Quantcast
Channel: VijayKarnataka
Viewing all articles
Browse latest Browse all 6795

ವಿಮೆ ಕಂಪನಿಗಳ ಪಿಂಚಣಿ ಸ್ಕೀಮ್‌ಗಳಿಗಿಂತಲೂ ಎನ್‌ಪಿಎಸ್‌, ಇಪಿಎಫ್‌ ಬೆಟರ್‌

$
0
0

ಎಕನಾಮಿಕ್‌ ಟೈಮ್ಸ್‌ ಮುಂಬಯಿ

ಜೀವ ವಿಮೆ ಕಂಪನಿಗಳು ನೀಡುವ ಪಿಂಚಣಿ ಯೋಜನೆಗಳಿಗೆ ಹೋಲಿಸಿದರೆ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌), ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್‌) ಮತ್ತಿತರ ಆಯ್ಕೆಗಳೇ ಉತ್ತಮ.

ವಿಮೆ ಕಂಪನಿಗಳ ಪಿಂಚಣಿ ಯೋಜನೆಗಳು ಅಂಥ ಲಾಭದಾಯಕವೇನಲ್ಲ. ಇವುಗಳಲ್ಲಿ ಲಿಕ್ವಿಡಿಟಿ ನಷ್ಟ ಮತ್ತು ಅಲ್ಪ ರಿಟರ್ನ್ಸ್‌ ದಾಖಲಾಗಿದ್ದು, ಎನ್‌ಪಿಎಸ್‌ ಮತ್ತು ಇಪಿಎಫ್‌ಗಳೇ ಉತ್ತಮ ಎನ್ನುತ್ತಾರೆ ಹಣಕಾಸು ತಜ್ಞರು.

''ಬಹುತೇಕ ಪಿಂಚಣಿ ಯೋಜನೆಗಳಿಂದ ಬರುವ ಆದಾಯವು ನಿಶ್ಚಿತ ಠೇವಣಿಗಳಿಗೆ(ಎಫ್‌ಡಿ) ಹೋಲಿಸಿದರೆ ಸ್ಪರ್ಧಾತ್ಮಕವಾಗಿ ಇಲ್ಲ,'' ಎನ್ನುವುದು ಪಾಲಿಸಿಬಜಾರ್‌.ಕಾಮ್‌ನ ಮುಖ್ಯ ಕಾರ್ಯ ನಿರ್ವಾಹಕ ಯಶೀಶ್‌ ದಹಿಯಾ ಅವರ ಅಭಿಪ್ರಾಯ.

ವಿಮೆ ಕಂಪನಿಗಳ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣವು ಒಂದು ರೀತಿಯಲ್ಲಿ ಹುಂಡಿಗೆ ಹಾಕಿದಂತೆಯೇ ಸರಿ. ತುರ್ತು ಸಂದರ್ಭದಲ್ಲೂ ತೆಗೆಯಲು ಸಾಧ್ಯವಿಲ್ಲ. ವಿಮೆ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರವು ಭಾಗಶಃ ಹಣ ವಾಪಸ್‌ಗೆ ಅವಕಾಶ ನೀಡಿಲ್ಲ.

''ಎನ್‌ಪಿಎಸ್‌ ಮತ್ತು ಇಪಿಎಫ್‌ಗಳಂತೆ ವಿಮೆ ಕಂಪನಿ ಯೋಜನೆಗಳಲ್ಲಿ ಭಿನ್ನ ಆಯ್ಕೆಗಳಿವೆ. ಎನ್‌ಪಿಎಸ್‌ನಂಥ ಯೋಜನೆಗಳಲ್ಲಿ ಭಾಗಶಃ ಹಣ ವಾಪಸ್‌ ಪಡೆಯಲು ಅವಕಾಶವಿದೆ,'' ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಇನ್ನು ಎನ್‌ಪಿಎಸ್‌, ಇಪಿಎಫ್‌ಗೆ ತೆರಿಗೆ ವಿನಾಯಿತಿ ಲಭ್ಯವಿದ್ದು, ವಿಮೆ ಕಂಪನಿಗಳ ಪಿಂಚಣಿ ಯೋಜನೆಗಳಿಗೆ ತೆರಿಗೆ ತೆರಬೇಕು. ಇಡೀ ಆದಾಯವು ತೆರಿಗೆ ವ್ಯಾಪ್ತಿಗೆ ಬರುತ್ತದೆ. ಈ ಅಂಶವು ಪಿಂಚಣಿ ಯೋಜನೆಗಳ ಖರೀದಿಗೆ ನಿರುತ್ಸಾಹ ತರುವಂತಿದೆ. .

ವಿಮೆ ಕಂಪನಿಗಳು ಎರಡು ರೀತಿಯ ಆಯ್ಕೆಗಳನ್ನು ನೀಡುತ್ತವೆ. ಜೀವಿತಾವಧಿ ಕಂತುಗಳನ್ನು ಪಾವತಿಸಿ ನಿವೃತ್ತಿ ನಂತರ ಪಿಂಚಣಿ ಪಡೆಯುವುದು ಮೊದಲ ವಿಧಾನ. ಒಂದಿಷ್ಟು ಮೊತ್ತವನ್ನು ಹೂಡಿಕೆ ಮಾಡಿ, ತಕ್ಷಣದಿಂದಲೇ ಜಾರಿಯಾಗುವಂತೆ ಮಾಸಿಕ ಪಿಂಚಣಿ ಪಡೆಯುವುದು ಎರಡನೇ ಆಯ್ಕೆ.

ಅಲ್ಪ ಪ್ರಮಾಣದ ರಿಟರ್ನ್ಸ್‌

1 ಕೋಟಿ ರೂ.

ಹೂಡಿಕೆ ಮೊತ್ತ

15 ವರ್ಷ

ಹೂಡಿಕೆಯ ಅವಧಿ

ಅನ್ಯೂಟಿ ಪ್ಲಾನ್‌ಗಳಿಂದ ಬರುವ ರಿಟರ್ನ್ಸ್‌(%)

ಅವಿವಾ ಇಂಡಿಯಾ 5.66

ಎಚ್‌ಡಿಎಫ್‌ಸಿ ಲೈಫ್‌ 6.79

ಎಸ್‌ಬಿಐ ಲೈಫ್‌ 6.73

ರಿಲಯನ್ಸ್‌ ಲೈಫ್‌ 5.30

ಮೂಲ(ಚಾರ್ಟ್‌): ಪಾಲಿಸಿಬಜಾರ್‌


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>