Quantcast
Channel: VijayKarnataka
Viewing all articles
Browse latest Browse all 6795

ಕಾಸರಗೋಡಿನ 16 ಯುವಕರು ಐಸಿಸ್ ಸೇರ್ಪಡೆ?

$
0
0

ಹಜ್ ಯಾತ್ರೆಗೆಂದು ಪ್ರಯಾಣ / ಒಂದು ತಿಂಗಳಿಂದ ಕಣ್ಮರೆ / ಪೋಷಕರಲ್ಲಿ ಹೆಚ್ಚಿದ ಆತಂಕ

ತಿರುವನಂತಪುರಂ: ನೆರೆಯ ಬಾಂಗ್ಲಾದಲ್ಲಿ ಹೆಚ್ಚುತ್ತಿರುವ ಐಸಿಸ್ ಪ್ರಾಬಲ್ಯ ಭಾರತದ ಪಾಲಿಗೂ ಆತಂಕ ಹುಟ್ಟಿಸಿರುವ ಬೆನ್ನಲ್ಲೇ, ಕೇರಳದ ಕಾಸರಗೋಡಿನಿಂದ ಕಾಣೆಯಾಗಿರುವ 16 ಯುವಕರು ಇಸ್ಲಾಮಿಕ್ ಸಂಘಟನೆ ಸೇರಿರುವ ಅನುಮಾನ ವ್ಯಕ್ತವಾಗಿದೆ.

ಹಜ್ ಯಾತ್ರೆಗೆಂದು ಒಂದು ತಿಂಗಳ ಹಿಂದೆ ಹೊರಟ ಯುವಕರು ಇದುವರೆಗೂ ವಾಪಸಾಗಿಲ್ಲ. ಜತೆಗೆ ಕುಟುಂಬ ಸದಸ್ಯರನ್ನು ಸಂಪರ್ಕಿಸುವ ಪ್ರಯತ್ನವೂ ಮಾಡಿಲ್ಲ. ಇತ್ತಲಿಂದ ಫೋನ್ ಮಾಡಿದರೆ ಅವರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿವೆ. ಹೀಗಾಗಿ ಈ ಯುವಕರು ಇರಾಕ್ ಅಥವಾ ಸಿರಿಯಾಕ್ಕೆ ತೆರಳಿ, ಐಸಿಸ್ ಸಂಘಟನೆಗೆ ಸೇರಿರಬಹುದೆಂದು ಪಾಲಕರು ಭೀತಿಗೊಂಡಿದ್ದಾರೆ.

ಸಿಎಂ ನೆರವಿಗೆ ಮನವಿ: ಈ ಸಂಬಂಧ ಶುಕ್ರವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿರುವ ಪಾಲಕರು, ನೆರವಿಗಾಗಿ ಮೊರೆ ಇಟ್ಟಿದ್ದಾರೆ. ವಿದೇಶಾಂಗ ಸಚಿವಾಲಯದ ಸಹಾಯವನ್ನೂ ಪಡೆಯುವುದಾಗಿ ಅವರು ಹೇಳಿದ್ದಾರೆ.

''ಕಾಣೆಯಾದವರೆಲ್ಲಾ 20 ವರ್ಷ ಆಸುಪಾಸಿನ ವಯಸ್ಸಿನವರು. ಎಲ್ಲರೂ ತ್ರಿಕ್ಕಾರಿಪುರ ಮತ್ತು ಸುತ್ತಮುತ್ತಲ ಊರುಗಳಿಗೆ ಸೇರಿದವರು. ಯುವಕರ ಪತ್ತೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳ ನೆರವು ಪಡೆಯಲಾಗುವುದು,'' ಎಂದು ಕಾಸರಗೋಡು ಸಂಸದ ಪಿ ಕರುಣಾಕರನ್ ಹೇಳಿದ್ದಾರೆ.

