ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮಾಧ್ಯಮ ಪ್ರತಿನಿಧಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ''ಈಗಾಗಲೇ ರಾಜೀನಾಮೆ ಸಲ್ಲಿಸಿರುವೆ, ವೈಯಕ್ತಿಕ ಜವಾಬ್ದಾರಿ ಅಲ್ಲದೆ ಆರು ವರ್ಷಗಳಿಂದ ಸಮಿತಿಯಲ್ಲಿದ್ದೇನೆ,'' ಎಂದು ಶಾಸ್ತ್ರಿ ಹೇಳಿದ್ದಾರೆ. ವೀಕ್ಷಕ ವಿವರಣೆ, ಅಂಕಣ ಬರಹ ಮೊದಲಾದ ಜವಾಬ್ದಾರಿಯಲ್ಲಿರುವ ಕಾರಣ ಅವರು ರಾಜೀನಾಮೆ ನೀಡಿರಬಹುದು ಎಂಬ ಸುದ್ದಿ ಹಬ್ಬಿದ್ದರೂ, ಸೌರವ್ ಗಂಗೂಲಿ ಅವರೊಂದಿಗಿನ ಜಟಾಪಟಿಯೇ ಈ ತೀರ್ಮಾನಕ್ಕೆ ಕಾರಣ ಎಂದೆನ್ನಲಾಗುತ್ತಿದೆ. ''ಒಂದು ಹಂತದಲ್ಲಿ ಸೌರವ್ ಗಂಗೂಲಿಯಂತೆ ರವಿ ಶಾಸ್ತ್ರಿ ಕೂಡ ಅತ್ಯಂತ ಭಾವುಕ ವ್ಯಕ್ತಿ, ಬಿಸಿಸಿಐ ನಾಮನಿರ್ದೇಶನದಂತೆ ಮಾಧ್ಯಮ ಪ್ರತಿನಿಧಿಯಾಗಿದ್ದ ಕಾರಣಕ್ಕೇ ಅವರು ರಾಜೀನಾಮೆ ನೀಡಿರಬಹುದು, ಅಲ್ಲದೆ ಕುಂಬ್ಳೆ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿ ಮುಂದುವರಿಯುವೆ ಎಂದು ಹೇಳಿರುವುದರಿಂದ ತಮಗೆ ಸಮಿತಿಯಲ್ಲಿರಲು ಸರಿಯಾಗದು ಎಂಬ ಉದ್ದೇಶದಿಂದ ಅವರು ರಾಜೀನಾಮೆ ನೀಡಿರಬಹುದು,'' ಎಂದು ಬಿಸಿಸಿಐ ಮೂಲಗಳು ಹೇಳಿವೆ.
↧
ಐಸಿಸಿ ಹುದ್ದೆಗೆ ರವಿಶಾಸ್ತ್ರಿ ರಾಜೀನಾಮೆ
↧