Quantcast
Channel: VijayKarnataka
Viewing all articles
Browse latest Browse all 6795

ಟಿ20 ಪಂದ್ಯ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 10 ವಿಕೆಟ್ ಜಯ

$
0
0

ಸ್ರನ್‌ ಮಿಂಚು, ಸರಣಿ ಸಮಬಲ / ಧೋನಿ ಬಳಗಕ್ಕೆ 10 ವಿಕೆಟ್‌ ಭರ್ಜರಿ ಜಯ | ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮ

ಹರಾರೆ: ಚೊಚ್ಚಲ ಪಂದ್ಯದಲ್ಲೇ ಸ್ಮರಣೀಯ ಪ್ರದರ್ಶನ ತೋರಿದ ಎಡಗೈ ವೇಗಿ ಬರಿಂದರ್‌ ಸ್ರನ್‌(10ಕ್ಕೆ 4) ಅವರ ಮಾರಕ ಬೌಲಿಂಗ್‌ನಿಂದ ಮಿಂಚಿದ ಭಾರತ ತಂಡ, ಇಲ್ಲಿ ನಡೆದ ದ್ವಿತೀಯ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲಗೊಳಿಸುವುದರೊಂದಿಗೆ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.

ಇಲ್ಲಿನ ಹಾರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 99 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಬಳಿಕ ಗುರಿ ಬೆನ್ನತ್ತಿದ ಭಾರತ ತಂಡ ಕೇವಲ 13.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 103 ರನ್‌ಗಳಿಸಿ ಜಯದ ಸಂಭ್ರಮ ಆಚರಿಸಿ, ಮೊದಲ ಪಂದ್ಯದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

ಪ್ರವಾಸಿ ಭಾರತ ಪರ ಆರಂಭಿಕ ಬ್ಯಾಟ್ಸಮನ್‌ಗಳಾಗಿ ಕಣಕ್ಕಿಳಿದ ಮನ್‌ದೀಪ್‌ ಸಿಂಗ್‌(52) ಮತ್ತು ಕೆ.ಎಲ್‌. ರಾಹುಲ್‌(47) ಮೊದಲ ವಿಕೆಟ್‌ಗೆ ಮುರಿಯದ ಜತೆಯಾಟ ನಡೆಸಿ, ಇನ್ನೂ 41 ಎಸೆತಗಳು ಬಾಕಿ ಇರುವಂತೆಯೇ ಜಯ ತಂದಿಟ್ಟರು. ಇದರೊಂದಿಗೆ ಭಾರತ ಟಿ20 ಮಾದರಿಯಲ್ಲಿ ಇದೇ ಮೊದಲ ಬಾರಿ 10 ವಿಕೆಟ್‌ಗಳ ಗೆಲುವು ಸಂಪಾದಿಸಿತು.

ಆರಂಭಿಕರ ಶತಕದ ಜತೆಯಾಟ

ಸಾಧಾರಣ ಗುರಿ ಬೆನ್ನತ್ತಿದ ಮಂದೀಪ್‌ ಸಿಂಗ್‌ ಮತ್ತು ಕೆ.ಎಲ್‌. ರಾಹುಲ್‌ ಯಾವುದೇ ಅಳುಕಿಲ್ಲದೆ ಬ್ಯಾಟಿಂಗ್‌ ನಡೆಸುವ ಮೂಲಕ ಆತಿಥೇಯರ ಪಾಲಿಗೆ ಸಿಂಹಸ್ವಪ್ನವಾದರು. ಜತೆಗೆ ಎಲ್ಲ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 40 ಎಸೆತಗಳನ್ನೆದುರಿಸಿದ ರಾಹುಲ್‌ 2 ಬೌಂಡರಿ, 2 ಸಿಕ್ಸರ್‌ ಸಹಿತ 47 ರನ್‌ಗಳಿಸಿದರೆ, ಅಷ್ಟೇ ಎಸೆತಗಳಲ್ಲಿ ಮಂದೀಪ್‌ ಸಿಂಗ್‌, 6 ಬೌಂಡರಿ ಹಾಗೂ ಏಕೈಕ ಸಿಕ್ಸರ್‌ ಒಳಗೊಂಡ 52 ರನ್‌ ಪೇರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 13.1 ಓವರ್‌ಗಳಲ್ಲಿ 103 ರನ್‌ಗಳನ್ನು ಕಲೆಹಾಕಿತು.

