Quantcast
Channel: VijayKarnataka
Viewing all articles
Browse latest Browse all 6795

ಮಕ್ಕಳಲ್ಲಿ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿ: ಜಾವಡೇಕರ್‌

$
0
0

ಸ್ಮೃತಿ ಗೈರಿನಲ್ಲಿ ಎಚ್‌ಆರ್‌ಡಿ ಖಾತೆ ವಹಿಸಿಕೊಂಡ ಸಚಿವರು

ಹೊಸದಿಲ್ಲಿ: ಭಾರತದ ಶಿಕ್ಷಣದಲ್ಲಿ ಹೊಸತನವೇ ಇಲ್ಲ, ಹಾಗಾಗಿ ನಮ್ಮ ಶಾಲೆಗಳಲ್ಲಿ ಮಕ್ಕಳು ಪ್ರಶ್ನೆಗಳನ್ನು ಕೇಳಲು ಹಿಂಜರಿಯುತ್ತಾರೆ. ಇಂತಹ ಮನಸ್ಥಿತಿ ನಿರ್ಮಾಣ ಆಗಬಾರದು ಎಂದು ಗುರುವಾರ ಅಧಿಕಾರ ವಹಿಸಿಕೊಂಡ ನೂತನ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವೇಡಕರ್‌ ಹೇಳಿದ್ದಾರೆ.

''ಹೊಸತನ ಎನ್ನುವುದು ಅವಶ್ಯವಾಗಿ ಬಂಡಾಯದ ಒಂದು ಪ್ರಕ್ರಿಯೆ. ರೆಬೆಲ್‌ ಆಗದೇ ಹೋದರೆ ಯಥಾಸ್ಥಿತಿಯನ್ನು ಚಾಲೆಂಜ್‌ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಹೊಸತನವನ್ನು ಕಂಡುಹಿಡಿಯುವುದಾದರೂ ಹೇಗೆ,'' ಎಂದು ಜಾವಡೇಕರ್‌ ಪ್ರಶ್ನಿಸಿದ್ದಾರೆ.

ಮಕ್ಕಳಲ್ಲಿ ಯಾವತ್ತೂ ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಬೆಳೆಸಬೇಕು. ಕೌತುಕ ಪ್ರವೃತ್ತಿಗೆ ಉತ್ತೇಜನ ನೀಡಬೇಕು. ಯಥಾಸ್ಥಿತಿಯನ್ನು ಪ್ರಶ್ನಿಸುವ ಮನಸ್ಥಿತಿಯಿದ್ದರೆ ಅದಕ್ಕೆ ವಿರೋಧ ಮಾಡಬಾರದು. ಅಂತಹ ಪರಿವರ್ತನೆಯನ್ನು ಶಿಕ್ಷಣದಲ್ಲಿ ತರಬೇಕು ಎಂಬುದೇ ಮೋದಿ ಸರಕಾರದ ಉದ್ದೇಶ ಎಂದು ಅವರು ವಿವರಿಸಿದರು.

