Quantcast
Channel: VijayKarnataka
Viewing all articles
Browse latest Browse all 6795

ಬೌಲರ್‌ಗಳಲ್ಲಿ ನಾಯಕನ ಗುಣ ಅಗತ್ಯ: ಕುಂಬ್ಳೆ

$
0
0

ಭಾರತ ತಂಡದ ಕೋಚ್‌ ಹುದ್ದೆ ವಹಿಸಿಕೊಂಡ ನಂತರ ಅನಿಲ್‌ ಕುಂಬ್ಳೆ ಮೊದಲ ಸುದ್ದಿಗೋಷ್ಠಿ

ಬೆಂಗಳೂರು: ಬೌಲರ್‌ಗಳಲ್ಲಿಯೂ ನಾಯಕನಂಥ ಗುಣಗಳು ಬರಬೇಕು ಎಂಬುದನ್ನು ಬಯಸುತ್ತೇನೆ ಎಂದು ಭಾರತ ಕ್ರಿಕೆಟ್‌ ತಂಡದ ನೂತನ ಪ್ರಧಾನ ಕೋಚ್‌ ಅನಿಲ್‌ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ತಿಂಗಳಿಂದ ವೆಸ್ಟ್‌ ಇಂಡೀಸ್‌ನಲ್ಲಿ ನಾಲ್ಕು ಟೆಸ್ಟ್‌ ಮತ್ತು ನ್ಯೂಜಿಲೆಂಡ್‌ನಲ್ಲಿ ಮೂರು ಟೆಸ್ಟ್‌ ಪಂದ್ಯಗಳು ನಡೆಯಲಿರುವ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಬುಧವಾರದಿಂದ ಅಭ್ಯಾಸ ಆರಂಭಿಸಿದೆ.

ಹೀಗಾಗಿ ಮೊದಲ ಬಾರಿಗೆ ವಿರಾಟ್‌ ಕೊಹ್ಲಿ ನೇತೃತ್ವದ ತಂಡಕ್ಕೆ ತರಬೇತಿ ನೀಡುವ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಸ್ಪಿನ್‌ ಮಾಂತ್ರಿಕ ಅನಿಲ್‌ ಕುಂಬ್ಳೆ, ''ಮುಂದಿನ ತಿಂಗಳಿಂದ ಸಾಕಷ್ಟು ಟೆಸ್ಟ್‌ ಪಂದ್ಯಗಳು ಇರುವ ಹಿನ್ನೆಲೆಯಲ್ಲಿ ಪ್ರಸ್ತುತ ತಂಡವನ್ನು ಹೇಗೆ ಸಂಘಟಿಸಬೇಕು ಎಂಬುದರ ಕುರಿತು ನಾವು ಚಿಂತಿಸುತ್ತಿದ್ದೇವೆ. ಅದರಲ್ಲೂ ಬೌಲಿಂಗ್‌ ವಿಭಾಗಕ್ಕೆ ಹೆಚ್ಚು ಆದ್ಯತೆ ನೀಡಲಿದ್ದು, ಬೌಲರ್‌ಗಳಿಗೆ ಬೇಕಾದ ಎಲ್ಲ ರೀತಿಯ ನೆರವು ನೀಡಲು ಎದುರು ನೋಡುತ್ತಿರುವೆ,'' ಎಂದಿದ್ದಾರೆ.

'' ನಾಯಕ ತಂಡಕ್ಕಾಗಿ ಹೇಗೆ ಕಾರ್ಯತಂತ್ರ ರೂಪಿಸುತ್ತಾನೋ ಹಾಗೆಯೇ ಬೌಲರ್‌ಗಳು ನಾಯಕನಂತಹ ಗುಣಗಳನ್ನು ಬೆಳೆಸಿಕೊಳ್ಳುವುದನ್ನು ಬಯಸುವೆ. ಈ ನಿಟ್ಟಿನಲ್ಲಿ ಅವರಿಗೆ ಬೇಕಾದ ಎಲ್ಲ ಅಗತ್ಯ ನೆರವು ನೀಡಲು ಸಿದ್ಧನಾಗಿದ್ದೇನೆ,''ಎಂದು ತಿಳಿಸಿದರು.

ವೆಸ್ಟ್‌ ಇಂಡೀಸ್‌ ಸರಣಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಂಬ್ಳೆ, ''ಈಗಾಗಲೇ ಭಾರತ ಅಲ್ಲಿನ ಸ್ಥಿತಿಗೆ ಹೊಂದಿಕೊಂಡಿದೆ. ಹಿಂದಿನ ಸರಣಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ತೋರಿತ್ತು. ನಾಯಕ ವಿರಾಟ್‌ ಕೊಹ್ಲಿ, ಮುರಳಿ ವಿಜಯ್‌, ವೇಗಿ ಇಶಾಂತ್‌ ಶರ್ಮಾ ಸೇರಿದಂತೆ ಹಲವರು ಉತ್ತಮ ಪ್ರದರ್ಶನ ನೀಡಿದ್ದರು. ಈ ಬಾರಿಯೂ ಇಶಾಂತ್‌ ವೇಗದ ಬೌಲರ್‌ಗಳನ್ನು ಮುನ್ನಡೆಸಲಿದ್ದಾರೆ,''ಎಂದರು.

