Quantcast
Channel: VijayKarnataka
Viewing all articles
Browse latest Browse all 6795

ಟೀಮ್‌ ಇಂಡಿಯಾ ಕೋಚ್‌: ಅಭ್ಯರ್ಥಿಗಳ ಸಂದರ್ಶನ ಇಂದು

$
0
0

ಕುಂಬ್ಳೆ, ಶಾಸ್ತ್ರಿ ಮತ್ತು ಪಾಟೀಲ್‌ ಮೇಲೆ ಎಲ್ಲರ ಚಿತ್ತ

ಕೋಲ್ಕೊತಾ: ಮಾಜಿ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ ಮತ್ತು ವಿವಿಎಸ್‌ ಲಕ್ಷ ್ಮಣ್‌ ಅವರನ್ನೊಳಗೊಂಡ ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ), ರಾಷ್ಟ್ರೀಯ ತಂಡದ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿರುವ 21 ಅಭ್ಯರ್ಥಿಗಳನ್ನು ಮಂಗಳವಾರ ಸಂದರ್ಶಿಸಲು ಎಲ್ಲಾ ಸಿದ್ಧತೆ ನಡೆಸಿದೆ.

ಹುದ್ದೆಯ ಆಕಾಂಕ್ಷಿಗಳ ಸಂದರ್ಶನದ ಅಂತಿಮ ಪಟ್ಟಿ ಅನಿಲ್‌ ಕುಂಬ್ಳೆ, ರವಿಶಾಸ್ತ್ರಿ ಮತ್ತು ಸಂದೀಪ್‌ ಪಾಟೀಲ್‌ ಹೆಸರಗಳನ್ನು ಒಳಗೊಂಡಿದೆ. ಲಂಡನ್‌ನಲ್ಲಿರುವ ಸಚಿವ್‌ ತೆಂಡೂಲ್ಕರ್‌ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಈ ಬೆಳವಣಿಗೆ ಕುರಿತು ಬಂಗಾಳ ಕ್ರಿಕೆಟ್‌ ಸಂಸ್ಥೆಯ ಉನ್ನತಾಧಿಕಾರಿಯೊಬ್ಬರು,''ಹುದ್ದೆಯ ಸ್ಪರ್ಧೆಯಲ್ಲಿರುವ ಪ್ರಮುಖರು ಸಂದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ,'' ಎಂದು ಖಚಿತಪಡಿಸಿದ್ದಾರೆ.

''ನಿಜವಾಗಿಯೂ ಎರಡು ಮೂರು ಪ್ರಮಖ ಹೆಸರುಗಳ ಪೈಕಿ ಒಬ್ಬರಂತು ಸಂದರ್ಶನಕ್ಕೆ ಹಾಜರಾಗಲಿದ್ದಾರೆ. ಸಭೆ 1.30ಕ್ಕೆ ಆರಂಭವಾಗಲಿದ್ದು, ಸಂಜಯ್‌ ಜಗದಾಳೆ ಇದರ ಮೇಲ್ವಿಚಾರಣೆ ವಹಿಸಿಲಿದ್ದಾರೆ,'' ಎಂದಿದ್ದಾರೆ.

ಶಾಸ್ತ್ರಿ, ಕುಂಬ್ಳೆ ಮತ್ತು ಪಾಟೀಲ್‌ ಅವರಲ್ಲದೆ ವಿಕ್ರಮ್‌ ರಾಥೂರ್‌, ಪ್ರವೀಣ್‌ ಆಮ್ರೆ, ಬಲ್ವಿಂದರ್‌ ಸಂಧು ಮತ್ತು ವೆಂಕಟೇಶ್‌ ಪ್ರಸಾದ್‌ ಭಾರತದ ಇತರ ಕೋಚ್‌ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.

ಸಂದರ್ಶನದ ಬಳಿಕ ಸಲಹಾ ಸಮಿತಿ, ಸೂಕ್ತ ವ್ಯಕ್ತಿಯನ್ನು ಮಂಡಳಿಯ ಅಧ್ಯಕ್ಷ ಅನುರಾಗ್‌ ಠಾಕೂರ್‌ ಅವರಿಗೆ ಶಿಫಾರಸು ಮಾಡಲಿದೆ. ನಂತರ 24ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿರುವ ಬಿಸಿಸಿಐ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ನೂತನ ಕೋಚ್‌ ಆಯ್ಕೆಯನ್ನು ಘೋಷಿಸಲಾಗುತ್ತದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>