ಹೊಸದಿಲ್ಲಿ: ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ಯಾಗಿ ಆಯ್ಕೆ ಮಾಡಿರುವ ಬಿಸಿಸಿಐ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಶ್ಲಾಘಿಸಿದ್ದಾರೆ. ಪ್ರಧಾನ ಕೋಚ್ ಹುದ್ದೆ ತಪ್ಪಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಬಿಸಿಸಿಐ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ವಿರುದ್ಧ ಮಾಡಿರುವ ಆರೋಪಗಳಿಗೆ ಗಂಗೂಲಿ ಮಾಡಿರುವ ಪ್ರತ್ಯೋರಪದ ನಂತರ ಈ ಹೇಳಿಕೆ ನೀಡಿದ್ದಾರೆ. ಗಂಗೂಲಿ ತಮಗೆ 'ಆಗೌರವ' ತೋರಿದ್ದಾರೆ ಎಂದು ಮಂಗಳವಾರ ದೂಷಿಸಿದ ಬೆನ್ನಲ್ಲೇ ಬುಧವಾರ ಗಂಗೂಲಿ 'ಮುರ್ಖರ ಜಗತ್ತಿ'ನಲ್ಲಿ ರವಿಶಾಸ್ತ್ರಿ ಬದುಕುತ್ತಿದ್ದಾರೆ ಎಂದು ಜರಿದಿದ್ದಾರೆ. ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ ್ಮಣ್ ಅವರನ್ನೊಳಗೊಂಡ ಸಲಹಾ ಸಮಿತಿ ಭಾರತದ ಕೋಚ್ ಸ್ಥಾನಕ್ಕೆ ಉತ್ತಮ ಆಯ್ಕೆಯನ್ನು ಮಾಡಿದೆ ಎಂದು ಮಂಜ್ರೇಕರ್ ಹೊಗಳಿದ್ದಾರೆ.
↧
ಕುಂಬ್ಳೆ ಉತ್ತಮ ಆಯ್ಕೆ: ಸಂಜಯ್
↧