ಅದಕ್ಕಾಗಿ ಬಿಗಿ ಭದ್ರತೆಯನ್ನೂ ನಿಯೋಜಿಸಲಾಗಿತ್ತು. ವಿವಾದದ ನಡುವೆಯೂ ಬತಿನಿ ಗೌಂಡ್ ಕುಟುಂಬ ಈ ಪವಾಡ ಚಿಕಿತ್ಸೆ ನೀಡುವ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದೆ.
ಉಸಿರಾಟದ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾವಿರಾರಿ ಮಂದಿ 'ಪವಾಡ ಔಷಧ' ಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ದೇಶದ ನಾನಾ ಭಾಗಗಳ ಅಸ್ತಮಾ ರೋಗಿಗಳು ಬೆಳಗಿನ ಜಾವದಿಂದಲೇ ಪ್ರಸಾದಕ್ಕಾಗಿ ಕಾಯುತ್ತಿದ್ದರು. ಕೆಲವರೂ 16 ತಾಸು ನಿಂತು ಔಷಧ ಪಡೆದಿದ್ದಾರೆ.
'ಅಸ್ತಮಾ ರೋಗಿಗಳಿಗೆ ಅಚ್ಚರಿಯ ಪರಿಣಾಮ ಬೀರುವುದು ಎಂದು ಕೇಳಿದ್ದೇನೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ನನ್ನ ತಮ್ಮನ್ನು ಇಲ್ಲಿಗೆ ಕರೆತಂದಿದ್ದೇನೆ,'ಎಂದು ಪೂರ್ವ ಗೋದಾವರಿಯ ಮಂಜು ಹೇಳುತ್ತಾರೆ.
ಮಾರ್ಗಶಿರ ಕಾರ್ತಿ (ಮುಂಗಾರು ಆರಂಭ) ಶುರುವಾದ ನಂತರ ಬತಿನಿ ಗೌಂಡ್ ಕುಟುಂಬ ಈ ಪ್ರಸಾದವನ್ನು ನೀಡುವ ರೂಢಿ ಪಾಲಿಸಿಕೊಂಡು ಬಂದಿದೆ. 'ಈ ಔಷಧವನ್ನು ಉಚಿತವಾಗಿ ನೀಡುವ ಮಾತು ಪಡೆದ ಸಂತರೊಬ್ಬರು 1845ರಲ್ಲಿ ಈ ಔಷಧದ ತಯಾರಿಕೆ ವಿಧಾನ ಹೇಳಿಕೊಟ್ಟರು. ಸುಮಾರು 160 ವರ್ಷಗಳಿಂದ ಔಷಧ ನೀಡುತ್ತಿದ್ದೇವೆ,' ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಹಳದಿ ಬಣ್ಣದ ಗಿಡಮೂಲಿಕೆಗಳಿರುವ ಈ ಔಷಧವನ್ನು ಮೂರು ಸೆಂಟಿಮೀಟರ್ ಉದ್ದದ ಜೀವಂತ ಮೀನಿನಲ್ಲಿ ಇರಿಸಿ ರೋಗಿಯ ಗಂಟಲಿನಲ್ಲಿ ಹಾಕಲಾಗುವುದು. ಸಸ್ಯಾಹಾರಿಗಳಿಗೆ ಬೆಲ್ಲದೊಂದಿಗೆ ಪ್ರಸಾದ ಸೇರಿಸಿ ನೀಡಲಾಗುತ್ತದೆ. ಆದರೆ, ಔಷಧ ತಯಾರಿಕೆ ವಿಧಾನದ ರಹಸ್ಯವನ್ನು ಕುಟುಂಬ ಈವರೆಗೂ ಬಯಲು ಮಾಡಿಲ್ಲ.
ಮೀನಿನ ಔಷಧದ ಶಕ್ತಿ ಬಗ್ಗೆ ವಿವಾದ ಎದ್ದ ನಂತರ ಇದಕ್ಕೆ ಪ್ರಸಾದ ಎಂದು ಕರೆಯುವ ರೂಢಿ ಬಂದಿದೆ. ಈ ಅವೈಜ್ಞಾನಿಕ ಪದ್ಧತಿಯನ್ನು ನಿಷೇಧಿಸಬೇಕು ಎಂದು ಕೋರಿ ಕೆಲ ಗುಂಪುಗಳು ನ್ಯಾಯಾಲಯದ ಮೆಟ್ಟಿಲೇರಿವೆ.
ಹೈದರಾಬಾದ್: ಮೀನಿನ ಪ್ರಸಾದಕ್ಕಾಗಿ ನಾಂಪಲ್ಲಿಯ ಎಕ್ಸಿಬಿಷನ್ ಮೈದಾನದಲ್ಲಿ ಬುಧವಾರ 40,000ಕ್ಕೂ ಹೆಚ್ಚು ಮಂದಿ ಸಾಲುಗಟ್ಟಿ ನಿಂತಿದ್ದರು.