ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರ ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಿದ್ದು, 10 ಹೊಸ ಮುಖಗಳನ್ನು ಸೇರಿಸಲಾಗಿದೆ. ಬಿಜೆಪಿಯ ರಾಮ್ ಶಿಂಧೆಯವರಿಗೆ ಕ್ಯಾಬಿನೆಟ್ ದರ್ಜೆಗೆ ಭಡ್ತಿ ಸಿಕ್ಕಿದ್ದರೆ, ಕಚ್ಚಾಡುವ ಅಂಗಪಕ್ಷ ಶಿವಸೇನೆ ಕೇವಲ ಎರಡು ಸಹಾಯಕ ಸಚಿವ ಖಾತೆಗಳಿಗೆ ತೃಪ್ತಿಪಟ್ಟುಕೊಂಡಿದೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶಿವಸೇನೆಯ ಮುಖ್ಯಸ್ಥ ಉದ್ದವ್ ಠಾಕ್ರೆ ಗೈರಾಗಿದ್ದರು. ವಿಸ್ತರಣೆಯಿಂದ ರಾಜ್ಯಕ್ಕೇನೂ ಲಾಭವಿಲ್ಲವೆಂದು ಹೇಳಿ ಕಾಂಗ್ರೆಸ್ ಕೂಡಾ ದೂರ ಉಳಿಯಿತು. ಮೊದಲ ಬಾರಿಗೆ ಮಹಾರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ- ನೇತೃತ್ವದ ಸರಕಾರದಲ್ಲಿ ವಿಸ್ತರಣೆಯ ಬಳಿಕ, ಕ್ಯಾಬಿನೆಟ್ ದರ್ಜೆಯ 24 ಹಾಗೂ ಸಹಾಯಕ ಸಚಿವರು 17 ಸೇರಿ ಒಟ್ಟು 41 ಸಚಿವರಿದ್ದಾರೆ. ಅವರಲ್ಲಿ ಬಿಜೆಪಿಯ 27, ಶಿವಸೇನೆಯ 12 ಹಾಗೂ ರಾಷ್ಟ್ರೀಯ ಸಮಾಜ ಪಕ್ಷ ಮತ್ತು ಸ್ವಾಭಿಮಾನಿ ಪಕ್ಷ ದ ತಲಾ ಒಬ್ಬರಿದ್ದಾರೆ. ವಿಧಾನಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ಸಚಿವರಾಗಿದ್ದ ಶಿಂಧೆ ಸೇರಿದಂತೆ 6 ಮಂದಿ ಶಾಸಕರು ಶುಕ್ರವಾರ ಸಚಿವ ಸ್ಥಾನಕ್ಕೆ ಭಡ್ತಿ ಪಡೆದರೆ, ಶಿವಸೇನೆಯ ಇಬ್ಬರು ಸಹಾಯಕ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
↧
ಮಂತ್ರಿಮಂಡಲ ವಿಸ್ತರಿಸಿದ ಫಡ್ನವೀಸ್
↧