ಕಾಣೆಯಾದ ಯುವಕರು ತ್ರಿಕ್ಕಾರಿಪುರದ ಸಭಾಂಗಣವೊಂದರಲ್ಲಿ ಯಾವಾಗಲೂ ಸಭೆ ಸೇರಿ ಚರ್ಚಿಸುತ್ತಿದ್ದರು. ಆದರೆ, ಅವರು ಐಸಿಸ್ ಪ್ರಭಾವಕ್ಕೊಳಗಾದ ಯಾವ ಸೂಚನೆಗಳೂ ಕಾಣಿಸುತ್ತಿರಲಿಲ್ಲ. ಅವರು ಹೇಗೆ ಭಯೋತ್ಪಾದಕರ ಸೆಳೆತಕ್ಕೆ ಒಳಗಾದರು ಎಂಬುದು ಗೊತ್ತಿಲ್ಲ,'' ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.

ವೈದ್ಯನ ಪತ್ನಿ, ಮಗುವೂ ನಾಪತ್ತೆ?

ಯುವಕರೆಲ್ಲ 20ರ ಆಸುಪಾಸಿನ ವಯಸ್ಸಿನವರಾಗಿದ್ದರು ಎನ್ನಲಾಗಿದ್ದು, ಅವರ ಜತೆ ಒಬ್ಬ ಡಾಕ್ಟರ್, ಆತನ ಪತ್ನಿ ಹಾಗೂ 8 ತಿಂಗಳ ಮಗು ಕೂಡ ಇದೆ ಎಂದು ತಿಳಿದುಬಂದಿದೆ.

ಅಂತಿಮ ಗುರಿ ತಲುಪಿದ್ದೇವೆ..!

ನಾಪತ್ತೆಯಾದ ಯುವಕರ ಪೈಕಿ ಒಬ್ಬನಿಂದ ಕುಟುಂಬ ಸದಸ್ಯರಿಗೆ 'ನಾವು ಅಂತಿಮ ಗುರಿ ತಲುಪಿದ್ದೇವೆ' ಎಂಬ ಸಂದೇಶ ಬಂದಿರುವುದು ಈ ಕುರಿತಾದ ಅನುಮಾನಕ್ಕೆ ಮತ್ತಷ್ಟು ನೀರೆರೆದಿದೆ.

ಆತಂಕ ಏಕೆ?

ಭಾರತವನ್ನು ಗುರಿಯಾಗಿಸಿಕೊಂಡು ಏಷ್ಯಾದಲ್ಲಿ ಐಸಿಸ್ ಪ್ರಾಬಲ್ಯ ಹೆಚ್ಚಿಸುತ್ತಿದೆ. ಕಳೆದವಾರ ಢಾಕಾದ ಹೋಟೆಲ್‌ನಲ್ಲಿ ನಡೆದ ದಾಳಿಯಲ್ಲಿ ಆಡಳಿತಾರೂಡ ಪಕ್ಷದ ನಾಯಕರೊಬ್ಬರ ಪುತ್ರನೂ ಪಾಲ್ಗೊಂಡಿದ್ದ. ಪ್ರವಾಸಕ್ಕೆ ಹೋಗುವುದಾಗಿ ಪೋಷಕರನ್ನು ನಂಬಿಸಿದ್ದ ಯುವಕ, ಐಸಿಸ್ ಸೇರಿದ್ದ ವಿಷಯ ಗೊತ್ತಾಗಿದ್ದು ದಾಳಿಯಲ್ಲಿ ಆತನೂ ಬಲಿಯಾದ ಬಳಿಕವೇ. ಅಲ್ಲದೆ, ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಪತ್ರಕರ್ತರೊಬ್ಬರು ಕಳೆದ ವರ್ಷ ಐಸಿಸ್ ಸೇರ್ಪಡೆಯಾಗಿದ್ದರು. ಕೇರಳದ ನಾಲ್ವರು ಯುವಕರನ್ನು ಐಸಿಸ್ ನಂಟಿನ ಆರೋಪದ ಮೇಲೆ ಯುಎಇಯಿಂದ ಗಡೀಪಾರು ಮಾಡಲಾಗಿತ್ತು.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>