Quantcast
Channel: VijayKarnataka
Viewing all articles
Browse latest Browse all 6795

ಎಸ್‌ಬಿಎಂಗೆ 472 ಕೋಟಿ ರೂ. ನಷ್ಟ

$
0
0

ಎನ್‌ಪಿಎ ಬಾಬ್ತು 585 ಕೋಟಿ ರೂ. ತೆಗೆದಿಟ್ಟ ಎಸ್‌ಬಿಎಂ / ವಸೂಲಾಗದ ಸಾಲ ಹೆಚ್ಚಳ

ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ಬಿಎಂ) ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕ ಅವಧಿಯಲ್ಲಿ 471.9 ಕೋಟಿ ರೂ. ನಷ್ಟಕ್ಕೀಡಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 94.1 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ಬ್ಯಾಂಕಿನ ಅನುತ್ಪಾದಕ ಸಾಲ 1,037.78 ಕೋಟಿ ರೂ.ಗೆ ಏರಿಕೆಯಾಗಿದ್ದು, ಇದರ ಬಾಬ್ತು ಎಸ್‌ಬಿಎಂ 585 ಕೋಟಿ ರೂ.ಗಳನ್ನು ತೆಗೆದಿಟ್ಟಿದೆ. ಬ್ಯಾಂಕ್‌ನ ಒಟ್ಟಾರೆ ಅನುತ್ಪಾದಕ ಆಸ್ತಿ (ಜಿಎನ್‌ಪಿಎ) 18.9 ಪರ್ಸೆಂಟ್‌ ಹೆಚ್ಚಳವಾಗಿದ್ದು, 4,323.1 ಕೋಟಿ ರೂ.ಗೆ ವೃದ್ಧಿಸಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ಗಳಿಗೆ ಬ್ಯಾಲೆನ್ಸ್‌ಶೀಟ್‌ ಅನ್ನು ಅಚ್ಚುಕಟ್ಟಾಗಿಡಲು ಕಟ್ಟು ನಿಟ್ಟಾದ ಸೂಚನೆಗಳನ್ನು ಕೊಟ್ಟಿದೆ. ವಸೂಲಾಗದ ಸಾಲವನ್ನು ಬ್ಯಾಲೆನ್ಸ್‌ಶೀಟ್‌ನಿಂದ ಪ್ರತ್ಯೇಕವಾಗಿಡಲು ಸೂಚಿಸಿದೆ. ಹೀಗಾಗಿ ಎನ್‌ಪಿಎ ಬಾಬ್ತು ಬ್ಯಾಂಕ್‌ಗಳು ದೊಡ್ಡ ಮೊತ್ತವನ್ನು ತೆಗೆದಿಡಲೇಬೇಕಾದ ಪರಿಸ್ಥಿತಿ ಇದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಷೇರು ದರ ಮಂಗಳವಾರ 649.90 ರೂ.ಗೆ ಇಳಿದಿದ್ದು, ಶೇ.1.26ರಷ್ಟು ತಗ್ಗಿದೆ. ಎಸ್‌ಬಿಎಂನ ನಿವ್ವಳ ಬಡ್ಡಿ ಆದಾಯ 541.74 ಕೋಟಿ ರೂ.ನಷ್ಟಿತ್ತು.

ಕೆನರಾ ಬ್ಯಾಂಕ್‌ ಷೇರು ದರ ಏರಿಕೆ: ಎನ್‌ಎಸ್‌ಇನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರು ದರಗಳು ಮಂಗಳವಾರ ಶೇ.4ರ ತನಕ ಚೇತರಿಕೆ ದಾಖಲಿಸಿತು. ಕೆನರಾ ಬ್ಯಾಂಕ್‌, ಓರಿಯೆಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌, ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಸಿಂಡಿಕೇಟ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ,ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಷೇರು ದರ ಶೇ.4-ಶೇ.4ರ ತನಕ ಏರಿಕೆ ದಾಖಲಿಸಿವೆ. ಕೆನರಾ ಬ್ಯಾಂಕ್‌ ಷೇರು ದರ ಆರಂಭಿಕ ವಹಿವಾಟಿನಲ್ಲಿ ಶೇ.4ರಷ್ಟು ಏರಿಕೊಂಡಿತು. ಜೂನ್‌ ತ್ರೈಮಾಸಿಕದಲ್ಲಿ ಸಾಧಾರಣ ಫಲಿತಾಂಶವನ್ನು ಪ್ರಕಟಿಸಿದ್ದರೂ, ಷೇರು ದರ ಚೇತರಿಸಿತು.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>