೀತಿ ಕುರಿತಾಗಿ ಆಕ್ಷೇಪ ವ್ಯಕ್ತವಾಯಿತು. ''ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಪ್ರಧಾನಿಯನ್ನು ಭೇಟಿಯಾಗಿ, ಕಾರ್ಮಿಕರ ಹಣವನ್ನು ಬಳಸಿಕೊಳ್ಳದಂತೆ ಮನವೊಲಿಸಬೇಕು. ಈ ಸಂಬಂಧಿ ಹಣಕಾಸು ನೀತಿಗೆ ತಿದ್ದುಪಡಿ ತರಬೇಕು,'' ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿದವು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಸಚಿವ ದತ್ತಾತ್ರೇಯ, ''ಇವತ್ತಿನ ಕಾರ್ಯಸೂಚಿ ವಿಷಯವನ್ನು ನಾವು ವಾಪಸ್‌ ಪಡೆದಿದ್ದೇವೆ. ಈ ಬಗ್ಗೆ ಪರಾಮರ್ಶೆ ನಡೆಸುತ್ತೇವೆ,'' ಎಂದು ಹೇಳಿ, ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟನೆಗಳಿಗೆ ಮನವಿ ಮಾಡಿದರು. ಆದಾಗ್ಯೂ, ಸರಕಾರದ ನೀತಿ ವಿರೋಧಿಸಿದ ಸಂಘಟನೆಗಳ ಪ್ರಮುಖರು ಸಭಾತ್ಯಾಗ ಮಾಡಿದರು.

ಏನಿದು ವಿವಾದ?

ಯಾವುದೇ ಖಾತೆಯಲ್ಲಿ(ಇಪಿಎಫ್‌ ಯೋಜನೆ ಸೇರಿದಂತೆ) ಇರುವ ಹಣವನ್ನು ಖಾತೆದಾರರು 7 ವರ್ಷಗಳ ಒಳಗಾಗಿ ಹಿಂಪಡೆಯದೇ ಹೋದರೆ, ಅದನ್ನು ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುತ್ತದೆ. ಆ ಹಣವನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ಇಪಿಎಫ್‌ಒ ಸೇರಿದಂತೆ ಸಂಬಂಧಿಸಿದ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ರವಾನಿಸಬೇಕು ಎಂದು ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿತ್ತು.

ಕಾರ್ಮಿಕರ ವಾದವೇನು?

ವಾರಸುದಾರರು ಅಥವಾ ಅವರ ಸಂಬಂಧಿಗಳನ್ನು ಹುಡುಕಿ ನಿಷ್ಕ್ರಿಯ ಖಾತೆಗಳಲ್ಲಿ ಉಳಿಯುವ ಹಣವನ್ನು ತಲುಪಿಸಬೇಕು. ಇದನ್ನು ಮಾಡದೇ ಸರಕಾರದ ಯೋಜನೆಗಳಿಗೆ ಬಳಸಿಕೊಳ್ಳುವುದು ತರವಲ್ಲ ಎನ್ನುವುದು ಕಾರ್ಮಿಕ ಸಂಘಟನೆಗಳ ವಾದ.

ಸರಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಯದೇ ಹೋದರೆ, ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಾಗಿ ಸಿಬಿಟಿ ಸದಸ್ಯರು ಎಚ್ಚರಿಸಿದ್ದಾರೆ. ಸಿಬಿಟಿ ಅನ್ನುವುದು ಇಪಿಎಫ್‌ಒನಲ್ಲಿ ಕಾರ್ಯನೀತಿ ನಿರ್ಧರಿಸುವ ಮಂಡಳಿ.

ಷೇರು ಪೇಟೆಗೆ ಪಿಎಫ್‌ ಹಣ: ಮುಂದಿನ ಸಭೆಯಲ್ಲಿ ನಿರ್ಧಾರ

ಷೇರುಪೇಟೆಯಲ್ಲಿ(ಇಟಿಎಫ್‌ಗಳಲ್ಲಿ) ಇಪಿಎಫ್‌ಒ ಹೂಡಿಕೆ ಪ್ರಮಾಣವನ್ನು ಸದ್ಯದ ಶೇ.5ರಿಂದ 10ಕ್ಕೆ ಏರಿಸುವ ಸಂಬಂಧ ಚರ್ಚಿಸಲು ಮಂಗಳವಾರ ಟ್ರಸ್ಟಿಗಳ ಸಭೆ ಕರೆಯಲಾಗಿತ್ತು. ಈ ವಿಷಯ ಕುರಿತಾಗಿ ವಿವರವಾದ ವರದಿ ಸಿದ್ಧಪಡಿಸುವಂತೆ ಎಫ್‌ಎಐಸಿ ಸಮಿತಿಗೆ ಸೂಚಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ವಿಷಯವು ಮುಂದಿನ ಸಭೆಯಲ್ಲಿ ಚರ್ಚೆಗೆ ಬರಲಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!