Quantcast
Channel: VijayKarnataka
Viewing all articles
Browse latest Browse all 6795

ವರ್ಷಕ್ಕೊಂದು ರೋಗದ ಮೇಲೆ ಯೋಗ ಸಮರ

$
0
0

ಮುಂದಿನ ವರ್ಷ ಮಧುಮೇಹ ಮಣಿಸುವ ತಂತ್ರ * ಪ್ರಧಾನಿ ಮೋದಿ ಬಿನ್ನಹ

ಚಂಡೀಗಢ: ಪುರಾತನ ಭಾರತೀಯ ಯೋಗ ಸಂಸ್ಕಾರವನ್ನು ಇಡೀ ಜಗತ್ತಿಗೆ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ ಉಪಶಮನ ಶಕ್ತಿಯನ್ನು ಪ್ರತಿಯೊಂದು ರೋಗ, ಕಾಯಿಲೆ ವಿರುದ್ಧ ಸಮರ ಸಾರುವುದಕ್ಕೆ ಬಳಸುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಯೋಗ ಗುರುಗಳು, ತರಬೇತುದಾರರಿಗೆ ಮನವಿ ಮಾಡಿದ್ದಾರೆ.

ಚಂಡೀಗಢದ ಕ್ಯಾಪಿಟಲ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಎರಡನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದಲ್ಲಿ 30000ಕ್ಕೂ ಅಧಿಕ ಮಂದಿಯ ಜತೆ ಯೋಗಾಭ್ಯಾಸ ನಡೆಸುವ ಮುನ್ನ ಅವರು ರೋಗ ನಿಯಂತ್ರಣಕ್ಕೆ ಯೋಗದ ಬಳಕೆ ಬಗೆಗಿನ ಆಶಯಗಳನ್ನು ತೆರೆದಿಟ್ಟರು.

ಮುಂದಿನ ವರ್ಷದಿಂದ ನಾವು ಯೋಗದಿಂದ ರೋಗ ನಿವಾರಣೆಯನ್ನು ಪ್ರಧಾನ ವಸ್ತುವಾಗಿಟ್ಟುಕೊಳ್ಳೋಣ. ಮುಂದಿನ ವರ್ಷದ ಅವಧಿಯಲ್ಲಿ ಮಧುಮೇಹದ ನಿಯಂತ್ರಣಕ್ಕೆ ಯೋಗವನ್ನು ಬಳಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸೋಣ. ಅದರ ನಂತರದ ವರ್ಷ ಇನ್ನೊಂದು ರೋಗವನ್ನು ಆರಿಸಿಕೊಳ್ಳೋಣ ಎಂದು ಹೇಳಿದ ಮೋದಿ, ಯೋಗ ರೋಗದ ವಿರುದ್ಧದ ಪ್ರತ್ಯಾಸ್ತ್ರ ಮಾತ್ರವಲ್ಲ, ಆರೋಗ್ಯದ ಖಾತ್ರಿದಾರ ಎಂದರು.

ಇನ್ನು ಎರಡು ಪ್ರಶಸ್ತಿಗಳು

* ಯೋಗ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದವರಿಗೆ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಘೋಷಣೆ

ದಿವ್ಯಾಂಗರ ಜತೆ ಸೆಲ್ಫಿ

ಮೋದಿ ಅವರು ನೀಲಿ-ಬಿಳಿ ಟೀ ಶರ್ಟ್‌, ಕಪ್ಪು ಪ್ಯಾಂಟ್‌ ಧರಿಸಿ ಬಂದು ಯೋಗಾಸನ ಪ್ರದರ್ಶಿಸಿದ 150 ದಿವ್ಯಾಂಗ ವಿದ್ಯಾರ್ಥಿಗಳ ಜತೆ ಸೆಲ್ಫಿ ತೆಗೆಸಿಕೊಂಡರು.

