Quantcast
Channel: VijayKarnataka
Viewing all articles
Browse latest Browse all 6795

ಕೇಜ್ರಿ ಪೋಸ್ಟರ್ ತೆರವು: ಬಿಜೆಪಿ ವಿರುದ್ಧ ಎಎಪಿ ಕಿಡಿ

$
0
0

ಅಹಮದಾಬಾದ್: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕುಟುಂಬವು ಶನಿವಾರ ಗುಜರಾತ್‌ಗೆ ಆಗಮಿಸುತ್ತಿ ರುವ ಹಿನ್ನೆಲೆಯಲ್ಲಿ ಸ್ವಾಗತ ಕೋರಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿರುವುದಕ್ಕೆ ಬಿಜೆಪಿ ವಿರುದ್ಧ ಎಎಪಿ ಕಿಡಿ ಕಾರಿದೆ.

ಬಿಜೆಪಿಯು ಸೂರತ್‌ನಲ್ಲಿ ಕೇಜ್ರಿವಾಲ್ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಿದೆ, ಈಗ ರಾಜ್‌ಕೋಟ್‌ನಲ್ಲೂ ಅಡ್ಡಿ ಮಾಡಲು ಮುಂದಾಗಿದೆ ಎಂದು ಎಂದು ಎಎಪಿ ಹೇಳಿದೆ.

ಕೇಜ್ರಿವಾಲ್ ಮತ್ತು ಕುಟುಂಬಕ್ಕೆ ಸ್ವಾಗತ ಕೋರಿ ರಾಜ್‌ಕೋಟ್‌-ಸೋಮನಾಥ್ ಹೆದ್ದಾರಿಯಲ್ಲಿ ಬ್ಯಾನರ್ ಹಾಕ ಲಾಗಿತ್ತು. ಸ್ಥಳೀಯಾಡಳಿತ ಬಿಜೆಪಿ ಕೈಲಿದ್ದು, ಸ್ವಚ್ಛತೆ ಅಭಿಯಾನದ ಹೆಸರಿನಲ್ಲಿ ಕೇಜ್ರಿವಾಲ್ ಅವರ ಎಲ್ಲ ಬ್ಯಾನರ್‌ ಗಳನ್ನು ತೆರವುಗೊಳಿಸಲಾಗಿದೆ.

ಕೇಜ್ರಿವಾಲ್ ಅವರನ್ನು ಬೆಂಬಲಿಗರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದು, ಮಧ್ಯಾಹ್ನ ಒಂದಕ್ಕೆ ಸೋಮನಾಥ ದೇಗುಲಕ್ಕೆ ಕೇಜ್ರಿವಾಲ್ ಭೇಟಿ ನೀಡುವರು. ಕುಮಾರ್ ವಿಶ್ವಾಸ್ ಅವರು ಕೇಜ್ರಿವಾಲ್‌ ಅವರಿಗೆ ಜತೆಯಾಗಲಿದ್ದು, ಸಿಸೋಡಿಯಾ ಅವರು ಕೊನೆ ಕ್ಷಣದಲ್ಲಿ ಬರುವ ನಿರೀಕ್ಷೆಯಿದೆ.

ಸೋಮನಾಥ ದೇಗುಲಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ಸ್ಥಳೀಯ ರೈತರು, ವ್ಯಾಪಾರಿಗಳು ಮತ್ತು ನಾನಾ ಕ್ಷೇತ್ರದಲ್ಲಿ ದುಡಿಯುತ್ತಿರುವವರನ್ನು ಭೇಟಿ ಮಾಡಲಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>