Quantcast
Channel: VijayKarnataka
Viewing all articles
Browse latest Browse all 6795

ಮೂರ್ಖರ ಜಗತ್ತಿನಲ್ಲಿ ರವಿಶಾಸ್ತ್ರಿ

$
0
0

ಭಾರತ ತಂಡದ ಮಾಜಿ ನಿರ್ದೇಶರಿಗೆ ತಕ್ಕ ಉತ್ತರ ನೀಡಿದ ಸೌರವ್‌ ಗಂಗೂಲಿ

ಕೋಲ್ಕೊತಾ: ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರವಿ ಶಾಸ್ತ್ರಿ 'ಮೂರ್ಖರ ಜಗತ್ತಿನಲ್ಲಿ ಬದುಕುತ್ತಿದ್ದಾರೆ' ಎಂದು ಸೌರವ್‌ ಗಂಗೂಲಿ ತಿರುಗೇಟು ನೀಡುವುದರೊಂದಿಗೆ ಭಾರತದ ಕ್ರಿಕೆಟ್‌ ತಂಡದ ಇಬ್ಬರು ಮಾಜಿ ನಾಯಕರ ನಡುವಿನ ವೈಮನಸ್ಸು ಚರ್ಚೆಯ ಕೇಂದ್ರವಾಗಿದೆ.

ಅನಿಲ್‌ ಕುಂಬ್ಳೆ ಅವರು ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆದ ನಂತರ ರವಿಶಾಸ್ತ್ರಿ ತಮ್ಮ ಸ್ಥಾನ ತಪ್ಪಿಹೋಗಿರುವುದಕ್ಕೆ ಅಸಮಾಧಾನಗೊಂಡಿದ್ದರು. ಇದಕ್ಕೆ ಕಾರಣ ಸೌರವ್‌ ಗಂಗೂಲಿ ಎಂದು ದೂರಿರುವ ಶಾಸ್ತ್ರಿ, ಭಾರತ ತಂಡದ ಮಾಜಿನಾಯಕ ಇತರರಿಗೆ ಗೌರವ ಕೊಡುವುದನ್ನು ತಿಳಿದುಕೊಂಡಿರಬೇಕು ಎಂದು ದೂರಿದ್ದರು.

ಕೋಚ್‌ ಹುದ್ದೆಯ ಸಂದರ್ಶನದ ವೇಳೆ ಶಾಸ್ತ್ರಿ ಅವರ ಸರದಿ ಬಂದಾಗ ಸೌರವ್‌ ಗಂಗೂಲಿ ಆ ಸಂದರ್ಭದಲ್ಲಿ ಪಾಲ್ಗೊಂಡಿರಲಿಲ್ಲ. ಇದು ಮುಂಬಯಿಯ ಮಾಜಿ ಆಟಗಾರನ ಮನಸ್ಸನ್ನು ನೋಯಿಸಿತ್ತು.

ಕೋಚ್‌ ಹುದ್ದೆಯು ಕೈ ತಪ್ಪಿಹೋಗಲೆಂಬ ಉದ್ದೇಶಕ್ಕಾಗಿಯೇ ಗಂಗೂಲಿ ಸಂದರ್ಶನದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಶಾಸ್ತ್ರಿ ಟೀಕಿಸಿದ್ದರು. ಇದರಿಂದ ಕುಪಿತರಾಗಿರುವ ಸೌರವ್‌ ಅತ್ಯಂತ ಗಂಭೀರವಾಗಿಯೇ ಉತ್ತರ ನೀಡಿದ್ದಾರೆ. ''ಅವರು ಮಾಡಿರುವ ಪ್ರತಿಕ್ರಿಯೆ ವೈಯಕ್ತಿಕವಾದದ್ದು, ಭಾರತ ತಂಡದ ಕೋಚ್‌ ಹುದ್ದೆ ತಪ್ಪಿ ಹೋಗಲು ಸೌರವ್‌ ಗಂಗೂಲಿಯೇ ಕಾರಣ ಎಂದು ರವಿಶಾಸ್ತ್ರಿ ನಂಬಿದ್ದರೆ, ಅವರು ಮೂರ್ಖರ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆಂದೇ ಅರ್ಥ,'' ಎಂದು ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