ಸ್ರನ್‌ ಮಾರಕ ದಾಳಿ

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಜಿಂಬಾಬ್ವೆ ತಂಡದ ಬ್ಯಾಟ್ಸಮನ್‌ಗಳನ್ನು ಪದಾರ್ಪಣೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವಾನ್ನಾಡಿದ ಸ್ರನ್‌ ಮತ್ತು ಧವಳ್‌ ಕುಲಕರ್ಣಿ ಹೆಡೆಮುರಿ ಕಟ್ಟಿದ್ದರು. ತಮ್ಮ ಪಾಲಿನ 4 ಓವರ್‌ಗಳಲ್ಲಿ ಕೇವಲ 10 ರನ್‌ ನೀಡಿದ ಸ್ರನ್‌, ಜಿಂಬಾಬ್ವೆಯ ಅಗ್ರ ಕ್ರಮಾಂಕದ 4 ಬ್ಯಾಟ್ಸಮನ್‌ಗಳ ವಿಕೆಟ್‌ ಪಡೆದು ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.

ಇದು ಭಾರತದ ದಾಖಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬಂದ ಎರಡನೇ ಅತ್ಯುತ್ತಮ ಪ್ರದರ್ಶನ ಎನಿಸಿತು. ಸ್ರನ್‌ಗೂ ಮುನ್ನ ಪ್ರಗ್ಯಾನ್‌ ಓಜಾ 2009ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ (21ಕ್ಕೆ 4) ಅತ್ಯುತ್ತಮ ಪ್ರದರ್ಶನ ತೋರಿದ್ದರು. ಸ್ರನ್‌ಗೆ ಪೈಪೋಟಿ ನೀಡಿದಂತೆ ಕರಾರುವಾಕ್‌ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ ಕೂಡ ತಮ್ಮ 4 ಓವರ್‌ಗಳಲ್ಲಿ ಕೇವಲ 11 ರನ್‌ ನೀಡಿ ಮಧ್ಯಮ ಕ್ರಮಾಂಕದ 3 ವಿಕೆಟ್‌ ಉರುಳಿಸಿ ಆತಿಥೇಯರ ಕುಸಿತಕ್ಕೆ ಕಾರಣರಾದರು.

ಮುಯ್ಯಿ ತೀರಿಸಿಕೊಂಡ ಭಾರತ

ಇದೇ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 2 ರನ್‌ಗಳಿಂದ ಸೋಲುಂಡಿದ್ದ ಮಹೇಂದ್ರ ಸಿಂಗ್‌ ಧೋನಿ ಬಳಗ, ಎರಡನೇ ಪಂದ್ಯವನ್ನು ಸುಲಭವಾಗಿ ಗೆದ್ದು ಆತಿಥೇಯರ ವಿರುದ್ಧ ಸೇಡು ತೀರಿಸಿಕೊಂಡಿತು. ಪೀಟರ್‌ ಮೂರ್‌(31) ಹೊರತುಪಡಿಸಿದರೆ ಜಿಂಬಾಬ್ವೆಯ ಯಾವೊಬ್ಬ ಬ್ಯಾಟ್ಸ್‌ಮನ್‌ಗಳು ಭಾರತದ ಶಿಸ್ತುಬದ್ಧ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ. ಇದೇ 22ರಂದು ಹರಾರೆ ಕ್ರೀಡಾಂಗಣದಲ್ಲೇ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದ್ದು, ಭಾರತ ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

02

ವೇಗಿಗಳಾದ ಬರಿಂದರ್‌ ಸ್ರನ್‌ ಮತ್ತು ಧವಳ್‌ ಕುಲ್‌ಕರ್ಣಿ ಜಿಂಬಾಬ್ವೆ ವಿರದ್ಧದ 2ನೇಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಭಾರತದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>