ಬೆಂಗಳೂರು: ದೀರ್ಘಾವಧಿ ಮಾದರಿಗೆ ನಿವೃತ್ತಿ ಹೇಳಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನ ತುಂಬುವುದು ಅತ್ಯಂತ ಕಠಿಣ ಎಂದು ಭಾರತ ತಂಡದ ವಿಶೇಷ ಟೆಸ್ಟ್ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವಾರ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಸರಣಿಗೆ ಇಲ್ಲಿನ ಎನ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಭಾರತ ತಂಡದ ಅಭ್ಯಾಸ ಶಿಬಿರದ ಮೂರನೇ ದಿನವಾದ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೃದ್ಧಿಮಾನ್ ಸಹಾ, ಧೋನಿ ಅವರ ನಿವೃತ್ತಿ ನಂತರ ಅವರ ಸ್ಥಾನ ತುಂಬಲು ಕಠಿಣವಾಗುತ್ತಿದ್ದು, ಇದು ಸುಲಭವಾಗಿಲ್ಲ. ಏಕೆಂದರೆ ಅವರೊಬ್ಬ ನಮಗೆ ಸಾಕಷ್ಟು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಅವರ ಪಾತ್ರ ಅತಿದೊಡ್ಡದು,'' ಎಂದು ಎಂದರು. ತಂಡದ ಶ್ರೇಯಕ್ಕೆ ಧೋನಿ ತೋರುತ್ತಿದ್ದ ಅತ್ಯುತ್ತಮ ಕೊಡುಗೆಯನ್ನು ನೀಡಲು ತಾವು ಸಹ ಯತ್ನಿಸುತ್ತಿರುವುದಾಗಿ ತಮ್ಮದೇ ಸ್ಟೈಲ್ನಲ್ಲಿ ಉತ್ತರಿಸಿದ ಸಹಾ,''ತಂಡಕ್ಕಾಗಿ ಧೋನಿ ಅವರು ಮಾಡುತ್ತಿದ್ದ ಕೆಲಸವನ್ನು ನಾನು ಮಾಡಲು ಯತ್ನಿಸುತ್ತಿದ್ದೇನೆ. ನಿರ್ಣಾಯಕ ಸಮಯದಲ್ಲಿ ಪರಿಣಾಮಕಾರಿ ಸ್ಟಂಪಿಂಗ್, ಕ್ಯಾಚಿಂಗ್ ಜತೆಗೆ ಬ್ಯಾಟಿಂಗ್ನಲ್ಲೂ ಮಿಂಚಿ ತಂಡದ ಗೆಲುವಿಗೆ ಅವರು ಕೊಡುಗೆ ನೀಡುತ್ತಿದ್ದರು,''ಎಂದು ಧೋನಿ ಅವರನ್ನು ನೆನೆದರು. ಇದೇ ವೇಳೆ ಅವಕಾಶ ದೊರೆತರೆ ಧೋನಿ ಅವರೊಂದಿಗೆ ಮಾತನಾಡಿ ಸಲಹೆ ಪಡೆಯಲು ಬಯಸುವುದಾಗಿ ತಿಳಿಸಿದ 31 ವರ್ಷದ ಸಹಾ, ಸಾಧ್ಯವಿದ್ದ ಸಮಯದ ವೇಳೆ ಪ್ರತಿಯೊಂದರ ಬಗ್ಗೆಯೂ ಅವರೊಂದಿಗೆ ಮಾತನಾಡಿದ್ದೇನೆ.ಐಪಿಎಲ್ ಮತ್ತು ಭಾರತದ ಆಸ್ಪ್ರೇಲಿಯಾ ಪ್ರವಾಸದ ಬಗ್ಗೆಯೂ ಚರ್ಚಿಸಿದ್ದೇನೆ. ಬೌನ್ಸಿ ಟ್ರ್ಯಾಕ್ನಲ್ಲಿ ಮತ್ತು ಬ್ಯಾಟಿಂಗ್ ವೇಳೆ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಹಲವು ಸಲಹೆ ನೀಡಿದ್ದಾರೆ.ಧೋನಿ ಅವರಲ್ಲದೆ ಇತರ ಆಟಗಾರರಿಂದಲೂ ಮಾತನಾಡಿರುವುದಾಗಿ ಸಹಾ ಹೇಳಿದರು. ವೆಸ್ಟ್ ಇಂಡೀಸ್ ಸರಣಿಯಲ್ಲಿ ತಮ್ಮ ಪ್ರದರ್ಶನ ಕುರಿತು ವಿವರಿಸಿದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ, ''ಕಳೆದ ಒಂದು ವರ್ಷದಿಂದ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆಸ್ಪ್ರೇಲಿಯಾ ಮತ್ತು ಶ್ರೀಲಂಕಾದಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ನನ್ನ ವೈಯಕ್ತಿಕ ಪ್ರದರ್ಶನ ಅತ್ಯುತ್ತಮವಾಗಿರಲಿಲ್ಲ.ಆದರೆ ಈ ಬಾರಿಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಿಕ್ಕ ಅವಕಾಶಗಳನ್ನು ಬಾಚಿಕೊಳ್ಳುವೆ,''ಎಂದು ತಿಳಿಸಿದರು. ಶುಕ್ರವಾರ ಬ್ಯಾಟಿಂಗ್, ಬೌಲಿಂಗ್ ಮತ್ತು ಕ್ಷೇತ್ರರಕ್ಷ ಣೆಯ ಮೂರು ಕ್ಷೇತ್ರಗಳಲ್ಲಿಯೂ ಅಭ್ಯಾಸ ನಡೆಸಿದ ಆಟಗಾರರು ಡ್ರಿಲ್ಲಿಂಗ್ಗೂ ಆದ್ಯತೆ ನೀಡಿದರು.
↧
ಧೋನಿ ಸ್ಥಾನ ತುಂಬುವುದು ಕಠಿಣ: ಸಹಾ
↧