'ಶಾಲೆಗಳಲ್ಲಿ ಮಗು ಪ್ರಶ್ನೆ ಕೇಳಿದರೆ, ಅದರ ಬಾಯಿ ಮುಚ್ಚಿಸಿ ಕುಳಿತುಕೊಳ್ಳುವಂತೆ ಹೇಳುತ್ತಾರೆ. ಹಾಗಾಗಿ ಭಾರತದಲ್ಲಿ ಹೊಸತನದ ಕೊರತೆ ಎದ್ದು ಕಾಣುತ್ತದೆ. ಇಂತಹ ಪ್ರವೃತ್ತಿ ಮುಂದುವರಿಯಬಾರದು. ಪ್ರಶ್ನೆ ಕೇಳುವ ಮಗುವಿಗೆ ಪ್ರೋತ್ಸಾಹ ನೀಡುವ ಮನಸ್ಥಿತಿ ಬೆಳೆಯಬೇಕು,'' ಎಂದು ನೂತನ ಸಚಿವರು ಹೇಳಿದರು. ಆನಂದ್‌ ಬಜಾರ್‌ ಪತ್ರಿಕಾ ಸಮೂಹ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನೊಂದು ಆಂಗ್ಲ ಪತ್ರಿಕೆಗೆ ಸಂದರ್ಶನ ನೀಡಿರುವ ಸಚಿವರು, ತಾವೂ ಕೂಡ ವಿದ್ಯಾರ್ಥಿ ಚಳವಳಿಯಿಂದ ಸಾಕಷ್ಟು ಕಲಿತಿದ್ದಾಗಿ ಹೇಳಿದರು. ''ನಾನು ಜಯಪ್ರಕಾಶ್‌ ನಾರಾಯಣ ಆಂದೋಲನದಲ್ಲಿ ಶಾಮೀಲಾಗಿದ್ದೆ. ವಿದ್ಯಾರ್ಥಿಗಳ ಹಕ್ಕಿಗಾಗಿ ಮತ್ತು ಇತರ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ನಡೆಸಿ ಸೆರೆವಾಸ ಕೂಡ ಅನುಭವಿಸಿದ್ದೆವು. ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಲು ಹೆಚ್ಚಿನ ಒತ್ತು ನೀಡುತ್ತೇನೆ. ಯಾಕೆಂದರೆ ಪ್ರಗತಿಯ ಹಾದಿಯಲ್ಲಿ ಎಲ್ಲರೂ ಸಹಭಾಗಿಗಳಾಗಿರಬೇಕು,'' ಎಂದು ಜಾವಡೇಕರ್‌ ಹೇಳಿದರು.

ಇರಾನಿ ಗೈರು: ಪ್ರಕಾಶ್‌ ಜಾವಡೇಕರ್‌ ನೂತನ ಮಾನವ ಸಂಪನ್ಮೂಲ ಸಚಿವರಾಗಿ ಅಧಿಕಾರ ಪ್ರಶಸ್ವೀಕರಿಸುವ ಸಂದರ್ಭದಲ್ಲಿ ಈ ಖಾತೆಯ ಹಿಂದಿನ ಸಚಿವೆ ಸ್ಮೃತಿ ಇರಾನಿ ಅವರು ಹಾಜರಿರಲಿಲ್ಲ. ಇರಾನಿ ಅನುಪಸ್ಥಿತಿಯಲ್ಲೇ ಅಧಿಕಾರ ಹಸ್ತಾಂತರಿಸಿಕೊಂಡ ಜಾವಡೇಕರ್‌, ಕೆಲಸ ಶುರು ಮಾಡಿದರು. ಕೌಟುಂಬಿಕ ಕಾರಣದ ಹಿನ್ನೆಲೆಯಲ್ಲಿ ಇರಾನಿ ಈ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು ಎಂದು ಅವರು ಸ್ಪಷ್ಟನೆ ನೀಡಿದರು.

'' ಶಿಕ್ಷಣದ ಗುರಿ ಸಮಾಜದಲ್ಲಿ ಉತ್ತಮ ಜೀವನಕ್ಕೆ ಬುನಾದಿ ಹಾಕುವುದಾಗಿದೆ. ಈ ಕ್ಷೇತ್ರದಲ್ಲಿ ಬರುವ ಸವಾಲುಗಳನ್ನು ಎದುರಿಸಿ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ತಲುಪುವಂತೆ ಮಾಡಲಾಗುವುದು'' ಎಂದು ಸಚಿವರು ಭರವಸೆ ನೀಡಿದರು. ಉಪೇಂದ್ರ ಕುಶ್ವಾ ಮತ್ತು ಮಹೇಂದ್ರ ಪಾಂಡೆ ಎಚ್‌ಆರ್‌ಡಿ ಖಾತೆ ಸಹಾಯಕ ಸಚಿವರಾಗಿದ್ದು, ಇಬ್ಬರು ಒಗ್ಗೂಡಿ ಕಾರ್ಯನಿರ್ವಹಿಸಲಿದ್ದೇವೆ ಎಂದು ಜಾವಡೇಕರ್‌ ಹೇಳಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>