''ಸಂದರ್ಶನದಂಥ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಸಲಹೆ ನೀಡಿರುವುದನ್ನು ಕೋಪವನ್ನು ಭರಿಸಿದೆ, ಬಹಳ ಸಮಯದಿಂದಲೂ ಬಿಸಿಸಿಐ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ, ಹೆಚ್ಚಿನ ಸಭೆಗಳಿಗೆ ಹಾಜರಾಗಿದ್ದೇನೆ, ಭಾರತದ ತಂಡದ ಕೋಚ್‌ ಹುದ್ದೆಗೆ ಸಂದರ್ಶನ ನಡೆಯುತ್ತಿರುವಾಗ ರವಿ ಶಾಸ್ತ್ರಿ ಸ್ವತಃ ಹಾಜರಿರಬೇಕೆಂಬುದು ನನ್ನ ಸಲಹೆ, ಬ್ಯಾಂಕಾಕ್‌ನಲ್ಲಿದ್ದುಕೊಂಡು ಮಾತನಾಡುವುದಲ್ಲ, ಸಮಿತಿಯ ಮುಂದೆ ಬಂದು ಮಾತನಾಡಬೇಕಿತ್ತು,'' ಎಂದು ಸೌರವ್‌ ಕಿಡಿ ಕಾರಿದ್ದಾರೆ.

''ಭಾರತ ಕ್ರಿಕೆಟ್‌ ಕಂಡ ಶ್ರೇಷ್ಠ ಆಟಗಾರರು ಎರಡು ಗಂಟೆಗಳ ಕಾಲ ಸಂದರ್ಶನ ನಡೆಸುತ್ತಿರುವಾಗ ಶಾಸ್ತ್ರಿ ಅವರು ವೈಯಕ್ತಿಕವಾಗಿ ಹಾಜರಾಗಬೇಕಿತ್ತು, ವೈಯಕ್ತಿಕವಾಗಿ ಟೀಕೆ ಮಾಡಿರುವುದು ಮನಸ್ಸಿಗೆ ನೋವನ್ನುಂಟು ಮಾಡಿದೆ,'' ಎಂದು ಸೌರವ್‌ ಹೇಳಿದ್ದಾರೆ.

''ಒಂದೆರಡು ಪತ್ರಿಕೆಗಳಲ್ಲಿ ಈ ವಿಚಾರ ಪ್ರಕಟಗೊಂಡಿದ್ದರೆ ಹೆಚ್ಚು ಯೋಚಿಸದೆ ಸುಮ್ಮನಿರುತ್ತಿದ್ದೆ, ಆದರೆ ಅವರು ತಮ್ಮ ನಿಲುವುಗಳನ್ನು ಟಿವಿಗಳಲ್ಲಿ ಹೇಳಿಕೊಂಡರು, ಕಳೆದ 20 ವರ್ಷಗಳಿಂದ ಬಿಸಿಸಿಐನ ವಿವಿಧ ಸಮಿತಿಗಳಲ್ಲಿ ಕೆಲಸ ಮಾಡಿದ ವ್ಯಕ್ತಿಗೆ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂಬುದು ಗೊತ್ತಿರಬೇಕು. ಹತ್ತು ವರ್ಷಗಳ ಹಿಂದೆ ಭಾರತ ತಂಡದ ಕೋಚ್‌ ಆಯ್ಕೆ ಮಾಡುವಾಗ ಅವರು ನನ್ನ ಸ್ಥಾನದಲ್ಲಿದ್ದರು. ಅವರಿಗೆ ಎಲ್ಲವೂ ಗೊತ್ತಿದೆ. ಜೂನ್‌ 19ರಂದು ಬಿಸಿಸಿಐಗೆ ಇ-ಮೇಲ್‌ ಮೂಲಕ ಸಂಪರ್ಕಿಸಿದ್ದೆ, ಅದಕ್ಕೆ ಉತ್ತರವೂ ಸಿಕ್ಕಿದೆ, ಬಿಸಿಸಿಐನಿಂದ ಅಧಿಕೃತ ಮಾಹಿತಿ ಸಿಕ್ಕ ನಂತರ ಆ ಇ-ಮೇಲ್‌ಗಳನ್ನು ಎಲ್ಲರಿಗೂ ನೀಡುವೆ,'' ಎಂದು ಗಂಗೂಲಿ ತಿರುಗೇಟು ನೀಡಿದ್ದಾರೆ.



Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>