Quantcast
Channel: VijayKarnataka
Viewing all articles
Browse latest Browse all 6795

ಐಸಿಸ್‌ಗೆ ಮರುಳಾಗದಿರಿ: ಇಸ್ಲಾಂ ಧರ್ಮಗುರುಗಳ ಕರೆ

$
0
0

ಲಖನೌ/ಹೊಸದಿಲ್ಲಿ: ಧರ್ಮದ ಹೆಸರಿನಲ್ಲಿ ರಕ್ತಪಾತ ನಡೆಸುತ್ತಿರುವ ಐಸಿಸ್‌ ರಾಕ್ಷಸರ ಬಗ್ಗೆ ಸ್ವಧರ್ಮೀರಲ್ಲೇ ಹೇಸಿಗೆ ಹುಟ್ಟಿದೆ. ಈದ್‌ ಪ್ರಾರ್ಥನೆ ನಡೆಸಿದ ಬಳಿಕ ಐಸಿಸ್‌ ವರ್ತನೆ ಬಗ್ಗೆ ಕೆಂಡಕಾರಿರುವ ದೇಶದ ಬಹುತೇಕ ಮುಸ್ಲಿಂ ಧರ್ಮ ಗುರುಗಳು, ಭಯೋತ್ಪಾದನೆ ಇಸ್ಲಾಂ ಧರ್ಮ ವಿರೋಧಿಯಾಗಿದೆ. ಇದರ ಸಿದ್ಧಾಂತಗಳ ಸೆಳೆತಕ್ಕೆ ಯುವಕರು ಒಳಗಾಗಬಾರದು ಎಂದು ಕರೆ ನೀಡಿದ್ದಾರೆ.

ಐಸಿಸ್‌ನಿಂದ ಪ್ರೇರೇಪಿತಗೊಂಡು ಉಗ್ರರು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ವಾರದೊಳಗೆ ಎರಡು ಭೀಕರ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮುಸ್ಲಿಂ ಧರ್ಮ ಪ್ರಚಾರಕರ ಈ ಮಾತುಗಳು ಮಹತ್ವ ಪಡೆದಿವೆ.

ದೇಶದ ಬಹುತೇಕ ಈದ್ಗಾ ಮೈದಾನಗಳಲ್ಲಿ ಗುರುವಾರ ಲಕ್ಷಾಂತರ ಮುಸ್ಲಿಂ ಯುವಕರು ಈದ್‌ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಇದೇ ರೀತಿ ಲಖನೌದ ಆಯಿಷ್‌ಭಾಗ್‌ ಈದ್ಗಾ ಮೈದಾನದಲ್ಲೂ ಯುವಕರು ಜಮಾಯಿಸಿದ್ದರು. ಇವರನ್ನು ಉದ್ದೇಶಿಸಿ ಮಾತನಾಡಿದ ಧರ್ಮಗುರು ಮೌಲಾನಾ ಖಾಲಿದ್‌ ರಶೀದ್‌ ಫಾರಂಗಿ ಮಹ್ಲಿ ''ಬಾಂಬ್‌ ದಾಳಿ, ಅತ್ಯಾಚಾರ, ಶಿರಚ್ಛೇದನ...ಹೀಗೆ ಹೀನಕೃತ್ಯಗಳ ಮೂಲಕ ಮುಗ್ಧ ಜನರ ಮಾರಣಹೋಮ ನಡೆಸುವ ಐಸಿಸ್‌ ಮತಾಂಧತೆಗೆ ಯುವಕರು ಒಳಗಾಗಬಾರದು. ಇಸ್ಲಾಂ ಧರ್ಮವು ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ಶಾಂತಿ ಕದಡುವ ಐಸಿಸ್‌ ರಾಕ್ಷಸರ ಮಾತುಗಳಿಗೆ ಮರುಳಾಗಬೇಡಿ,'' ಎಂದು ಕರೆ ನೀಡಿದರು.

ಬುಕಾರಿ ಕಿವಿಮಾತು:

ಸಹೋದರತ್ವ ಮತ್ತು ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಜಗತ್ತಿನ ಏಕೈಕ ರಾಷ್ಟ್ರ ಭಾರತ ಎಂದು ದಿಲ್ಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಸಯೀದ್‌ ಅಹಮ್ಮದ್‌ ಬುಖಾರಿ ಹೇಳಿದ್ದು, ಐಸಿಸ್‌ ಕುಕೃತ್ಯಗಳನ್ನು ಟೀಕಿಸಿದರು. ''ಎಲ್ಲ ಧರ್ಮೀಯರು ತಮ್ಮ ತಮ್ಮ ಹಬ್ಬಗಳನ್ನು ಒಟ್ಟಾಗಿ ಆಚರಿಸುವ ಶಾಂತಿ ಮತ್ತು ಸಹೋದರತ್ವ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯವೇ ಹೊರತು, ಮುಸ್ಲಿಂ ರಾಷ್ಟ್ರಗಳಲ್ಲಿ ಅಲ್ಲ. ಹೀಗಾಗಿ ಇಸ್ಲಾಂ ಅನುಯಾಯಿಗಳು ಭಯೋತ್ಪಾದನೆಯತ್ತ ಆಕರ್ಷಿತರಾಗಬಾರದು,'' ಎಂದು ಕಿವಿಮಾತು ಹೇಳಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>