ಗಮನ ಸೆಳೆದ ವ್ಯವಸ್ಥೆ

* 8 ಬ್ಲಾಕ್‌ಗಳು, 500 ಟ್ರೈನರ್‌ಗಳು

* ನೂರಾರು ಎಲ್‌ಇಡಿ ಸ್ಕ್ರೀನ್‌ಗಳು,

* 300 ಬಯೋ ಟಾಯ್ಲೆಟ್‌ಗಳು

* 30000 ಗುಲಾಬಿ ನೀಲಿ ಮ್ಯಾಟ್‌ಗಳು

* 5000 ಪೊಲೀಸರ ಭದ್ರತೆ

ಮುಕ್ತಿ ಎಂದರೆ ನಿರಾಳತೆ

ಯೋಗದಿಂದ ಮುಕ್ತಿ ದೊರೆಯುತ್ತದೆ ಎನ್ನುತ್ತಾರೆ. ಆದರೆ, ನನ್ನ ಪ್ರಕಾರ, ಅದು ಧಾರ್ಮಿಕವೇ ಆಗಿರಬೇಕಾಗಿಲ್ಲ. ಇದೊಂದು ವಿಜ್ಞಾನ. ನಾನಾ ವಿಷಯಗಳಿಂದ, ಸಮಸ್ಯೆಗಳಿಂದ ದೊರೆಯುವ ನಿರಾಳತೆಯೇ ಮುಕ್ತಿ.

ಪರಲೋಕಕ್ಕಲ್ಲ, ಈ ಬದುಕಿಗೆ

ಇದು ಧಾರ್ಮಿಕ ಚಟುವಟಿಕೆಯಲ್ಲ. ಮನಸಿನಲ್ಲಿ ಶಾಂತಿ, ದೇಹದಲ್ಲಿ ಆರೋಗ್ಯ, ಸಮಾಜದಲ್ಲಿ ಏಕತೆಯ ಕಡೆಗೆ ಇದು ಶಕ್ತಿಯನ್ನು ನೀಡುತ್ತದೆ. ಇದು ಪರಲೋಕ ವಿಜ್ಞಾನವಲ್ಲ, ಬದುಕಿನ ವಿಜ್ಞಾನ.

ಬಜೆಟ್‌ರಹಿತ ಹೆಲ್ತ್‌ ಇನ್ಶೂರೆನ್ಸ್‌

ಯೋಗ ಬಜೆಟ್‌ರಹಿತ ಹೆಲ್ತ್‌ ಇನ್ಶೂರೆನ್ಸ್‌. ಅದಕ್ಕೆ ಬಡವ, ಬಲ್ಲಿದರ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ. ಬುದ್ಧಿವಂತರು, ನಿರಕ್ಷರಿಗಳ ನಡುವೆ ಬೇಧವಿಲ್ಲ.

ಶ್ವೇತ ವಸ್ತ್ರಧಾರಿ ಮೋದಿ

ಬಿಳಿ ಬಣ್ಣದ ಟೀಶರ್ಟ್‌ ಮತ್ತು ಪ್ಯಾಂಟ್‌ ಧರಿಸಿದ್ದ ಮೋದಿ, ಕೊರಳ ಸುತ್ತ ಸ್ಕಾರ್ಫ್‌ ಧರಿಸಿ ಯೋಗಾಸನ ಪ್ರದರ್ಶಿಸಿದರು.

ಗುಲಾಬಿ, ನೀಲಿಯ ರಂಗು

ಎಲ್ಲ 30000 ಯೋಗಾಭ್ಯಾಸಿಗಳಿಗೆ ನೀಡಿದ ಗುಲಾಬಿ ಮತ್ತು ನೀಲಿ ಬಣ್ಣದ ಮ್ಯಾಟ್‌ಗಳು ಇಡೀ ಕ್ರೀಡಾಂಗಣಕ್ಕೆ ರಂಗು ತುಂಬಿತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>