ಎಲ್ಲರೊಂದಿಗೂ ಉತ್ತಮ ಸಂಪರ್ಕ

ವಿಶ್ವದಲ್ಲೇ ಅತಿಹೆಚ್ಚು ವಿಕೆಟ್‌ ಪಡೆದ ಮೂರನೇ ಬೌಲರ್‌ ಎನಿಸಿರುವ ಭಾರತ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ, ಅಂಗಳದಲ್ಲಿನ ಸವಾಲುಗಳನ್ನು ಎದುರಿಸಲು ಸದಾ ಸಿದ್ಧ. ತಂಡವನ್ನು ಸಮರ್ಥವಾಗಿ ಸಜ್ಜುಗೊಳಿಸಲು ನಾವೆಲ್ಲರು ಯತ್ನಿಸಲಿದ್ದೇವೆ. ತಂಡದ ಶ್ರೇಯಸ್ಸಿಗೆ ಎಲ್ಲರೊಂದಿಗೂ ಬೆರೆತು ಶ್ರಮಿಸುವೆ. ಈ ಹಿಂದೆ ನಾನು ಆಟಗಾರನಾಗಿದ್ದೆ. ಈಗ ಕೋಚ್‌ ಆಗಿದ್ದೇನೆ. ಆದ್ದರಿಂದ ಎರಡು ಪಾತ್ರಗಳನ್ನು ಅರ್ಥಮಾಡಿಕೊಂಡು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ಹೊಂದಿದ್ದೇನೆ. ತಂಡದ ಶ್ರೇಯಸ್ಸಿಗೆ ಒಬ್ಬ ಆಟಗಾರನಾಗಿ, ನಾಯಕನಾಗಿ ಅಗತ್ಯವಿರುವ ಕಾರ್ಯತಂತ್ರಗಳು ಮತ್ತು ನೆರವು ನೀಡಲು ಸದಾ ಸಿದ್ಧವಿರುವುದಾಗಿ'' ಕುಂಬ್ಳೆ ಹೇಳಿದರು. ಇದೇ ವೇಳೆ ಕೇವಲ ಆಡುವ 11 ಆಟಗಾರರಲ್ಲದೆ ಎಲ್ಲಾ ಆಟಗಾರರೊಂದಿಗೆ ಉತ್ತಮ ಸಂಪರ್ಕ ಹೊಂದುವುದು ಮಹತ್ವವಾಗುತ್ತದೆ ಎಂದು ನೂತನ ಕೋಚ್‌ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ತಂಡದ ಏಳಿಗೆಗಾಗಿ ಶ್ರಮಿಸಬೇಕು

ಕೋಚ್‌ ಹುದ್ದೆಗೆ ಪ್ರಮುಖ ಆಕಾಂಕ್ಷಿಯಾಗಿದ್ದ ಟೀಮ್‌ ಇಂಡಿಯಾದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರನ್ನು ಹಿಂದಿಕ್ಕಿದ ಕುರಿತು ಪ್ರತಿಕ್ರಿಯಿಸಿದ ಕುಂಬ್ಳೆ, '' ಕುಂಬ್ಳೆ ಅಥವಾ ಶಾಸ್ತ್ರಿ ಇಬ್ಬರಲ್ಲಿ ಯಾರೇ ಬಂದರೂ ಆಟಗಾರಿಗಾಗಿ ಶ್ರಮಿಸಬೇಕು. ಕೋಚ್‌ ಸ್ಥಾನಕ್ಕೆ ಆಯ್ಕೆಯಾದ ತಕ್ಷ ಣ ನಾನು ರವಿಶಾಸ್ತ್ರಿಗೆ ಕರೆ ಮಾಡಿ ಮಾತನಾಡಿದೆ. ಈ ವೇಳೆ ರವಿಶಾಸ್ತ್ರಿ , ಯುವ ಭಾರತ ತಂಡದೊಂದಿಗೆ ಅತ್ಯುತ್ತಮ ಹುದ್ದೆ ನಿರ್ವಹಿಸಲಿದ್ದೀರಿ ಎಂದು ಶುಭ ಹಾರೈಸಿದರು. ರವಿಯಾಗಲಿ ಅಥವಾ ನಾನಾಗಲಿ ಅಥವಾ ಯಾವುದೇ ಅಧಿಕಾರಿಯಾಗಲಿ ಎಲ್ಲರೂ ಆಟಗಾರರಿಗಾಗಿ, ತಂಡಕ್ಕಾಗಿ ಮತ್ತು ತಂಡದ ಪ್ರದರ್ಶನಕ್ಕಾಗಿ ಶ್ರಮಿಸಬೇಕೇ ಹೊರತು ವೈಯಕ್ತಿಕವಾಗಿ ಚಿಂತಿಸಬಾರದು ಎಂದರು.

ಅಭ್ಯಾಸ ಆರಂಭ

ನಾಲ್ಕು ಟೆಸ್ಟ್‌ ಪಂದ್ಯಗಳಿಗಾಗಿ ಭಾರತ ಜು.6ರಂದು ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಜು.4ರವರೆಗೆ ಅಭ್ಯಾಸ ನಡೆಸಲಿದೆ. ಜು.3ರಂದು ಆಲೂರಿನಲ್ಲಿ ಪ್ರದರ್ಶನ ಪಂದ್ಯ ನಡೆಯುವ ಸಾಧ್ಯತೆಯಿದ್ದು ಇದು ಇಲ್ಲಿನ ಹವಾಮಾನವನ್ನು ಅವಲಂಬಿಸಿದೆ ಎಂದು ಕುಂಬ್ಳೆ ಹೇಳಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>